Monday, December 12, 2011

ಮಾದಕ ಗೆರೆಗಳ ಮಾರಿಯೋ..

A tribute to great artist Mario miranda,
article published in Samyukta Karnataka, 13/12/2011



Sunday, September 4, 2011

ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera

(Script: Shantala)

ಹೊನ್ನಾಳಿಯಾಂವ ಈಗ `ನಗರ'ದ ರಾಜ





ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಸಚಿವ ಸಂಪುಟದ `ಡೇರ್ಡೆವಿಲ್' ಮಂತ್ರಿ ರೇಣುಕಾಚಾರ್ಯರಿಗೆ ಇದು ನಿಜಕ್ಕೂ ದೊಡ್ಡ ಸವಾಲೇ. ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ನಿಭಾಯಿಸುವುದು ಎಂದರೆ ಅಷ್ಟು ಸುಲಭದ ಮಾತಲ್ಲ, ಎಂಟೆದೆಯ ಬಂಟನೇ ಆಗಿರಬೇಕು. ಈ ವಿಷಯದಲ್ಲಿ ಯುವಶಕ್ತಿ ರೇಣುಕಾಚಾರ್ಯರ ಧೈರ್ಯಸ್ಥೈರ್ಯಗಳನ್ನು ಸಂಶಯಿಸುವ ಹಾಗೇ ಇಲ್ಲ. ಅವರ ಸಾಮಥ್ರ್ಯದ ಆಳ ಬಲ್ಲವರಾಗಿರುವುದರಿಂದಲೋ ಏನೋ ಮುಖ್ಯಮಂತ್ರಿಗಳು ಅವರಿಗೆ ಚಾಮರಾಜನಗರ ಗಡಿ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿದ್ದಾರೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಕೇವಲ ಮುಖ್ಯಮಂತ್ರಿ ಪದವಿಯಲ್ಲಿರುವವರಿಗೆ ಅನ್ವಯವೇ ಹೊರತು, ಮಂತ್ರಿಗಳಾಗಿರುವವರಿಗೆ ಅಲ್ಲ ಅಲ್ಲವೇ. ಹಾಗಾಗಿ ಬೋಲ್ಡ್ಮ್ಯಾನ್ ರೇಣುಕಾ ಆರಾಮವಾಗಿ ಈ ಗಡಿ ಜಿಲ್ಲಾ ಉಸ್ತುವಾರಿ ವಹಿಸಬಹುದಲ್ಲ.
*********************************************************************
ಜೈಹೊ ಜಯಾ





ಇಂಥ ದಾಷ್ಟ್ರ್ಯ ಕೇವಲ ಡಾ. ಜೆ. ಜಯಲಲಿತಾಗೆ ಮಾತ್ರ ಇರುವುದಕ್ಕೆ ಸಾಧ್ಯ! ಹೆಸರಿನಲ್ಲೇ `ಜಯ' ಹೊಂದಿದ್ದರೂ ಕೆಲವೊಮ್ಮೆ ಅಪಜಯ, ಅಪಕೀತರ್ಿಗಳಿಗೆ ತಲೆಯೊಡ್ಡಿದರೂ ಮತ್ತೆ ಫೀನಿಕ್ಸ್ನಂತೆ ಬೂದಿಯಿಂದ ಮೇಲೆದ್ದು ಬರುವ ತಾಕತ್ತು ತಮಿಳುನಾಡಿನ ಈ ಹಾಲಿ ಮುಖ್ಯಮಂತ್ರಿಗೆ ಮಾತ್ರ ಇರುವ ಹಾಗೆ ಕಾಣಿಸುತ್ತದೆ! ತಮ್ಮ ಪರಮವೈರಿ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ ಸಕರ್ಾರ ನಿಮರ್ಿಸಿದ್ದ ಶಾಸಕಾಂಗ ಸಭೆಯ ಹೊಸ ಕಟ್ಟಡವನ್ನ ಅದು ಶಾಸನಸಭೆ ಅಧಿವೇಶನ ನಡೆಸಲು ಲಾಯಕ್ಕಾಗಿಲ್ಲ ಎಂಬ ಕಾರಣ ಕೊಟ್ಟು, ಅಲ್ಲಿ ಬಡಜನರಿಗಾಗಿ ಮಲ್ಟಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ನಡೆಸುವುದಾಗಿ ರಾಜ್ಯದ ವಿಧಾನ ಮಂಡಲದ ಅಧಿವೇಶನದಲ್ಲಿ ಘೋಷಿಸಿರುವುದು  ವ್ಯಾಪಕವಾಗಿ ಶ್ಲಾಘಿಸಲ್ಪಟ್ಟಿದೆ. ಶಾಸನಸಭಾ ಕಟ್ಟಡವೆಂದು ಡಿಎಂಕೆ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಇದರ ಉದ್ಘಾಟನೆಯನ್ನು ಧಾಮ್ಧೂಮಾಗಿ ನೆರವೇರಿಸಲಾಗಿತ್ತು. ಅದ್ಯಾವುದನ್ನೂ ಲೆಕ್ಕಕ್ಕೇ ಇಟ್ಟುಕೊಳ್ಳದ ಜಯಾಡಳಿತ ಚೆನ್ನೈ ನಗರದ ಹೃದಯಭಾಗದಲ್ಲಿರುವ ಈ ಬೃಹತ್ ಕಟ್ಟಡವನ್ನು  ಸೂಪರ್ಸ್ಷೆಷಾಲಿಟಿ ಆಸ್ಪತ್ರೆಯನ್ನಾಗಿಸುವುದರಿಂದ ಬೇರೆ ಯಾರಿಗಲ್ಲದಿದ್ದರೂ ಬಡವರಿಗಂತೂ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಆಶಯ ಜನತಾ ಜನಾರ್ದನರದ್ದು.





ಗಾಂಧಿ ಟೋಪಿಗೆ ಶುಕ್ರದೆಸೆ!






ಹಳೇ ರಾಜಕಾರಣಿಗಳು ಹಾಗೂ ಶಾಲಾ ಫ್ಯಾನ್ಸಿ ಡ್ರೆಸ್ ಸ್ಪಧರ್ೆಗಳಿಗಷ್ಟೆ ಸೀಮಿತವಾಗಿದ್ದ ಗಾಂಧಿ ಟೋಪಿ ಈಗ ಅಣ್ಣಾ ಹಜಾರೆ ಕಾರಣದಿಂದ ನರ್ಸರಿ ಮಕ್ಕಳಿಂದ ಐಐಟಿ ವಿದ್ಯಾಥರ್ಿಗಳ ವರೆಗೆ ಎಲ್ಲರ ತಲೆಮೇಲೆ ದೇಶದ ಮೂಲೆಮೂಲೆಯಲ್ಲೂ ರಾರಾಜಿಸುತ್ತಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಖಾದಿ ಟೋಪಿಗಳು ಮಾರಾಟವಾಗುತ್ತಿವೆ. ದಿನಕ್ಕೆ 100ರಿಂದ 200 ಟೋಪಿಗಳು ಖರೀದಿಯಾಗುತ್ತಿವೆ ಎನ್ನುವ ಖಾದಿ ಭಂಡಾರದ ಮಾಲಿಕರೊಬ್ಬರ ಪ್ರಕಾರ ಖಾದಿ ಟೋಪಿಗಳ ಬೆಲೆ 40 ರಿಂದ 60 ರೂ ವರೆಗೆ ಇದ್ದರೆ ಇದೇ ರೀತಿಯ ಟೆರಿಕಾಟ್ ಟೋಪಿಗೆ ಕೇವಲ 10 ರೂ. ಇಂಥವು ದಿನಕ್ಕೆ 1500ರಷ್ಟು ಮಾರಾಟವಾಗುತ್ತಿವೆಯಂತೆ!  ಒಟ್ಟಿನಲ್ಲಿ ಈಗ ಗಾಂಧಿ ಟೋಪಿಗೆ ಅಣ್ಣಾ ಕಾರಣದಿಂದ ಶುಕ್ರದೆಸೆ! ಎಲ್ಲರ ಟೋಪಿ ಮೇಲೂ `ಮೈ ಅಣ್ಣಾ ಹ್ಞೂಂ'







ಭ್ರಷ್ಟಾಚಾರದ ಬಿಸಿ






ಅಣ್ಣಾ ಹಜಾರೆ ಮಾತೆತ್ತಿದರೆ ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಅನ್ನುತ್ತಾರೆ.. ಅವರೇನು ಮುಸ್ಲಿಮರನ್ನು ನೀವೂ ಬನ್ನಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಕರೆದಿದ್ದಾರೇನು? ಹೀಗಿರುವಾಗ ನೀವೇಕೆ ಈ ಚಳವಳಿಯಲ್ಲಿ ಭಾಗವಹಿಸಬೇಕು? ಅದರ ಅಗತ್ಯವೇನೂ ಇಲ್ಲ ಎಂದು ದೆಹಲಿಯ ಸೈಯದ್ ಇಮಾಮ್ ಬುಖಾರಿ ಹೊರಡಿಸಿದ್ದ ಫಮರ್ಾನಿಗೆ ಆ ಸಮುದಾಯದಲ್ಲಿ ಹೆಚ್ಚಿನ ಪ್ರತಿಕ್ರಿಯೆ ದೊರೆತಿಲ್ಲದ ಹಾಗೆ ಕಾಣುತ್ತದೆ! ಮಾಜಿ ಶಾಸಕ, ಸಂಸದರಿಂದ ಜನ ಸಾಮಾನ್ಯರ ವರೆಗೆ ನೂರಾರು ಮುಸ್ಲಿಮರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆಯವರ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಅಷ್ಟೇಅಲ್ಲ, ತಾವು ರೋಜಾ(ಉಪವಾಸ) ಮಾಡುತ್ತಿದ್ದರೂ ಅಲ್ಲಿನ ಪಾಕಶಾಲೆಯಲ್ಲಿ ಹಸಿದವರಿಗೆ ಊಟ ಬಡಿಸುವ ಸ್ವಯಂಸೇವಕರಾಗಿ ದುಡಿಯುತ್ತಿದ್ದರಂತೆ! ಭ್ರಷ್ಟಾಚಾರದ ಪಿಡುಗು ಕೋಮು, ಜಾತಿ ನೋಡಿ ಕಾಡುವುದಿಲ್ಲ ಎಂಬುದು ಬಹುಶಃ ಬುಖಾರಿಗೆ ಈಗಲಾದರೂ ಅರ್ಥವಾಗುತ್ತದೋ ಏನೋ!

Monday, August 22, 2011

ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera

(Script : Shantala)

ಪ್ರತಿ ದುಃಖದ ಹಿಂದೆ..



ಯಾವ ಕಸರತ್ತು ಮಾಡಿದ್ರೂ ಕೇವಲ ಒಂದು ವಾರದಲ್ಲಿ 2 ಕೆಜಿ ಕೊಬ್ಬು ಕರಗಿಸೋಕೆ ಖಂಡಿತಾ ಸಾಧ್ಯವಾಗುತ್ತಿರಲಿಲ್ಲ! ಅಂಥ ಮಹಿಮೆ ಪರಪ್ಪನ ಅಗ್ರಹಾರ ಜೈಲಿನದ್ದು. ಮನೆಯಲ್ಲಿ ತಿಂದುಂಡು ಸುಖವಾಗಿದ್ದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಜಗದೀಶ್ ಜೈಲು ಸೇರಿದ ಒಂದು ವಾರಕ್ಕೇ ಎರಡು ಕೆಜಿ ಸಣ್ಣಗಾಗಿದ್ದಾರಂತೆ! ಅದೂ ಮನೆ ಊಟ ಉಂಡೇ ಇಷ್ಟೊಂದು ಕ್ಷಿಪ್ರ ಬದಲಾವಣೆಯಾದರೆ ಇನ್ನು ಸೆರೆಮನೆಯ ಅಸಲಿ ಫುಡ್ ಹೊಟ್ಟೆ ಸೇರಿದ್ರೆ ಬಹುಶಃ ಯಾವ ಸ್ಲಿಮ್ಮಿಂಗ್ ಕ್ಯಾಪ್ಸೂಲ್-ಜ್ಯೂಸ್ ಮಾಡದ ಕೆಲಸವನ್ನ ಕಲ್ಲು ಮುದ್ದೆ-ನೀರು ಸಾರು ಮಾಡಿಬಿಟ್ಟಿರುತ್ತಿತ್ತೇನೋ! ಅದಕ್ಕೇ ಬಲ್ಲವರು ಹೇಳೋದು `ಪ್ರತಿ ದುಃಖದ ಹಿಂದೆ ಒಂದು ಸುಖವೂ ಹಿಂಬಾಲಿಸುತ್ತೆ ಅಂತ'!!






ಲಂಚ ನೀಡುವುದೂ ಅಪರಾಧ


ಲಂಚ ತಗೊಳ್ಳೋದು ತಪ್ಪು ಹೇಗೋ ಹಾಗೇ ಕೊಡುವುದೂ ಕೂಡ ಅಪರಾಧ ಎಂದು ಮುಂಬೈ ಹೈಕೋಟರ್್ ಇತ್ತೀಚೆಗೆ ತೀರ್ಪನ್ನಿತ್ತಿದೆ. ಸೊಲ್ಲಾಪುರದಲ್ಲಿ ಪತ್ರಕರ್ತರೊಬ್ಬರು ಪೊಲೀಸ್ ಅಧಿಕಾರಿಯೊಬ್ಬರಿಗೆ 3 ಸಾವಿರ ರೂ ಲಂಚ ನೀಡಲು ಹೋಗಿ ಸಿಕ್ಕಿಬಿದ್ದಿದ್ದರು. ಈ ಲಂಚ ನಿರಾಕರಿಸಿದ ಪೊಲೀಸ್ ಅಧಿಕಾರಿ ತಮಗೆ ರಿಷವತ್ತು ನೀಡಲು ಬಂದವರ ಮೇಲೆ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋಟರ್್ ನೀಡಿದ ತೀಪರ್ಿನಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾನೂನಿನನ್ವಯ ಲಂಚ ನೀಡುವುದು ಈ ಅಪರಾಧಕ್ಕೆ ಕುಮ್ಮಕ್ಕು ನೀಡಿದಂತೆ ಎಂದು ಪರಿಗಣಿಸಲಾಗುವುದು ಮತ್ತು ಈ ದುಷ್ಪ್ರೇರಣೆ ಶಿಕ್ಷಾರ್ಹ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಲಂಚ ಕೊಡುವುದಕ್ಕೆ ಮುನ್ನ ಸರಿಯಾಗಿ ಆಲೋಚಿಸಿ ಮುನ್ನಡೆಯುವುದು ಒಳ್ಳೆಯದು.


ಈ ಅಧಿಕಾರಿಗೇಕೆ ಪದಕ?

ಪ್ರತಿವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸರಿಗೆ ಪದಕ ನೀಡಿ ಸನ್ಮಾನಿಸುವುದು ಸಂಪ್ರದಾಯ. ಹೀಗೆ ಈ ಸಾರಿ ಪದಕ ಪಡೆದವರಲ್ಲಿ ಡಿಐಜಿ ನಳಿನ್ ಪ್ರಭಾತ್ರ ಹೆಸರೂ ಇದೆ. ಕಳೆದ ಏಪ್ರಿಲ್ನಲ್ಲಿ ದಾಂತೇವಾಡಾದಲ್ಲಿ ಮಾವೋವಾದಿಗಳಿಂದ 75 ಸಿಆರ್ಪಿಏಫ್ ಯೋಧರ ಹತ್ಯಾಕಾಂಡಕ್ಕೆ ಈ ನಳಿನ್ ಪ್ರಭಾತ್ ತೆಗೆದುಕೊಂಡ ವಿವೇಚನಾರಹಿತ ನಿಲುವೇ ಕಾರಣ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಿದ್ದರೂ ಪ್ರಭಾತ್ರಿಗೆ 2009ರಲ್ಲಿ ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಆರು ಉಗ್ರರನ್ನು ಹೊಡೆದುರುಳಿಸಿದ ಸಾಹಸಕ್ಕಾಗಿ ಈಗ 2011ರಲ್ಲಿ ಪದಕ ನೀಡಿರುವುದು ವಿಚಿತ್ರವಾಗಿದೆ ಎನಿಸುವುದಿಲ್ಲವೇ! ಮಾವೋಗಳ ವಿರುದ್ಧದ ಕಾಯರ್ಾಚರಣೆಗೂ ಕಾಶ್ಮೀರ ಕಣಿವೆಯಲ್ಲಿನ ಕಾಯರ್ಾಚರಣೆಗೂ ಇರುವ ಅಜಗಜಾಂತರವನ್ನು ತಿಳಿಯದ ಈ ಅಧಿಕಾರಿಗೆ 2009ರಲ್ಲಿ ಆರು ಉಗ್ರವಾದಿಗಳನ್ನು ಕೊಂದು ಹಾಕಿರಬಹುದು ಆದರೆ 2010ರಲ್ಲಿ ನಮ್ಮ 75 ಯೋಧರ ಸಾವಿಗೆ ಕಾರಣಕರ್ತ. ಇಂಥವರಿಗೆ ಶೌರ್ಯ ಪದಕ ನೀಡಿದ್ದು ಎಷ್ಟು ಸಮಂಜಸ ಎಂಬುದು ಬಿಎಸ್ಎಫ್ ಅಧಿಕಾರಿಗಳ ತಕರಾರು.


ಗೃಹಮಂತ್ರಿಯ ಮನೆಗೇ ಕನ್ನ!


ಭಾರತದ ಹಾಲಿ ಗೃಹಸಚಿವ ಪಿ. ಚಿದಂಬರಮ್ ಅವರ ಕುಟುಂಬದ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಂದನೂರು ಗ್ರಾಮದಲ್ಲಿರುವ ಚಿದು ಅವರ ಕುಟುಂಬದ ಮನೆಗೆ ಕಳ್ಳರು ಇತ್ತೀಚೆಗೆ ಕನ್ನ ಹಾಕಿದ್ದಾರೆ. ಈ ಮನೆ ಚಿದಂಬರಮ್ ಹಾಗೂ ಅವರ ಉಳಿದಿಬ್ಬರು ಸಹೋದರರಿಗೆ ಸೇರಿದ್ದಾಗಿದೆ. ಈ ಮನೆಯ ಕಿಟಕಿ ಸರಳುಗಳು ಮತ್ತು ಬಾಗಿಲುಗಳನ್ನು ಮುರಿದು ಕಳ್ಳರು ಒಳಹೊಕ್ಕಿದ್ದಾರೆ. ಭಾರತದ ಗೃಹ ಸಚಿವರ ಮನೆಯೇ ಸುರಕ್ಷಿತವಲ್ಲ ಎಂದ ಮೇಲೆ ಇನ್ನು ಯಾರ ಮನೆ ತಾನೇ ಸುಭದ್ರವಾಗಿರಲು ಸಾಧ್ಯ? ತಮಿಳುನಾಡಿನಲ್ಲಿ ಚಿದು ವೈರಿ ಸಕರ್ಾರ ಅಧಿಕಾರದಲ್ಲಿರುವುದರಿಂದ ಇಂಥ ಘಟನೆಗಳಿಗೆ ಹೆಚ್ಚು ಮಹತ್ವ ನೀಡಬೇಕಿಲ್ಲ ಎಂಬ ಮಾತು ಕೇವಲ ಕ್ಲೀಷೆಯಾಗಬಲ್ಲದಷ್ಟೆ..

ಬದಲಾವಣೆಯ ಬಾವುಟ



ಈ ಬದಲಾವಣೆ ಯಾತಕ್ಕಾಗಿಯೋ ಗೊತ್ತಿಲ್ಲ! ಆದರೆ ಡಿಎಂಕೆ ಪಕ್ಷ ಅಸ್ತಿತ್ವಕ್ಕೆ ಬಂದ 62 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಿದೆ! ಕಾಂಗ್ರೆಸ್ನ ತತ್ವಗಳನ್ನು ಪ್ರಾರಂಭದಿಂದಲೂ ವಿರೋಧಿಸಿಕೊಂಡು ಬಂದಿರುವ ಈ ಅಪ್ಪಟ ದ್ರಾವಿಡ ಪಕ್ಷದವ ಹೈಕಮಾಂಡ್ಗೆ ಇದ್ದಕ್ಕಿದ್ದಂತೇ ಅದೇನನ್ನಿಸಿತೋ ಇಲ್ಲಾ ಜ್ಞಾನೋದಯವಾಯಿತೋ..ಒಟ್ಟಿನಲ್ಲಿ ಚೆನ್ನೈನಲ್ಲಿರುವ ಡಿಎಂಕೆ ಕೇಂದ್ರ ಕಚೇರಿಯ ಆವರಣದಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇಸರಿ ಬಿಳಿ ಹಸಿರು ಬಣ್ಣದ ತಿರಂಗಬಾವುಟ ಈ ಬಾರಿಯ ಸ್ವಾತಂತ್ರ್ಯೋತ್ಸವದಂದು ರಾರಾಜಿಸಿತು!

Monday, August 8, 2011

ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera

ವಾರದ ಗುದ್ದು


ಭ್ರಷ್ಟಾಚಾರವನ್ನು ಮಟ್ಟಾ ಹಾಕಿದರೆ ಭಯೋತ್ಪಾದನೆ ತಂತಾನೆ ಹೇಳಹೆಸರಿಲ್ಲದಂತಾಗುತ್ತದೆ
-ಸಂತೋಷ್ ಹೆಗ್ಡೆ,  ಮಾಜಿ ಲೋಕಾಯುಕ್ತ
























ತಮಿಳುನಾಡಿನಲ್ಲಿ ತಾಳಿಭಾಗ್ಯ


ದೇಶದ ಹೆಣ್ಣುಮಕ್ಕಳೆಲ್ಲ ದೀಪಾವಳಿ ವೇಳೆಗೆ ಚಿನ್ನದ ಬೆಲೆ ಕರೆಂಟು ಹೊಡಿಸುತ್ತಂತೆ ಎಂಬ ಭೀತಿಯಲ್ಲಿ ಅಡುಗೆಮನೆಯ ಡಬ್ಬ, ಸಂದಿಗೊಂದಿಗಳಲ್ಲಿ ಹುದುಗಿಸಿಟ್ಟಿದ್ದ ಪುಡಿ-ಹುಡಿಗಾಸುಗಳನ್ನೂ ಬಿಡದೆ ಚಿನ್ನಬೆಳ್ಳಿ ಅಂಗಡಿ ಮುಂದೆ ಕ್ಯೂ ನಿಂತಿದ್ದರೆ, ತಮಿಳುನಾಡಿನಲ್ಲಿ ಅಮ್ಮ ಜಯಲಲಿತಾ ತನ್ನ ಚುನಾವಣಾ ಆಶ್ವಾಸನೆ ಈಡೇರಿಕೆಗೆ 500 ಕೆಜಿ ಚಿನ್ನ ಖರೀದಿಸಲು ಈ ಸಾಲಿಗೆ 118.18 ಕೋಟಿ ರೂ ಮಂಜೂರು ಮಾಡಿದ್ದಾರೆ. ಈ ಸಾರಿ ಓಟು ಪಡೆದುಕೊಳ್ಳುವ ಸಂದರ್ಭದಲ್ಲಿ ಕೊಟ್ಟ ಮಾತಿಗೆ ತಪ್ಪಲಾರದೆ ಪುರಚ್ಚಿ ತಲೈವಿ, ರಾಜ್ಯದ ಬಡ ಹೆಣ್ಣುಮಕ್ಕಳು ಮದುವೆಗೆ `ತಿರುಮಾಂಗಲ್ಯ' ಮಾಡಿಸಲು ತಲಾ 4 ಗ್ರಾಂ ಚಿನ್ನ ನೀಡುವ ಯೋಜನೆಗೆ ಚಾಲನೆ ನೀಡಿದ್ದಾರೆ. ತಮಿಳುನಾಡು ಸಕರ್ಾರವು ಎಸ್ಬಿಐ ಹಾಗೂ ಇತರೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಗುಣಮಟ್ಟದ ಚಿನ್ನ ಖರೀದಿಸಲು ಮುಂದಾಗಿದ್ದು, ಫಲಾನುಭವಿಗಳಿಗೆ ಟೋಕನ್ ಮೂಲಕ 4 ಗ್ರಾಂ ಚಿನ್ನದ ನಾಣ್ಯ ವಿತರಿಸುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚಚರ್ೆ ನಡೆಯುತ್ತಿದೆ. ಒಟ್ಟಿನಲ್ಲಿ ತಮಿಳು ಹೆಂಗೆಳೆಯರೆಲ್ಲ ಈಗ ಮಾಂಗಲ್ಯ, ಮಾಂಗಲ್ಯ ನಮ್ಮ ಜೀವಕಿಂತ ಮೌಲ್ಯ ಎಂದು ಹಾಡುವ ಕಾಲವಿದಾದರೆ ಸಕರ್ಾರದ ಬೊಕ್ಕಸಕ್ಕೆ ಮಾತ್ರ ಇದು ಖಜಾನೆ ಖಾಲಿಯಾಗುವ ಸಮಯ!
*******************************************************************************
ಕೃಷ್ಣ ಅದೃಷ್ಟವೋ ಅದೃಷ್ಟ!


ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರ ಅದೃಷ್ಟವನ್ನು ಕಂಡು ಹಲಬುವವರೇ ಎಲ್ಲ! ಈ `ಹಲುಬಿಗ'ರಲ್ಲಿ ಹೆಚ್ಚಿನ ಮಂದಿ 60+ಗಳೇ ಎಂದು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಾಗಿಲ್ಲವಷ್ಟೆ. ಆಹಾ.. ವಿದೇಶಾಂಗ ವ್ಯವಹಾರ ಖಾತೆಯಲ್ಲಿದ್ದರೆ ದಿನಕ್ಕೊಬ್ಬ ವಿದೇಶೀ ಸುಂದರಿಯೊಡನೆ ಕೈಕುಲುಕುವ ಫೋಟೋ ಎಲ್ಲ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿತ್ತು.. ಸುದ್ದಿವಾಹಿನಿಗಳಲ್ಲೆಲ್ಲ ಇದೇ ಸುದ್ದಿ.. ಆಹಾ ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ ಎಂದು ಎಸ್.ಎಂ. ಕೃಷ್ಣ ಹಿಲರಿ ಕ್ಲಿಂಟನ್, ಹೀನಾ ರಬ್ಬಾನಿ ಖಾರ್ ಅವರೊಂದಿಗೆ ಕುಶಲೋಪರಿ ನಡೆಸುತ್ತಿರುವ ಫೋಟೊಗಳನ್ನು ಕಂಡವರೆಲ್ಲ ಕನರ್ಾಟಕದ ಈ ಮಾಜಿ ಮುಖ್ಯಮಂತ್ರಿಯ ಅದೃಷ್ಟವನ್ನು ಕಂಡು ಕರುಬಿದವರೇ.  ಈ `ಕರುಬಿಗ'ರಲ್ಲಿ ಮಾಜಿ ರಾಜ್ಯಪಾಲ ಎನ್.ಡಿ. ತಿವಾರಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿರುವುದು ಸತ್ಯವೋ, ಮಿಥ್ಯೆಯೋ ತಿಳಿಯದಾಗಿದೆ!
**************************************************************************************

ದೈತ್ಯರಿಗೆ `ಮಿನಿ'ಯಲ್ಲಿ ನಿರಾಸಕ್ತಿ!





ಮಿನಿ ಕಾರುಗಳನ್ನು ತಯಾರಿಸಲು ದೈತ್ಯ ಕಾರು ಕಂಪನಿಗಳಿಗೆ ಆಸಕ್ತಿ ಇಲ್ಲವಂತೆ! ಎರಡು ವರ್ಷಗಳ ಹಿಂದೆ `ಟಾಟಾ'ದವರು ನ್ಯಾನೋ ಕಾರು ಮಾಡಿ ತೋರಿಸಿದಾಗ ಒಬ್ಬರ ಮೇಲೊಬ್ಬರಂತೆ ತಾವೂ ಪುಟಾಣಿ ಕಾರುಗಳನ್ನು ತಯಾರಿಸುವುದಾಗಿ ಘೋಷಿಸಿದ್ದ ಫೋಡರ್್, ಜನರಲ್ ಮೊಟಾರ್ಸ್, ರೆನಾಲ್ಟ್-ನಿಸ್ಸಾನ್ಗಳೆಲ್ಲ ಈಗ ತಮಗೆ ಈ ಯೋಜನೆಯಲ್ಲಿ ಆಸಕ್ತಿಯಿಲ್ಲ ಎಂದು ಸ್ಟಷ್ಪಪಡಿಸಿವೆ. ಈಗ ಭಾರತ ಹಾಗೂ ಚೀನಾದಲ್ಲಿ ಪುಟಾಣಿ ಕಾರು ಕೊಳ್ಳದೆಯೇ ನೇರವಾಗಿ ಮಧ್ಯಮ ಗಾತ್ರದ ಕಾರು ಕೊಳ್ಳುವಷ್ಟು ಆಥರ್ಿಕವಾಗಿ ಸಶಕ್ತರಾಗುತ್ತಿರುವವರ ಸಂಖ್ಯೆ ದಿನೇದಿನೇ ವೃದ್ಧಿಸುತ್ತಿದೆ. ಹೀಗಾಗಿ ಸುಖಾಸುಮ್ಮನೆ ಮಿನಿ ಕಾರು ತಯಾರಿಸುವುದರಲ್ಲಿ ಅರ್ಥವಿಲ್ಲ. ಟಾಟಾದ `ನ್ಯಾನೋ', ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. ಕೆಳ ಮಧ್ಯಮವರ್ಗದವರೂ ಕೂಡ ನ್ಯಾನೋ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಈಗ ಮಧ್ಯಮ ಗಾತ್ರದ  ಕಾರುಗಳನ್ನು ತಯಾರಿಸುವುದೇ ಲಾಭದಾಯಕ ಎಂದು ಈ ಮೂರೂ ದೈತ್ಯ ಕಾರು ಕಂಪನಿಗಳು ಅಭಿಪ್ರಾಯಪಟ್ಟಿವೆ. ಯಾವ ಕಾರೇ ಬಂದರೂ ನಮ್ಮ ಭಾರತದ ಪ್ರಮುಖ ನಗರಗಳಲ್ಲಿನ ಟ್ರಾಫಿಕ್ ಜಾಮ್ ಸುಧಾರಿಸಲು ಸಾಧ್ಯವಿಲ್ಲ. ಈ ಕಂಪನಿಗಳೆಲ್ಲ ಮಧ್ಯಮ ಗಾತ್ರದ ಕಾರುಗಳಿಗಿಂತ ಆಕಾಶದಲ್ಲಿ ಹಾರಬಲ್ಲ ರೆಕ್ಕೆಯ ಕಾರುಗಳನ್ನು ತಯಾರಿಸುವುದೇ ಸೂಕ್ತವಲ್ಲವೇ

Monday, August 1, 2011

ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera

( Script: Shantala, Illustrations: Satish Sringeri) 

 ವಾರದ ಗುದ್ದು





" ಒಂದೊಮ್ಮೆ ಕಾರ್ಯಕರ್ತರ ಪಕ್ಷವಾಗಿದ್ದ ಬಿಜೆಪಿ ಈಗ ಪುತ್ರ, ಪುತ್ರಿಯರು ಮತ್ತು ಬಂಧುಗಳ ಪಕ್ಷವಾಗಿದೆ. ಪ್ರಜಾತಂತ್ರಕ್ಕೆ ಬದಲಾಗಿ `ಪರಿವಾರತಂತ್ರ' ಸಂಸ್ಕೃತಿ ಬಿಜೆಪಿಯಲ್ಲಿಂದು ವಿಜೃಂಬಿಸುತ್ತಿರುವುದು ವಿಷಾದನೀಯ"
-ಶಾಂತಕುಮಾರ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ









ಭ್ರಷ್ಟಾಚಾರ ಸಕ್ರಮಗೊಳಿಸಬೇಕಂತೆ!


ಮಹಾತ್ಮ ಗಾಂಧಿ ಈ ಮಾತನ್ನೇನಾದರೂ ಕೇಳಿದ್ದರೆ ಏನು  ಮಾಡುತ್ತಿದ್ದರೋ ಇಲ್ಲಾ ಮಾಡಿಕೊಳ್ಳುತ್ತಿದ್ದರೋ ಗೊತ್ತಿಲ್ಲ! ಲಂಚ ತಗೊಳ್ಳೋದನ್ನ ಸಕ್ರಮಗೊಳಿಸುವುದರಿಂದ ಭ್ರಷ್ಟಾಚಾರದ ಪಿಡುಗನ್ನು ನಿಯಂತ್ರಿಸಬಹುದು ಎಂದು ದಿಲ್ಲಿಯಲ್ಲಿ ದಬರ್ಾರ್ ನಡೆಸುವವರೇ ಬಹಿರಂಗವಾಗಿ ಹೇಳುತ್ತಾರೆಂದರೆ.. ಅದೂ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಅಣ್ಣಾ ಹಜಾರೆ ನೇತೃತ್ವದ ಆಂದೋಲನದ ಕಾವು ಇನ್ನೂ ಆರುವ ಮೊದಲೇ! ಇರುವುದರಲ್ಲಿ ಪರವಾಗಿಲ್ಲ ಎಂಬಂತಿರುವ ಕೇಂದ್ರ ವಿತ್ತ ಸಚಿವ ಪ್ರಣವ್ ಮುಖಜರ್ಿ ಅವರ ಪ್ರಧಾನ ಸಲಹೆಗಾರ ಕೌಶಿಕ್ ಬಸು ಅವರ ಪ್ರಕಾರ ವಿಶ್ವದ ಪರಮಭ್ರಷ್ಟ ದೇಶಗಳಲ್ಲೊಂದಾಗಿರುವ ಭಾರತದಲ್ಲಿ ಲಂಚದ ಪಿಡುಗನ್ನು ಮಟ್ಟಾ ಹಾಕಲು ಭ್ರಷ್ಟಾಚಾರವನ್ನ ಸಕ್ರಮಗೊಳಿಸಬೇಕು. ಎಲ್ಲಾ ಅಕ್ರಮಗಳನ್ನು ಸಕ್ರಮಗೊಳಿಸುತ್ತಾ ಹೋದರೆ ಸತ್ಯ, ಸತ್ಯಾಗ್ರಹಗಳಿಗೆ ಬೆಲೆಯೇ ಇರುವುದಿಲ್ಲ. ಭ್ರಷ್ಟಾಚಾರವನ್ನೇ ಸಕ್ರಮಗೊಳಿಸಬೇಕೆಂದು ದೇಶದ ಆಥರ್ಿಕ ಸೂತ್ರಗಳನ್ನು ಹಿಡಿದವರು ಅಭಿಪ್ರಾಯಪಡುವುದಾದರೆ, ವೇಶ್ಯಾವಾಟಿಕೆಯನ್ನೂ ಸಕ್ರಮಗೊಳಿಸಬೇಕೆಂಬ ಕೂಗು ಕೇಳಿಬಂದರೂ ಆಶ್ಚರ್ಯಪಡಬೇಕಿಲ್ಲ!
*********************************************************************
ಕಲ್ಮಾಡಿ ಮರೆಗುಳಿತನದ ರೋಗಿ!

ಕಳ್ಳನಿಗೊಂದು ಪಿಳ್ಳೆ ನೆವ ಅನ್ನೋ ಗಾದೆ ಸದ್ಯದ ಮಟ್ಟಿಗೆ ಸುರೇಶ್ ಕಲ್ಮಾಡಿಗೆ ಸೂಕ್ತವಾಗಿ ಅನ್ವಯಿಸುತ್ತದೆ. ಕಾಮನ್ವೆಲ್ತ್ ಕ್ರೀಡಾಕೂಟದ ಬಹುಕೋಟಿ ಅಕ್ರಮ ಹಗರಣದ ಪ್ರಮುಖ ಆರೋಪಿ ಕಲ್ಮಾಡಿ ತಿಹಾರ್ ಜೈಲಿನಿಂದ ಹೊರಬರಲು ಶತಾಯಗತಾಯ ಪ್ರಯತ್ನಿಸುತ್ತಿದ್ದು, ಅದಕ್ಕೆ ಡಿಮೆನ್ಶಿಯಾ(ವೃದ್ಧಾಪ್ಯದಲ್ಲಿ ಬರುವ ಮರೆಗುಳಿತನ) ರೋಗದ ಆಸರೆ ಪಡೆಯಲು ಮುಂದಾಗಿದ್ದಾರೆ! ಕಳೆದ ನಾಲ್ಕೈದು ವರ್ಷಗಳಿಂದ ಈ  ಕಾಯಿಲೆಯಿಂದ ತಮ್ಮ ಕಕ್ಷಿದಾರರು ಬಳಲುತ್ತಿದ್ದು, ಅವರಿಗೆ ಬಹುಶಃ ಬಹುಕೋಟಿ ಹಗರಣದ ವಿಚಾರಣೆ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಗಳಂತೆ ಸಹಕರಿಸಲು ಸಾಧ್ಯವಾಗದೆ ಹೋಗಬಹುದು ಎಂಬುದು ಕಲ್ಮಾಡಿ ಪರ ವಕೀಲರ ಅಂಬೋಣ. ಕೋಟಿಗಟ್ಟಲೆ ಹಣ ಗುಳುಂ ಮಾಡುವ ಸಂದರ್ಭದಲ್ಲಿ ಯಾವುದೇ ಸಮಸ್ಯೆ ನೀಡದ ಡಿಮೆನ್ಶಿಯಾ ಈಗ ತಿಹಾರ್ ಜೈಲಿನಲ್ಲಿರುವ ಸಂದರ್ಭದಲ್ಲಿ ಕಾಣಿಸಿಕೊಂಡಿರುವುದರ ಜೊತೆಗೆ ಈ ರೋಗ ಪುಣೆಯ ಈ ಸಂಸದರಿಗೆ ಸಂಸತ್ ಅಧಿವೇಶನದಲ್ಲಿ ಭಾಗವಹಿಸುವುದಕ್ಕೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲವೇ ಎಂದು ಆಶ್ಚರ್ಯವಾಗುತ್ತಿದೆ!
*************************************************************************
ಅಮರ್ ಬಾಯಿ ಬಿಟ್ಟರೆ
ಮುಲಾಯಂ ಬಣ್ಣ ಬಯಲು!



ಹಿಂದೊಂದು ಕಾಲದಲ್ಲಿ ಎರಡು ದೇಹ ಒಂದು ಆತ್ಮವಾಗಿದ್ದ, ಗೆಳೆತನಕ್ಕೆ ಮಾದರಿಯಾಗಿದ್ದ ಮುಲಾಯಂಸಿಂಗ್ ಯಾದವ್, ಅಮರ್ಸಿಂಗ್ ಜೋಡಿ ನಂತರ ಎಣ್ಣೆ ಸೀಗೆಕಾಯಿಗಳಾಗಿ ದೂರ ಸಿಡಿದು ಹೋಗಿರುವುದು ಗೊತ್ತಿದ್ದೇ. ಆದರೆ ಇದೀಗ ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಮರ್ಸಿಂಗ್ರನ್ನು ವಿಚಾರಣೆಗೊಳಪಡಿಸಿ ಮಾನಸಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಮುಲಾಯಂಜಿ ಹೇಳಿಕೆ ನೀಡಿರುವುದು, ಸದ್ಯ ಸಂಕಷ್ಟದಲ್ಲಿರುವ ತಮ್ಮ ಮಾಜಿ ಗೆಳೆಯನಿಗೆ ಆಸರೆಯಾಗಿ ಅಲ್ಲ, ಬದಲಿಗೆ ಸ್ವಯಂ ಬಚಾವೋ ಸಲುವಾಗಿ ಎಂಬುದು ಕಟುಸತ್ಯ. ಅಮರ್ ಬಾಯಿ ಬಿಟ್ಟರೆ ತನ್ನ ಬಣ್ಣ ಬಯಲಾಗುತ್ತೆ ಎಂಬುದನ್ನು ಚೆನ್ನಾಗಿ ಮನಗಂಡಿರುವ ಉತ್ತರಪ್ರದೇಶದ ಈ ಮಾಜಿ ಮುಖ್ಯಮಂತ್ರಿಗೆ,  ದೆಹಲಿ ಪೊಲೀಸರು ಯಾವ ಕ್ಷಣದಲ್ಲಿ ಬೇಕಾದರೂ ತಮ್ಮ ಮನೆ ಬಾಗಿಲು ತಟ್ಟಬಹುದು ಎಂಬ ಹೆದರಿಕೆ ತಮ್ಮ ಮಾಜಿ ಜಿಗರಿದೋಸ್ತ್ ಪರ ಹೇಳಿಕೆ ನೀಡಲು ಪ್ರೇರೇಪಿಸಿರಬಹುದು.

*************************************************************
ಮೆಣಸಿನಕಾಯಿ ಬಾಂಬ್!

ಚಟ್ನಿ, ಉಪ್ಪಿನಕಾಯಿ, ಬಜ್ಜಿ, ಬೋಂಡಾಗಳಿಗೆ ಸೀಮಿತವಾಗಿದ್ದ ಮೆಣಸಿನಕಾಯಿಯಿಂದ ಬಾಂಬ್ ತಯಾರಿಸುವುದರ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ಭಾರತದ ಮೆಣಸಿನಕಾಯಿ ವಿಪರೀತ ಚುರುಕಾಗಿದ್ದು ಇದನ್ನು ಬಳಸಿ 81 ಮಿಮೀ ಕೈ ಬಾಂಬ್ ತಯಾರಿಸಲಾಗಿದ್ದು, ಈಗಾಗಲೇ ಭಾರತೀಯ ಸೇನೆಯ ಅಸ್ತ್ರಗಳಲ್ಲಿ ಒಂದಾಗಿ ಸೇರ್ಪಡೆಯೂ ಆಗಿರುವ . ಈ ಖಾರಾ ಬಾಂಬ್ ಇತ್ತೀಚಿಗೆ ಇಂಗ್ಲೆಂಡ್ ಮಾರುಕಟ್ಟೆಗೂ ಲಗ್ಗೆ ಇಟ್ಟು ಅಲ್ಲೂ ಭಾರೀ ಪ್ರಶಂಸೆ, ಬೇಡಿಕೆ ಗಿಟ್ಟಿಸುವಲ್ಲಿ ಯಶಸ್ವೀಯಾಗಿದೆ. ಗುಂಪು ಚೆದುರಿಸಲು ಅಪಾಯಕಾರಿಯಲ್ಲದ ಮೆಣಸಿನಪುಡಿಯ ಹ್ಯಾಂಡ್ ಗ್ರೆನೇಡ್ ಬಳಸುವ ಭಾರತದ ಕ್ರಮವನ್ನು ವಿಶ್ವದ ಇತರೆ ರಾಷ್ಟ್ರಗಳು ಶ್ಲಾಘಿಸಿದ್ದು, ಈ ಬಾಂಬನ್ನು `ನಾಗಾ ವೈಪರ್ ಚಿಲ್ಲಿ' ಎಂಬ ತಳಿಯನ್ನು ಬಳಸಿ ಸಿದ್ಧಪಡಿಸಲಾಗುತ್ತಿದೆ. ಸಿಯಾಚಿನ್ ಹಿಮ ಪ್ರದೇಶದಲ್ಲಿನ ಚಳಿಯನ್ನು ಎದುರಿಸಲು ದೇಹದಲ್ಲಿ ಉಷ್ಣವನ್ನು ಹೆಚ್ಚಿಸಲು ವಿಶ್ವದ ಅತಿಖಾರದ ಮೆಣಸಿನಕಾಯಿಯಾದ `ಭೂತ್ ಜಲೋಕಿಯಾ'ವನ್ನು ಈಗಾಗಲೇ ಬಳಸಲಾಗಿದ್ದು, ನಾಗಾ ವೈಪರ್ ಚಿಲ್ಲಿಯ ಕೈಬಾಂಬ್ನ್ನು ಪುಂಡು ಆನೆಗಳ ನಿಯಂತ್ರಣಕ್ಕೂ ಮಧ್ಯಪ್ರದೇಶದಲ್ಲಿ ಬಳಸಲಾಗುತ್ತಿದೆ. ಈ ಮೆಣಸಿನಕಾಯಿ ಗ್ರೆನೇಡ್ ದಾಳಿಗೆ ತುತ್ತಾದವರು ಅವರ ಜನ್ಮೇಪಿ ಖಾರದ ಹೆಸರೆತ್ತುವ ಸಾಹಸ ಮಾಡುವುದಿಲ್ಲವಂತೆ!




**********************************************************************
ಚೀನಾದಲ್ಲಿ ಈಗ ಆ್ಯಪಲ್ ಯುಗ


ಅಮೆರಿಕಾ ಆದಿಯಾಗಿ ವಿಶ್ವದ ಎಲ್ಲ ಮಾರುಕಟ್ಟೆಗಳಲ್ಲಿ `ಮೇಡ್ ಇನ್ ಚೈನಾ' ಸಾಮಗ್ರಿಗಳ ಪಾರುಪತ್ಯವಾದರೆ ಚೀನಾದಲ್ಲಿ ಮಾತ್ರ ಈಗ ಆ್ಯಪಲ್ ಯುಗ! ರಾಜಧಾನಿ ಬೀಜಿಂಗ್ ಹಾಗೂ ಶಾಂಘೈಗಳಲ್ಲಿ ತಲಾ ಎರಡು `ಆ್ಯಪಲ್ ಸ್ಟೋರ್' ಪ್ರಾರಂಭವಾಗಿದ್ದು ಇಲ್ಲಿನ ಜನಜಂಗುಳಿ ನಿಯಂತ್ರಿಸುವುದೇ ಸಿಬ್ಬಂದಿಗೆ ದೊಡ್ಡ ತಾಪತ್ರಯವಂತೆ! 16000 ಚದರ ಅಡಿ ವಿಸ್ತೀರ್ಣದ ಬೃಹತ್ ಮಳಿಗೆಯಾಗಿದ್ದರೂ ಈ ಗ್ಯಾಡ್ಜೆಟ್ ಸ್ಟೋರ್ ಒಳಹೊಕ್ಕು ಹೊರಬರಲು ಹರಸಾಹಸ ಪಡಲೇಬೇಕಂತೆ! ಟ್ವಿಟ್ಟರ್, ಫೇಸ್ಬುಕ್, ಗೂಗಲ್, ಗೂಗಲ್ ಪ್ಲಸ್ಗಳನ್ನು ಗಾವುದ ದೂರ ಇರಿಸಿರುವ ಚೀನಾದ ಕಮ್ಯುನಿಸ್ಟ್ ಆಡಳಿತವೂ ಆ್ಯಪಲ್ನ ನಿತ್ಯನೂತನ ಉತ್ಪನ್ನಗಳಿಗೆ ಮಾರುಹೋಗಿದೆಯಂತೆ! 5ಜಿ ಐಫೋನ್, ಟಚ್, ಐಪಾಡ್, ಐಪಾಡ್-2, ಮ್ಯಾಕ್ಬುಕ್ ಮೊದಲಾದ ಆ್ಯಪಲ್ ಉತ್ಪನ್ನಗಳನ್ನು ಕಂಡೊಡನೆ ಸಿಡಕಲು ಮೋರೆಯ ಚೀನೀ ಅಧಿಕಾರಿಗಳೇ ನಸುನಗೆ ಬೀರುತ್ತಾರೆಂದರೆ ಇನ್ನು ಹದಿಹರೆಯದವರು ಈ ಗ್ಯಾಡ್ಜೆಟ್ಗಳ ಫ್ಯಾನ್ಗಳಾಗದಿರಲು ಸಾಧ್ಯವೇ? ಅಮೆರಿಕೆಯ ಮನ್ಹಾಟನ್ನ ಫಿಫ್ತ್ ಅವೆನ್ಯೂನಲ್ಲಿರುವ ಆ್ಯಪಲ್ ಸ್ಟೋರ್ನ ಆದಾಯಕ್ಕಿಂತಲೂ ಬೀಜಿಂಗ್, ಶಾಂಘೈಗಳಲ್ಲಿರುವ ಈ ಕಂಪನಿಯ ಮಳಿಗೆಗಳಿಂದ ಹೆಚ್ಚಿನ ಆದಾಯವಿದೆಯೆಂದರೆ ಚೀನೀಯರು ಅದ್ಯಾವ ಪರಿಯಲ್ಲಿ ಆ್ಯಪಲ್ಗೆ ಮಾರುಹೋಗಿದ್ದಾರೆ ಎಂಬುದು ತಿಳಿಯುತ್ತದಷ್ಟೆ..

-ಶಾಂತಲಾ

Tuesday, July 26, 2011

ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera

 ( Script: Shantala, Illustrations: Satish Sringeri) 


ವಾರದ ಗುದ್ದು



ರಾಜ್ಯಸರ್ಕಾರ ಇಲ್ಲಿಯವರೆಗೆ ಅದೆಷ್ಟು ಸುಳ್ಳು ಪ್ರಮಾಣಪತ್ರಗಳನ್ನು ಕೊಟ್ಟಿದೆಯೋ! ಇವುಗಳನ್ನು ಆಧರಿಸಿ ನಾವು ಅದೆಷ್ಟು ತಪ್ಪು ಆದೇಶಗಳನ್ನು ನೀಡಿದ್ದೇವೋ ಆ ದೇವರಿಗೇ ಗೊತ್ತು!!
-ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಜೆ.ಎಸ್. ಕೆಹರ್

***********************************************************************

ಹಿಮಾಲಯಕ್ಕೆ ನಿತ್ಯಾನಂದ ಯಾತ್ರೆ


ಸೊಂಟಲಿನಿ.. ಅಲ್ಲಲ್ಲ ಕುಂಡಲಿನಿ ಯೋಗದ ಸಾಕ್ಷಾತ್ಕಾರವಾದ ನಂತರ ಮತ್ತೆ ಇನ್ಯಾವ ಸಿದ್ಧಿಗಾಗಿ `ಶ್ರೀ' ನಿತ್ಯಾನಂದಸ್ವಾಮಿ ಹಿಮಾಲಯಕ್ಕೆ ಹೊರಟಿದ್ದಾರೋ ಗೊತ್ತಿಲ್ಲ! ಗುರುಪೂಣರ್ಿಮೆಯ ದಿನದಂದು ಬೆಂಗಳೂರಿನ ಬಿಡದಿ ಬಳಿಯ ಆಶ್ರಮದಲ್ಲಿ ತಮ್ಮ ಭಕ್ತಾದಿಗಳಿಗೆಲ್ಲ ಕುಂಡಲಿನಿಯ ಸಾಕ್ಷಾತ್ಕಾರಗೊಳಿಸಿ ಅವರೆನ್ನೆಲ್ಲ ಕಪ್ಪೆ ಕುಪ್ಪಳಿಸುವ ಕುಣಿತದ ಮೂಲಕ ಧನ್ಯರಾಗಿಸಿದ್ದು ಮಾಧ್ಯಮಗಳಲ್ಲೆಲ್ಲ ಬಿಸಿಬಿಸಿ ಸುದ್ದಿ-ಚಚರ್ೆಗಳಿಗೆ ಆಹಾರವಾಗುತ್ತಿದ್ದಂತೇ ಮಾನಸ ಸರೋವರ ಯಾತ್ರೆಯ ನೆಪದಲ್ಲಿ ನಿತ್ಯಾನಂದರು ಹಿಮಾಲಯದತ್ತ ಮುಖ ಮಾಡಿದ್ದಾರೆ. ಡಿಸೆಂಬರ್ನಲ್ಲಿ ಮಾನಸ ಸರೋವರದಿಂದ ಹಿಂತಿರುಗಿದಾಗ ಭಕ್ತಾದಿಗಳಿಗೆ ಸೊಂಟಲಿನಿ ಸ್ಸಾರಿ ಕುಂಡಲಿನಿ ಭಾಗ-2ರ ಸಾಕ್ಷಾತ್ಕಾರ ಮಾಡಿಸುತ್ತಾರೋ ಏನೋ ಕಾದು ನೋಡಬೇಕು!!
************************************************







ಪಿಜ್ಜಾ ಬರ್ಗರ್ ಔಟ್
ದಾಲ್ ರೋಟಿ ಇನ್



ಶಾಲಾಕಾಲೇಜುಗಳ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ ಪಿಜ್ಜಾ ಬರ್ಗರ್ ಹಾವಳಿ ವಿಪರೀತವಾಗಿರುವುದು ಕೊನೆಗೂ ಕೇಂದ್ರ ಸಕರ್ಾರದ ಗಮನಕ್ಕೆ ಬಂದಿದ್ದು ಈ ಜಂಕ್ಫುಡ್ ಮಾರಾಟಕ್ಕೆ(ವಿದ್ಯಾ ಸಂಸ್ಥೆಗಳ ಬಳಿ) ಕಡಿವಾಣ ಹಾಕಿ ಅವುಗಳ ಬದಲಿಗೆ  ದಾಲ್, ರೋಟಿ,(ಕರ್ನಾಟಕದಲ್ಲಿ ಬಹುಶಃ ರಾಗಿ ರೊಟ್ಟಿ, ಉಚ್ಚೆಳ್ಚಟ್ನಿ) ಮೊಳಕೆಕಾಳುಗಳಂಥ ಪೌಷ್ಠಿಕ ಆಹಾರ ಲಭ್ಯವಾಗುವಂತೆ ಕ್ರಮ ಕೈಗೊಳ್ಳವುದಾಗಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮುಚ್ಚಳಿಕೆ ಬರೆದುಕೊಟ್ಟಿದೆ. ಈ ಮೇಲೆ ತಿಳಿಸಿದ್ದಷ್ಟೇ ಅಲ್ಲದೆ ಮತ್ಯಾವುದಾದರೂ ಪೌಷ್ಠಿಕ ಆಹಾರಗಳ ಬಗ್ಗೆ ಮಾಹಿತಿ ಇದ್ದಲ್ಲಿ ಅದನ್ನು ದಯಮಾಡಿ ತಿಳಿಸಿ ಎಂದು ಸಕರ್ಾರ ಸಾರ್ವಜನಿಕರು, ಸಂಘಸಂಸ್ಥೆಗಳಲ್ಲಿ ಮನವಿ ಮಾಡಿಕೊಂಡಿದೆ.












ತೀರಾ ಇತ್ತೀಚಿನ ವರೆಗೆ ಕೇಂದ್ರದಲ್ಲಿ ಸೂಪರ್ಫಾಸ್ಟ್ ರೈಲು ಬಿಡುತ್ತಿದ್ದ ಮಮತಕ್ಕ, ಈಗ ಅದೇ ಸ್ಪೀಡ್ನಲ್ಲಿ ತನ್ನ ತವರಲ್ಲಿ ಆಡಳಿತ ಸುಧಾರಣೆ ಶುರು ಮಾಡಿದ್ದಾರೆ. ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವೆಸ್ಟ್ ಬೆಂಗಾಲ್ ಹೆಸರಿನಲ್ಲಿರುವ `ವೆಸ್ಟ್'ನ ಇತಿಹಾಸದ ಪುಟಗಳಿಗೆ ಸೇರಿಸಿ ನಮಗೆ `ಬೆಂಗಾಲ್' ಮಾತ್ರ ಸಾಕು ಎಂದು ಹೇಳಿ ವಿರೋಧಿ ಕಮ್ಯುನಿಸ್ಟರೂ ತಲೆಯಾಡಿಸುವಂತೆ ಮಾಡಿದ ದೀದಿ ಇದೀಗ ರಾತೋರಾತ್ರಿ ಗೂರ್ಖಾಗಳಿಗೆ ಸ್ವಾಯತ್ತ ಆಡಳಿತ ನಡೆಸಲು ಹೆಚ್ಚಿನ ಅಧಿಕಾರ ನೀಡಿ ರಾಜ್ಯಾದ್ಯಂತ `ಅಪ್ನಾ ಮೊಮ್ತಾದಿ(ಮಮತಾದೀದಿ) ಮಹಾನ್' ಆಗಿಬಿಟ್ಟಿದ್ದಾರೆ!








ದೋಸ್ತಿ ಎಲ್ಲಿಯವರೆಗೆ?





ಯೇ ದೋಸ್ತಿ ಹಮ್ ನಹೀ ಥೋಡೆಂಗೆ ಎನ್ನುತ್ತಾ ಗೆಳೆತನದ ಫೆವಿಕಾಲ್ ಅಂಟಿಸಿಕೊಂಡಿದ್ದ ಭಾರತೀಯ ಕ್ರಿಕೆಟ್ ತಂಡದ ಮಹೇಂದ್ರಸಿಂಗ್ ಧೋನಿ ಹಾಗೂ ಹರ್ಬಜನ್ಸಿಂಗ್ ಕೇವಲ ಒಂದು ಜಾಹಿರಾತಿನ ಕಾರಣದಿಂದಾಗಿ ನಾನೊಂದು ತೀರ ನೀನೊಂದು ತೀರ..ಆಗಿ ನಿಂತಿದ್ದಾರೆ. ಧೋನಿ ನೀಡುತ್ತಿರುವ ಮೆಕ್ಡೊವೆಲ್ನ ನಂ.1 ಪ್ಲಾಟಿನಂ ಸೋಡಾ ಜಾಹಿರಾತು ತಾವು ಪ್ರತಿನಿಧಿಸುತ್ತಿರುವ ರಾಯಲ್ಸ್ಟಾಗ್ ಜಾಹಿರಾತನ್ನು ಬಹಿರಂಗವಾಗಿ ಹೀಯಾಳಿಸಿದೆ ಎಂದು ಕ್ರಿಕೆಟ್ ತಂಡದ  ಮಿಸ್ಟರ್ ಕಿರಿಕ್ ಎಂದೇ ಜನಜನಿತರಾಗಿರುವ ಹರ್ಬಜನ್, ಕಿಂಗ್ಫಿಶರ್ ಸಂಸ್ಥೆಯ ವಿಜಯ್ ಮಲ್ಯ ಹಾಗೂ ಇತರರಿಗೆ ನೊಟೀಸು ಕೊಟ್ಟಿದ್ದಾರಂತೆ! ಭಜ್ಜಿ ಗೆಣೆಕಾರ ಧೋನಿಗೆ ನೇರವಾಗಿ ನೊಟೀಸು ನೀಡದಿದ್ದರೂ ಇದು ವೃತ್ತಿ ಮತ್ಸರದ ಇನ್ನೊಂದು ರೂಪ ಎನ್ನುತ್ತಾರೆ ಇವರಿಬ್ಬರ ಆಪ್ತಮಿತ್ರರು..





Sunday, July 17, 2011

ನ್ಯೂಸ್ಡೈಜೆಸ್ಟ್ ----- NEWSDIGEST....weekly column( Karmaveera weekly)

( Script: Shantala, Illustrations: Satish Sringeri)

ವಾರದಗುದ್ದು!
`ರೈಲು ಅಪಘಾತದ ಸ್ಥಳಕ್ಕೆ ಈಗ ನಾನ್ಯಾಕೆ ಭೇಟಿ ನೀಡಬೇಕು? ನಾನೀಗ ರೈಲ್ವೆ ಸಚಿವನಲ್ಲ. ಆ ಖಾತೆ ಈಗ ಮನಮೋಹನ್ಸಿಂಗ್ರಿಗೆ ಸೇರಿದ್ದು'
-ಮುಕುಲ್ರಾಯ್, ಕೇಂದ್ರ ಬಂದರು ಖಾತೆ ರಾಜ್ಯ ಸಚಿವರು


*************************************************************************************************

ಸಾಲಗಾರರಾಗಿ ಪ್ರಶಸ್ತಿ ಗಳಿಸಿ!


ಬೆಸ್ಟ್ ಫೈನಾನ್ಸ್ ಮ್ಯಾನೆಜ್ಮೆಂಟ್ ಎಂದರೇನು? ಅಂತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅವಾಡರ್್ ಕೊಟ್ಟವರನ್ನು ಒಂದು ಕ್ಲಾರಿಫಿಕೇಷನ್ ಕೇಳೋದು ಒಳ್ಳೆಯದು. ಒಂದಲ್ಲ ಎರಡಲ್ಲ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಸಾಲದ ಪರ್ವತವನ್ನೇ ತಲೆ ಮೇಲೆ ಹೊತ್ತುಕೊಂಡಿರುವ ಬಿಬಿಎಂಪಿಯ ಯಾವ ವಿಭಾಗದಲ್ಲಿ ಹಣಕಾಸು ನಿರ್ವಹಣೆ ಅತ್ಯುತ್ತಮವಾಗಿದೆ ಎಂಬುದನ್ನು ಅಖಿಲಭಾರತ ಸ್ಥಳೀಯ ಆಡಳಿತ ಸಂಸ್ಥೆಯೇ ವಿವರಣೆ ನೀಡಿದರೆ ಸೂಕ್ತ. ಏಕೆಂದರೆ ಬಿಬಿಎಂಪಿಯ ತಲೆ ಮೇಲೆ ಅಮೋಘ 2923 ಕೋಟಿ ರೂಪಾಯಿಗಳ ಸಾಲದ ಶೂಲೆ ತೂಗುತ್ತಿದೆ! ವಸ್ತುಸ್ಥಿತಿ ಹೀಗಿರುವಾಗ ನಮಗೆ ನಗರ ರತ್ನ ಪ್ರಶಸ್ತಿ ಬಂದಿದ್ದಾರೂ ಹೇಗೆ ಎಂದು ಕೇವಲ ನಾಗರಿಕರಷ್ಟೇ ಅಲ್ಲ, ಸ್ವತಃ ಬಿಬಿಎಂಪಿ ಅಧಿಕಾರಿಗಳೇ ಗೊಂದಲದಲ್ಲಿದ್ದಾರಂತೆ! ಘನ ತ್ಯಾಜ್ಯ ನಿರ್ವಹಣೆಗೆ ಬಹುಶಃ ಪ್ರಶಸ್ತಿ ಬಂದಿದೆ ಎಂಬ ಅವರ ಲೆಕ್ಕಾಚಾರ ತಲೆಕೆಳಗಾಗಿದ್ದು ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ನೀಡುವ ವಿವರಣೆ ಕೇಳಿದಾಗ!

*************************************************************
ಎಚ್ಡಿಕೆ ಉಪವಾಸಕ್ಕೆ ರಿಲೀವರ್ ಸಿಗಲಿಲ್ಲವಂತೆ!


ಮುಖ್ಯಮಂತ್ರಿಗಳ ವಿರುದ್ಧ ರಣಧೀರ ಕಂಠೀರವನ ರೇಂಜ್ನಲ್ಲಿ ಹ್ಞೂಂಕರಿಸಿ, ಬಿಜೆಪಿ ಸಕರ್ಾರಕ್ಕೆ ಹೇಗಾದರೂ ಸರಿ ಒಮ್ಮೆ ಬುದ್ಧಿ ಕಲಿಸಿಯೇ ತೀರುತ್ತೇನೆ ಎಂಬ ಜೋಶ್ನಲ್ಲೇ ಉಪವಾಸ ಪ್ರಾರಂಭಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಂದೇ ದಿನಕ್ಕೆ ಸುಸ್ತೊಡೆದು, ಮಾರನೇ ದಿನವೇ ಮೂಸುಂಬಿ ರಸ ಸ್ವೀಕರಿಸಿದ್ದೇಕೆ? ರಾಜ್ಯದ ಐದು ಕೋಟಿ ಕನ್ನಡಿಗರನ್ನಷ್ಟೇ ಅಲ್ಲ ದೇಶದ ರಾಜಕಾರಣದ ಮೂಲೆಮೂಲೆಯಲ್ಲೂ ಕೇಳಿಬರುತ್ತಿರುವ ಪ್ರಶ್ನೆಯಿದು! ಕುಮಾರನ ಆರೋಗ್ಯಕ್ಕಿಂತ ಮುಖ್ಯವಾದದ್ದೇನೂ ಇಲ್ಲ. ಉಪವಾಸಕ್ಕೇನು ಬೇಕಾದರೆ ಪಕ್ಷದ ಹಿರಿಯ ನಾಯಕರು ಅದನ್ನು ಮುಂದುವರೆಸುತ್ತಾರೆ ಎಂದು ಮಾಜಿ ಪ್ರಧಾನಿಗಳು ಹುಕುಂ ಹೊರಡಿಸಿದ್ದೇ ಕುಮಾರ ಕಂಠೀರವ ಹಠಾತ್ ಆಗಿ ನಿರಶನ ಕೈಬಿಡಲು ಕಾರಣವಂತೆ! ಆರೋಗ್ಯ ಸರಿಯಿಲ್ಲದಿದ್ದಾಗ ಉಪವಾಸ ಬೇಡ ಎನ್ನುವುದೇನೋ ಸರಿ ಆದರೆ ತಮ್ಮ ಕುಟುಂಬದ ಮೇಲಿನ ಆರೋಪಗಳಿಗೆ ಜೆಡಿಎಸ್ನ ಇತರೆ ನಾಯಕರೇಕೆ ಉಪವಾಸ ಬೀಳಬೇಕು ಎನ್ನುವುದು ಬಹುಶಃ ಮಾಜಿ ಪ್ರಧಾನಿಗಳಿಗೆ ಹೊಳೆಯಲಿಲ್ಲವೋ ಗೊತ್ತಿಲ್ಲ! ಅದಕ್ಕೇ ಅಂದಿನ ಸಭೆಯಲ್ಲಿ ಗೌಡರ ಫಮರ್ಾನಿಗೆ ಸಿಂಧ್ಯ, ನಾಣಯ್ಯಾದಿ ಹಿರಿತಲೆಗಳಲ್ಲಿ ಯಾರೂ ಹ್ಞಾಂ, ಹ್ಞೂಂ ಅಂತನ್ನುವ ಗೋಜಿಗೇ ಹೋಗಲಿಲ್ಲವಂತೆ!
********************************************************
ಚಿದುಗೆ ಪ್ರಣವ್ ರಕ್ಷೆ



ಕೇಂದ್ರಸಕರ್ಾರದ ಬೃಹಸ್ಪತಿ ಪ್ರಣವ್ ಮುಖಜರ್ಿ ನೀಡುವ ಹೇಳಿಕೆ ಭಾರತದ ರಾಜಕಾರಣದ ದಿಕ್ಕನ್ನೇ ಬದಲಾಯಿಸಿ ಬಿಡುವಷ್ಟು ಶಕ್ತಿಶಾಲಿ! ಹಿಂದೆ:
1998ರ ಮಾಚರ್್ 5ರಂದು ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ "ಕಾಂಗ್ರೆಸ್ ಸಂಸದೀಯ ಪಕ್ಷಕ್ಕೆ(ಸಿಪಿಪಿ) ಯಾರು ಬೇಕಾದರೂ ಅಧ್ಯಕ್ಷರಾಗ ಬಹುದು; ಅವರು ಸಂಸತ್ ಸದಸ್ಯರಾಗೇ ಇರಬೇಕೆಂಬುದು ಕಡ್ಡಾಯವೇನಲ್ಲ" ಎಂದು ಪ್ರಣವ್ದಾ ನೀಡಿದ ಹೇಳಿಕೆ ಹಠಮಾರಿ ದಾದಾಜಿ ಸೀತಾರಾಂ ಕೇಸರಿ ನಿರ್ಗಮನ ಹಾಗೂ ಸೋನಿಯಾ ರಾಜಕೀಯ ಪ್ರವೇಶಕ್ಕೆ ನಾಂದಿಯಾಯಿತು(ಉಲ್ಲೇಖ: 24 ಅಕ್ಬರ್ ರೋಡ್-ಲೇ:ರಶೀದ್ ಕಿದ್ವಾಯಿ). ಈಗ:
`ಹಣಕಾಸು ಸಚಿವರು ದಿನಕ್ಕೆ ಬೇಕಾದಷ್ಟು ಮಂತ್ರಿಗಳನ್ನ ಭೇಟಿ ಮಾಡ್ತಾರೆ. ಈ ಎಲ್ಲ ವಿವರಗಳನ್ನೂ ದಾಖಲಿಸಲು ಸಾಧ್ಯವಿಲ್ಲ' ಎಂಬ ಪ್ರಣವ್ರ ಬೋಲ್ಡ್ ಹೇಳಿಕೆ ಸಂಪುಟದಲ್ಲಿನ ಅವರ ಕಡುವಿರೋಧಿಯಾಗಿರುವ ಗೃಹ ಸಚಿವ ಪಿ.ಚಿದಂಬರಮ್ಗೆ ಸದ್ಯ ಲೈಫ್ ನೀಡಿದೆ ಎಂಬುದು ಸುಳ್ಳಲ್ಲ. ಇಲ್ಲಿದ್ದಿದ್ದರೆ ಪ್ರತಿಪಕ್ಷಗಳು ಇಷ್ಟುಹೊತ್ತಿಗೆ ಚಿದುರನ್ನ 2ಜಿ ಹಗರಣದಲ್ಲಿ ಸಿಕ್ಕಿಸಿ, ಹುರಿದು ಮುಕ್ಕಿಯಾಗಿಬಿಡುತ್ತಿತ್ತು!
****************************************************************************

400 ಕೋಟಿಗೆ ಬಂಗಲೆ ಖರೀದಿ 

 

 ಇಂದು ಉಳ್ಳವರು ಶಿವಾಲಯದ ಬದಲಿಗೆ ಸ್ವಾಲಯ ಮಾಡುವರು. ಸಜ್ಜನ್ ಜಿಂದಾಲ್ ಎಂಬ ಸಜ್ಜನ ಅಮೋಘ 400 ಕೋಟಿ ರೂಗಳ ಸಮುದ್ರ ಕಿನಾರೆಯ ಬಂಗಲೆಯನ್ನು ಮುಂಬೈನ ನೇಪಿಯನ್ಸೀ ರಸ್ತೆಯಲ್ಲಿ ಖರೀದಿಸಿ ಇತಿಹಾಸ ನಿಮರ್ಿಸಿದ್ದಾರೆ. ಭಾರತದ 3ನೇ ಅತಿಹೆಚ್ಚು ಆದಾಯವಿರುವ ಸ್ಟೀಲ್ಕಂಪನಿ `ಜೆಎಸ್ಡಬ್ಲ್ಯು'ದ ಒಡೆಯ ಸಜ್ಜನ್ಗೆ ಇದುವರೆಗೆ ವಾಸಿಸುತ್ತಿದ್ದ ಮೊರಿಯನ್ ಹೌಸ್ಗಿಂತಲೂ ಸಮುದ್ರ ತಟದಲ್ಲಿ ಒಂದು ಎಕರೆಗೂ ಹೆಚ್ಚು ವಿಸ್ತಾರದ ಪ್ರದೇಶದಲ್ಲಿ ಹಚ್ಚ ಹಸುರಿನ ಹುಲ್ಲುಗಾವಲಿನ ಹಿಂಭಾಗದಲ್ಲಿರುವ 3 ಅಂತಸ್ತಿನ ಇದುವರೆಗೆ `ಮಾಹೇಶ್ವರಿ ಹೌಸ್' ಎಂದು ಕರೆಸಿಕೊಳ್ಳುತ್ತಿದ್ದ ಈ ಬಂಗಲೆಯೇ ಹೆಚ್ಚು ಸೂಕ್ತ ಎನಿಸಿದ್ದೇ ತಡ, ಹಿಂದುಮುಂದೆ ನೋಡದೆ ಮೆನೇಜರ್ ಮುಖಾಂತರ ಡೀಲ್ ಕುದುರಿಸಿಯೇ ಬಿಟ್ಟರಂತೆ!
-Script: ಶಾಂತಲ

Monday, July 11, 2011

NEWSDIGEST....weekly column in Karmaveera

( Script:Shantala, Illustrations: Satish Sringeri)

ಪವಡಿಸುವ ಪರಮಾತ್ಮ ಈಗ ಲಕ್ಕಿ ಗಾಡ್
ಈ ಪದುಮನಾಭ ನಿಜವಾಗಿಯೂ ಪರಮಪುರುಷನೇ.. ಸದ್ಯದ ಆಡಿಟ್ ರಿಪೋಟರ್್ ಪ್ರಕಾರ ಒಂದು ಲಕ್ಷ ಕೋಟಿ ರೂಗಳಿಗೂ ಮೀರಿ ನಗನಾಣ್ಯಾಧಿಗಳ ಒಡೆಯ..ಜಗತ್ತಿನ ಅತ್ಯಂತ ಶ್ರೀಮಂತ ದೇವರಾಗಿದ್ದ ತಿರುಪತಿ ತಿಮ್ಮಪ್ಪನನ್ನು ರಾತೋರಾತ್ರಿಯ ಕಾಯರ್ಾಚರಣೆಯಲ್ಲಿ ಸೆಕೆಂಡ್ ಪ್ಲೇಸ್ಗೆ ಇಳಿಸಿ ತಾನು ಮಾತ್ರ ಏನೂ ನಡೆದೇ ಇಲ್ಲವೇನೋ ಎಂಬಂತೆ ಕೂಲ್ ಆಗಿ ರಿಲ್ಯಾಕ್ಸಿಂಗ್ ಪೋಸಿನಲ್ಲೇ ಪವಡಿಸಿರುವ ತಿರುವಾಂಕೂರಿನ ಅನಂತಪದ್ಮನಾಭನ ರಹಸ್ಯ ಭಂಡಾರವನ್ನ ಹೇಗೆ ರಕ್ಷಣೆ ಮಾಡೋದು ಅನ್ನೋದೆ ಈಗ ಕೇರಳ ಸಕರ್ಾರಕ್ಕೆ ದೊಡ್ಡ ತಲೆನೋವಾಗಿದೆಯಂತೆ! ಆರರಲ್ಲಿ ಐದು ರಹಸ್ಯ ಕೋಣೆಗಳ ಸಂಪತ್ತನ್ನು ಆಡಿಟ್ ನಡೆಯುತ್ತಿದ್ದಂತೆಯೇ ವಿಶ್ವಾದ್ಯಂತ ಅನಂತಕೋಟಿ ನಾರಾಯಣನ ಭಂಡಾರದ ಗುಣಗಾನವೇ.. ಈ ಕಾರಣದಿಂದಲೇ ಅಲ್ಲವೇ ಘಜಿನಿ, ಘೋರಿ ಮಹಮ್ಮದರಿಂದ ಹಿಡಿದು ಬ್ರಿಟೀಷರ ವರೆಗೆ ವಿದೇಶೀ ಲೂಟಿಕೋರರ ಗಮ್ಯ ಭಾರತದ ದೇವಾಯಲಗಳಾಗಿದ್ದುದು.. ಈ ವಿಷಯವೆಲ್ಲ ಹಾಗಿರಲಿ ತಿರುವನಂತಪುರದ ಅನಂತಪದ್ಮನಾಭನ ಸಕಲ ಸಂಪತ್ತಿನ ಬಗ್ಗೆ ಕೇಳಿ ಇದುವರೆಗೆ `ಕುಳಿತಿರುವ ಗಜಲಕ್ಷ್ಮಿ'ಯ ಆರಾಧಕರಾಗಿದ್ದವರೆಲ್ಲ ಇನ್ನುಮುಂದೆ ಈ ಪವಡಿಸುವ ಪರಮಾತ್ಮನ ಪೋಸ್ಟರ್ ಮನೇಲಿದ್ರೆ ಅದೃಷ್ಟ ಕೊಳ್ಳೆ ಹೊಡಕೊಂಡು ಮನೆಗೇ ಬರುತ್ತೇಂತ ಹೊಸ ಗಾಸಿಪ್ ಹಬ್ಬಿಸಿದರೂ ಆಶ್ಚರ್ಯಪಡಬೇಕಿಲ್ಲ!

ಜನಸೇವಕರಿಗೆ `ಸ್ವಂತ'ಕ್ಕೆ ಸಮಯವಿಲ್ಲ..
ಅಂತಿಮ ಗಡುವಿನ ನಂತರವೂ ಹಲವು ಮಂತ್ರಿ-ಶಾಸಕರು ಆಸ್ತಿ ವಿವರ ನೀಡಿಲ್ಲವಂತೆ! ಹೀಗೆ ಆಸ್ತಿ ವಿವರ ನೀಡಿ ಎನ್ನುವುದೇ ದೋಷಪೂರಿತ ಮತ್ತು ಸರಿಯಾದ ಕ್ರಮವಲ್ಲ. ಏಕೆಂದರೆ ಈ ಸಚಿವ-ಶಾಸಕರ ಮಹೋದಯರಿಗೆ ತಾನೆ ಯಾವ ಆಸ್ತಿ ಎಲ್ಲಿದೆ, ಎಷ್ಟಿದೆ, ಯಾರ ಹೆಸರಲ್ಲಿದೆ? ಸ್ವನಾಮಿಯೋ ಇಲ್ಲಾ ಬೇನಾಮಿಯೋ.. ಈ ಎಲ್ಲ ವಿವರಗಳೂ ಅಸಲಿಗೆ ಗೊತ್ತಿದ್ದರೆ ತಾನೆ ಅದನ್ನು ಬಹಿರಂಗ ಪಡಿಸುವುದು...ಇಷ್ಟಕ್ಕೂ ನಿಗದಿತ ಅಜರ್ಿ ನಮೂನೆ ಎಲ್ಲಿ ಸಾಕಾಗುತ್ತದೆ ಎಲ್ಲ ಆಸ್ತಿ ವಿವರ ನೀಡುವುದಕ್ಕೆ? ಜನಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಇವರಿಗೆ ಸದಾ ಸಾರ್ವಜನಿಕ ಹಿತಾಸಕ್ತಿಯ ಕಡೆ ಗಮನವೇ ಹೊರತು, ಸ್ವಂತ ಆಸ್ತಿಪಾಸ್ತಿಗಳನ್ನ ಲೆಕ್ಕ ಮಾಡೋಕೆ ಸಮಯವಾದರೂ ಎಲ್ಲಿಂದ ಸಿಗಬೇಕು? ಛೆ ಪಾಪ! ಅಂದಹಾಗೆ ಈ ಪಟ್ಟಿಯಲ್ಲಿರುವವರೆಂದರೆ ರೇಣುಕಾಚಾರ್ಯ, ಎ. ನಾರಾಯಣಸ್ವಾಮಿ, ಕೃಷ್ಣ ಜೆ. ಪಾಲೆಮಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಚ್.ಡಿ. ರೇವಣ್ಣ, ಅನಿತಾ ಕುಮಾರಸ್ವಾಮಿ, ಎಚ್.ಸಿ. ಬಾಲಕೃಷ್ಣ ಡಿ.ಕೆ. ಶಿವಮಕುಮಾರ್, ಸಂತೋಷ್ಲಾಡ್, ಸಿ.ಎಸ್. ನಾಡಗೌಡ.. (ವಿ.ಸೂ. ಪಟ್ಟಿ ಉದ್ದವಿರುವುದರಿಂದ, ಸ್ಥಳಾಭಾವದ ಕಾರಣದಿಂದ ಕೆಲವು ಹೆಸರುಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ)


ನಮಗೆ ಯಾರು ಮಾದರಿ?
ದೇಶಕ್ಕಾಗಿ ಹೋರಾಡಿ ಮಡಿದ ಕಿತ್ತೂರ ಚೆನ್ನಮ್ಮ, ಝಾನ್ಸಿ ಲಕ್ಷ್ಮೀಬಾಯಿ, ಬೆಳವಡಿ ಮಲ್ಲಮ್ಮ, ಅಬ್ಬಕ್ಕರೋ ಇಲ್ಲಾ ಪ್ರೇಮಿಸುವ ನಾಟಕವಾಗಿ ಅಸಲಿ ಪ್ರಿಯತಮನೊಂದಿಗೆ ಸೇರಿ ನಕಲಿ ಪ್ರೇಮಿಯನ್ನ ತುಂಡುತುಂಡಾಗಿ ಕತ್ತರಿಸಿ ಕೊಂದ ನಟಿ ಮರಿಯಾ ಸುಸೈರಾಜ್ಳೋ.. ಇದಕ್ಕೆ ಈ ಸಮಾಜದ ಪ್ರಜ್ಞಾವಂತ ನಾಗರಿಕರು ಉತ್ತರಿಸಬೇಕು. ಇತ್ತೀಚೆಗೆ ಮರಿಯಾ ಜೈಲಿನಿಂದ ಬಿಡುಗಡೆಯಾದಾಗ ಆಕೆಯನ್ನ ರಾಷ್ಟ್ರದ ವೀರವನಿತೆ ಎಂಬಂತೆ ಟಿವಿ ವಾಹಿನಿಗಳು ಬಿತ್ತರಿಸಿದ್ದು ನಿಜಕ್ಕೂ ಈ ಪ್ರಜಾಪ್ರಭುತ್ವದ ದುರಂತ. ಇದು ಸಾಲದೆಂಬಂತೆ ಬಾಲಿವುಡ್ನಿಂದ ಆಕೆಗೆ ಆಫರ್ಗಳ ಮೇಲೆ ಆಫರ್ಗಳು, ಬಿಗ್ಬಾಸ್ನಿಂದ 5 ಕೋಟಿಯ ಆಮಿಷ.. ಹಾಗಾದರೆ ಈ ದೇಶದಲ್ಲಿ ಫೇಮಸ್ಸಾಗಬೇಕಾದರೆ, ಹಣ ಮನೆ ಬಾಗಿಲಿಗೆ ಬಂದು ಬೀಳಬೇಕೆಂದರೆ ಏನು ಮಾಡಬೇಕೆಂಬುದನ್ನು ಮರಿಯಾ ಸುಸೈರಾಜ್ಳನ್ನ ನೋಡಿದ ನಂತರ ಬಿಡಿಸಿ ಹೇಳಬೇಕಿಲ್ಲವಷ್ಟೆ..  



ರನವೇ ಬ್ರೈಡ್!
90ರ ದಶಕದ ಈ ಜನಪ್ರಿಯ ಹಾಲಿವುಡ್ ಚಿತ್ರದಲ್ಲಿ ನಾಯಕಿಗೆ ಹಸೆಮಣೆಯಿಂದ ಓಡಿಹೋಗುವ ಚಟ.. ಇಂಥ ವಿಚಿತ್ರ ನಡವಳಿಕೆಯವರಿರುತ್ತಾರೆಯೇ ಎಂದು ಆಶ್ಚರ್ಯಪಟ್ಟವರಿಗೆಲ್ಲ ಮೊನಾಕೊದ ರಾಜಕುಮಾರಿ ಚಾಲರ್ಿನ್ ವಿಟ್ಸ್ಟಾಕ್ಳನ್ನು ನೋಡಿದರೆ ಹೌದು ನಿಜ ಜೀವನದಲ್ಲೂ ಇಂಥದ್ದು ನಡೆಯಲು ಸಾಧ್ಯ ಎಂದು ತಿಳಿಯುತ್ತದೆ. ದಕ್ಷಿಣ ಆಫ್ರಿಕಾದ ಮಾಜಿ ಸ್ವಿಮ್ಮಿಂಗ್ ಚಾಂಪಿಯನ್ ಆದ ಈಕೆ ಅದೇಕೆ ಅಥ್ಲೀಟ್ಗಳ ಹಾಗೆ ಒಂದಲ್ಲ ಎರಡಲ್ಲ ಮೂರು ಬಾರಿ ಈ ಮದುವೆಯಿಂದ ಪರಾರಿ ಆಗೋಕೆ ಪ್ರಯತ್ನಿಸಿದಳು ಎಂಬುದು ಇನ್ನೂ ರಹಸ್ಯವೇ! ಐವತ್ಮೂರರ ಹರಯದ ರಾಜಕುಮಾರ ಆಲ್ಬಟರ್್ ಹಾಗೂ ಮೂವತ್ಮೂರರ ಚಾಲರ್ಿನ್ ನಡುವೆ ಬರೋಬ್ಬರಿ ಇಪ್ಪತ್ತು ವರ್ಷಗಳ ಅಂತರ. ನೋಡಲು ಇವಳು ಸುರಸುಂದರಿ ಆತನೋ ಬೋಳುತಲೆಯ ಸುಂದರ. ರಾಜ ಮನೆತನದವ ಎಂಬುದನ್ನು ಬಿಟ್ಟರೆ ಈತನಲ್ಲಿ ಮತ್ಯಾವುದೇ ವಿಶೇಷ ಗುಣಗಳಿಲ್ಲ. ಹೊರಜಗತ್ತಿಗೆ ನಾರ್ಮಲ್ ಆಗೇ ಕಾಣುವ ಪ್ರಿನ್ಸೆಸ್ ಚಾಲರ್ಿನ್ ಅವಕಾಶ ಸಿಕ್ಕಿದಾಗಲೆಲ್ಲ ತವರಿಗೆ ಓಡಿಹೋಗಲು ಹಂಬಲಿಸುತ್ತಾಳೆ ಎಂದೋ ಏನೋ ಪ್ರಿನ್ಸ್ ಆಲ್ಬಟರ್್ ತನ್ನ ಮುದ್ದಿನ ಪತ್ನಿಯನ್ನು ದಕ್ಷಿಣ ಆಫ್ರಿಕೆಗೇ ಮಧುಚಂದ್ರಕ್ಕೆ ಕರೆದೊಯ್ಯಲು ತೀಮರ್ಾನಿಸಿದ್ದಾನೆ! ತವರಿಗೆ ಹೋದ ಮೇಲೆ ಚಾಲರ್ಿನ್ ಏನು ಮಾಡಬಹುದು? ಇದು ಈ ಹೊತ್ತಿನ ಸಾರ್ವತ್ರಿಕ ಕುತೂಹಲಗಳಲ್ಲೊಂದಾಗಿದೆ!










court ಪ್ರಪೋಸಲ್
ನನ್ನ ಮದುವೆ ಆಗ್ತೀಯಾ? ಅಂತ ಆಕಾಶ, ಭೂಮಿ, ಪಾತಾಳ... ಹೀಗೆ ಎಲ್ಲಲ್ಲೋ ಕೇಳಿದ್ದಿದೆ ಆದರೆ ಕ್ರೀಡಾಂಕಣದಲ್ಲಿ ಅದೂ ಕಣದಲ್ಲಿರುವ ಆಟಗಾರನಿಗೆ ಬಹಿರಂಗ ಪ್ರಪೋಸ್ ಮಾಡಿದ ಘಟನೆ ಹಲವರಿಗೆ ಗೊತ್ತಿಲ್ಲದಿರಬಹುದು. ಇತ್ತೀಚೆಗಷ್ಟೆ ವಿಂಬಲ್ಡನ್ ಟೂನರ್ಿ ಮುಕ್ತಾಯವಾದ ಸಂದರ್ಭದಲ್ಲಿ ಕಳೆದ ವರ್ಷದ ಈ ಘಟನೆ ನೆನಪಿಗೆ ಬಂತು. ಅದು ನಡೆದಿದ್ದು 2010ರ ಜನೆವರಿಯಲ್ಲಿ ಮೆಲ್ಬೋನರ್್ನಲ್ಲಿ. ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದ ಲಾನ್ಟೆನಿಸ್ನ ಹಾಟ್ಸ್ಟಾರ್ ರಫೆಲ್ ನಡಾಲ್ಗೆ ಸ್ಪೇನ್ ಮೂಲದ ಅಭಿಮಾನಿಯೊಬ್ಬಳು ಬಹಿರಂಗವಾಗಿ `ಹೇ ರಫೆಲ್ ವಿಲ್ ಯೂ ಮ್ಯಾರಿ ಮಿ..' ಎಂದು ಕೂಗೇಬಿಟ್ಟಳು! ಅದನ್ನು ಕೇಳಿ ಕೆಂಪುಕೆಂಪಾದ ನಡಾಲ್, ಸುಮ್ಮನೆ ಅಡ್ಡಡ್ಡ ತಲೆ ಆಡಿಸಿ ಮುಗುಳ್ನಗೆಯಲ್ಲಿ ಉತ್ತರವನ್ನ ತೇಲಿಸಿಬಿಟ್ಟ. ಇದೇ ರೀತಿಯ ತೊಂಬತ್ತರ ದಶಕದಲ್ಲಿ ಅಂದಿನ ಹಾಟ್ಫೆವರಿಟ್ ಆಗಿದ್ದ ಜರ್ಮನಿಯ ಸ್ಟೆಫಿಗ್ರಾಫ್ಗೆ ಅಭಿಮಾನಿಯೊಬ್ಬ ಕೇಳಿದಾಗ ಮೊದಲು ನಸುನಕ್ಕ ಸ್ಟೆಫಿ, ಎದುರಾಳಿಗೆ ಬಾಲ್ ಸವರ್್ ಮಾಡುತ್ತಲೇ ಕೇಳಿದಳು `ಹೌ ಮಚ್ ಮನಿ ಯೂ ಹ್ಯಾವ್?' ಅಂತ.. ಸೇರಿಗೆ ಸವ್ವಾಸೇರು ಅಂದರೆ ಇದೇತಾನೇ.

Tuesday, July 5, 2011

A new column in Karmaveera with my illustrations

(Script: Shantala , Illustrations: Satish Sringeri)

ಪ್ರಣವ್ಗೆ `ಬಗ್' ಕಾಟ!


ತಾನು ಕಳ್ಳ ಪರರನ್ನ ನಂಬ.. ಇದು ಯುಪಿಎ ಸಕರ್ಾರಕ್ಕೆ ಅನ್ವಯಿಸೋ ಮಾತು ಎಂಬುದು ಕಠೋರ ಟೀಕೆಯಲ್ಲ ವಾಸ್ತವದ ಕಟು ಸತ್ಯ. ಇಲ್ಲದಿದ್ದರೆ ಕೇಂದ್ರ ಸಂಪುಟದ ಬೃಹಸ್ಪತಿಯ ಸ್ಥಾನದಲ್ಲಿರೋ ಹಣಕಾಸು ಸಚಿವ ಪ್ರಣವ್ ಮುಖಜರ್ಿಯವರ ಕಚೇರಿ ತುಂಬಾ ಕದ್ದಾಲಿಕೆ ಗುಂಡಿಗಳನ್ನು ಒತ್ತಿಡುತ್ತಿದ್ದರೇ?! ಈ ದೇಶದ ಕುಬೇರಪ್ಪನಾಗಿರುವ ವಿತ್ತ ಸಚಿವರ ಹಾಗೂ ಅವರ ಸಿಬ್ಬಂದಿಗಳ ಒಟ್ಟು ಐದು ಕಚೇರಿಗಳಲ್ಲಿ ಮೇಜುಗಳಿಗೆ ಅಂಟಿಸಲಾಗಿದ್ದ ಚ್ಯೂಯಿಂಗ್ ಗಮ್ಗಳೊಳಗೆ ಹುದುಗಿ ಕುಳಿತಿದ್ದ ಶ್ರವಣ ಸಾಧನಗಳು ಅಲ್ಲಿಂದ ಮಾಹಿತಿಗಳನ್ನು ಹೊರ ರವಾನಿಸುತ್ತಿದ್ದವೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲವಷ್ಟೆ.. ಹಣಕಾಸು ಸಚಿವಾಲಯದ ಆಗುಹೋಗುಗಳ ವಿವರಗಳು ಯಾರಿಗೆ ಬೇಕಾಗಿದೆ? ಯಾರು ಈ ಕದ್ದಾಲಿಕೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಮುಚ್ಚಿಹಾಕಲು ಗೃಹ ಸಚಿವ ಚಿದಂಬರಂ, ವಾತರ್ಾ ಸಚಿವೆ ಅಂಬಿಕಾ ಸೋನಿ ಆದಿಯಾಗಿ ಸಕರ್ಾರದವರು ಇದೇನೂ ಅಂತಹ ಮಹತ್ವದ ವಿಷಯವಲ್ಲ ಎಂದು ಹೇಳುತ್ತಿರುವುದಕ್ಕಿಂತ ಮತ್ತೊಂದು ಸಾಕ್ಷಿ ಬೇಕಿಲ್ಲ. ಹಾಗಾದರೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಪ್ರಣವ್ ಮೇಲೆ ನಂಬಿಕೆ ಇಲ್ಲವೇ?
***********************************************************************************
ಕಲೈಂಜರ್ ಬಾಯಲ್ಲಿ ರಾಮನಾಮ!


`ರಾಮ'ನನ್ನ ರಹೀಮನ ಕುಲದವರು ದ್ವೇಷಿಸುತ್ತಾರೋ ಇಲ್ಲವೋ ಆದರೆ ನೆರೆ ರಾಜ್ಯ ತಮಿಳುನಾಡಿನ ಮಾಜಿಮುಖ್ಯಮಂತ್ರಿ ಹಾಗೂ ಈ ದೇಶದ ಸ್ವಯಂಘೋಷಿತ `ಪರಮ ನಾಸ್ತಿಕ' ಎಂದು ಸ್ವಯಂ ಘೋಷಿಸಿಕೊಂಡಿರುವ ಎಂ. ಕರುಣಾನಿಧಿಯವರಿಗೆ ಪುತ್ರಿ ಕನ್ನಿಮೋಳಿ ಕೃಷ್ಣ ಜನ್ಮಸ್ಥಾನದಲ್ಲಿರುವುದರಿಂದ ಆಲೋಚನಾಶಕ್ತಿ ಕೈಕೊಟ್ಟಿರುವ ಹಾಗೆ ಕಾಣುತ್ತೆ! ರಾಮಾಯಣ ಒಂದು ಸುಳ್ಳಿನ ಕಂತೆ, ರಾಮಸೇತು ಎಂದೆಂದೂ ಅಸ್ತಿತ್ವದಲ್ಲೇ ಇರಲಿಲ್ಲ ಎಂದು ಇದುವರೆಗೂ ಬೊಬ್ಬೆ ಹೊಡೆಯುತ್ತಿದ್ದ ಕರುಣಾ ತಾತ, ಈಗ ಇದ್ದಕ್ಕಿದ್ದಂತೆ ತಮ್ಮನ್ನು ತಾವು ಮಯರ್ಾದಾ ಪುರುಷೋತ್ತಮ ಶ್ರೀರಾಮನಿಗೆ ಹೋಲಿಸಿಕೊಂಡಿರೋದು ನಿಜಕ್ಕೂ ಅವರ ಮೆದುಳಿನ ಸ್ಥಿತ್ಯಂತರದ ಸೂಚನೆ ಎಂಬುದು ವಿರೋಧಿಗಳ ಅಂಬೋಣ! ಇಷ್ಟಕ್ಕೂ ಈ ರಾಮ ಪ್ರಹಸನ ನಡೆದಿದ್ದು, ಡಿಎಂಕೆ ಕಾರ್ಯಕರ್ತರ ಇತ್ತೀಚಿನ ಬಹಿರಂಗ ಸಭೆಯಲ್ಲಿ ತಮ್ಮ ಇಂದಿನ ಸ್ಥಿತಿಯನ್ನು ಪ್ರಸ್ತಾಪಿಸಿದ ಕಲೈಂಜರ್, `ರಾಮ ವನವಾಸದಲ್ಲಿದ್ದಾಗಲೇ ತಾಟಕಿಯ ಸಂಹಾರವಾಗಿದ್ದು' ಎಂದು ತಮ್ಮ ಅಭಿಮಾನಿದೇವರುಗಳ ಕಣ್ಣೊರೆಸಿದರಂತೆ! ರಾಮ ಯಾರು, ತಾಟಕಿ ಯಾರು ಬಿಡಿಸಿ ಹೇಳಬೇಕಾಗಿಲ್ಲವಷ್ಟೇ..
****************************



ಅಷ್ಟಾಂಗಯೋಗ ವರ್ಸಸ್ ಕಪಾಲಬಾತಿ




ಇವರಿಬ್ಬರೂ ಪತಂಜಲಿ ಯೋಗ ಪರಂಪರೆಯ ಗೌರವಾನ್ವಿತ ಆಚಾರ್ಯರು. ಭಾರತೀಯ ಸಾಂಪ್ರದಾಯಿಕ ಯೋಗಶಾಸ್ತ್ರದ ಬಗ್ಗೆ ವಿಶ್ವದ ಮೂಲೆಮೂಲೆಯಲ್ಲೂ ಮಾಹಿತಿ, ಜಾಗೃತಿ, ತಿಳುವಳಿಕೆಗಳ ಪ್ರಸರಣದ ಜೊತೆಗೆ ಶಿಷ್ಯಮಂಡಲಿಗಳನ್ನು ಹೊಂದಿರುವ ಅಷ್ಟಾಂಗಯೋದ ಅಧ್ವಯರ್ು ಬಿ.ಕೆ.ಎಸ್. ಅಯ್ಯಂಗಾರ್ ಹಾಗೂ ಕಪಾಲಬಾತಿಯ ಕರ್ಮಠ ಬಾಬಾ ರಾಮದೇವ್ ನಡುವಿನ ಸಂಬಂಧ ಇನ್ನೂ ರಿಪೇರಿಯಾಗಿಲ್ಲವೆಂಬುದನ್ನು ಇತ್ತೀಚೆಗೆ ಚೀನದಲ್ಲಿ ಯೋಗಾಚಾರ್ಯರು ನೀಡಿರುವ ಹೇಳಿಕೆ ದೃಢಪಡಿಸಿದೆ. `ಕಪಾಲಬಾತಿಯ ಮಾರಾಟಗಾರರು ಪತಂಜಲಿ ಯೋಗದ ಮೂಲ ಉದ್ದೇಶಕ್ಕೆ ಕಂಟಕರಾಗಿದ್ದಾರೆ' ಎಂದು 93 ವರ್ಷದ ಯೋಗಗುರುಗಳು ಗುಡುಗಿದ್ದು ಯಾರ ಬಗ್ಗೆ ಎಂಬುದು ಸ್ವಯಂವೇದ್ಯ. `ಅವರು(ರಾಮದೇವ್) ಮೂಲ ಪತಂಜಲಿ ಯೋಗವನ್ನು ಕುಲಗೆಡಿಸುತ್ತಿದ್ದಾರೆ' ಎಂದು ಹತ್ತು ವರ್ಷಗಳ ಹಿಂದೆಯೇ ಬಹಿರಂಗವಾಗಿ ಹರಿಹಾಯ್ದಿದ್ದ ಗುರು ಅಯ್ಯಂಗಾರ್ಯರು ಇಂದಿಗೂ `ಕಪಾಲಬಾತಿ'ಯ ಪ್ರಸ್ತಾಪವಾದರೆ ಸಾಕು ಅಭಿನವ ಜಮದಗ್ನಿಯಾಗಿಬಿಡುತ್ತಾರೆ!
****************************************************************


ಕಾಯೋರೂ ಅವರೇ.. ಕಳ್ಳರೂ ಅವರೇ..



ಯಾವುದೇ ಹಗರಣ ನಡೆದಾಗ ಅದಕ್ಕೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗುವುದು, ಆ ಫೈಲುಗಳಿರುವ ಕಚೇರಿಯ ಪ್ರದೇಶದಲ್ಲಿ ಶಾಟರ್್ಸಕ್ಯರ್ೂಟ್ ಸಂಭವಿಸುವುದು ಇವೆಲ್ಲ ಮಾಮೂಲಿ ಘಟನೆಗಳೇ. ಕೆಲವರ್ಷಗಳ ಹಿಂದೆ ಕನರ್ಾಟಕ ರಾಜ್ಯ ಮಹಿಳಾ ಆಯೋಗದಲ್ಲಿ ಇಂಥ ಅಗ್ನಿ ಆಕಸ್ಮಿಕ ಉಂಟಾಗಿ ಪ್ರಸ್ತುತದ ಅಧಿಕಾರಸ್ಥ ರಾಜಕಾರಣಿಯೊಬ್ಬರಿಗೆ ಸಂಬಂಧಿಸಿದ ದಾಖಲೆಗಳು ಸುಟ್ಟು ಕರಕಲಾಗಿದ್ದರ ನೆನಪು ಮಾಸುವ ಮೊದಲೇ ಮಹಾರಾಷ್ಟ್ರದಲ್ಲೂ ಇಂಥದ್ದೇ ಇತಿಹಾಸ ಮರುಕಳಿಸಿದೆ. ಆ ರಾಜ್ಯದ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ರ ಪದತ್ಯಾಗಕ್ಕೆ ಕಾರಣವಾದ ಆದರ್ಶ ಹೌಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕಲೆಹಾಕಲಾಗಿದ್ದ ಫೈಲುಗಳೆಲ್ಲ ನಾಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಪಟ್ಟಭದ್ರರ ಹೆಸರನ್ನು ಶಾಶ್ವತವಾಗಿ ಅಳಿಸಿಹಾಕಲು ಅಗತ್ಯವಿರುವ ಕ್ರಮಗಳನ್ನೆಲ್ಲ ಕಟ್ಟುನಿಟ್ಟಾಗಿ ಕೈಗೊಳ್ಳಲಾಗಿದೆಯಂತೆ! ಆಡಳಿತಾರೂಢ ಸಕರ್ಾರಕ್ಕೆ ಸಂಬಂಧಿಸಿದ ಹಗರಣ ಇದಾಗಿರುವುದರಿಂದ `ಕಾಯೋರೂ ಅವರೇ.. ಕಳ್ಳರೂ ಅವರೇ'
**********************************************************************
ಕಾಮಿಕ್ಸ್ ನಾಯಕಿ ಮ್ಯಾಡೊನಾ 


ಮಕ್ಕಳ ಮನರಂಜನೆ ಮತ್ತು ಮಾಹಿತಿಗಾಗಿ ರೂಪುಗೊಂಡ ಕಾಮಿಕ್ಸ್ ಪುಸ್ತಕಗಳಲ್ಲಿ ಎಂಥ ಕತೆಗಳು, ಎಂಥವರ ಜೀವನಚರಿತ್ರೆಗಳು ಬಂದರೆ ಚೆನ್ನ? ಈ ಪ್ರಶ್ನೆಯ ಉತ್ತರಕ್ಕೆ ತಲೆಕೆಡಿಸಿಕೊಳ್ಳದೇ ಬ್ಲೂವಾಟರ್ ಸಂಸ್ಥೆಯು ಪಾಪ್ ತಾರೆ ಮ್ಯಾಡೊನಾಳ ಕತೆಯನ್ನ ಕಾಮಿಕ್ಸ್ ರೂಪದಲ್ಲಿ ಹೇಳಹೊರಟಿದೆ! ಮ್ಯಾಡೊನಾ ವಿಶ್ವದ ಅತ್ಯಂತ ಜನಪ್ರಿಯ ಗಾಯಕಿ ಇರಬಹುದು ಆದರೆ ಆದರ್ಶಪ್ರಾಯಳೇ? ಎಂದು ಕೇಳಿದರೆ ಇದೊಂದು ಸಿಲ್ಲಿ ಪ್ರಶ್ನೆ ಎನ್ನುವ ಬ್ಲೂವಾಟರ್, ವಿಶ್ವದ ಸತ್ವಶೀಲ ಮಹಿಳೆಯರನ್ನು ಚಿಣ್ಣರಿಗೆ ಪರಿಚಯಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಬ್ರಿಟನ್ನಿನ ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್, ಅಮೆರಿಕದ ಗೌರವಾನ್ವಿತ ರಾಜಕಾರಣಿ ಸಾರಾ ಪಾಲಿನ್, ಅದೇ ದೇಶದ ಖ್ಯಾತ ಪತ್ರಕತರ್ೆ ಮತ್ತು ಲೇಖಕಿ ಬಾರ್ಬರಾ ವಾಲ್ಟರ್ಸ್ರ ಜೀವನ ಚರಿತ್ರೆಯನ್ನು ಕಾಮಿಕ್ಸ್ ರೂಪದಲ್ಲಿ ಪ್ರಕಟಿಸಿದ್ದೇವ ಎನ್ನುವ ಬ್ಲೂವಾಟರ್ಸ್, ಇದೀಗ ವಸ್ತ್ರ ದ್ವೇಷಿ ಗಾಯಕಿ ಮ್ಯಾಡೊನಾ ಕತೆಯನ್ನ ಚಿಣ್ಣರಿಗೆ ಹೇಳಹೊರಟಿದೆ. ಹಾಗಾದರೆ ಈ ಸರಣಿಯಲ್ಲಿ ಮುಂದಿನ ಹೆಸರು ಸಮಂತಾ ಫಾಕ್ಸ್, ಶಾರನ್ ಸ್ಟೋನ್ರದ್ದಾ?!!( COMICS IMAGE SOURCE: INTERNET)