Tuesday, July 5, 2011

ನೋ ಟಪ್ಪಾಂಗುಚ್ಚಿ ಡ್ಯಾನ್ಸ್!.....NEWSDIGEST....weekly column in Karmaveera

(Article: Shantala , Illustrations: Satish Sringeri)



ನೋ ಟಪ್ಪಾಂಗುಚ್ಚಿ ಡ್ಯಾನ್ಸ್!


ನ್ಯಾಯ, ನೀತಿಗಳ ಮೂತರ್ಿವೆತ್ತ ಸತ್ಯದೇವ ಮಂಜುನಾಥನ ಸನ್ನಿಧಿಯಲ್ಲಿ ಸಧ್ಯ ನಮ್ಮ ರಾಜ್ಯಸಕರ್ಾರದ `ರಾಕ್ಸ್ಟಾರ್' ರೇಣುಕಾಚಾರ್ಯ ಸಾಹೇಬರು ಟಪ್ಪಾಂಗುಚ್ಚಿ ಕುಣಿತ ಹಾಕದೆ `ಧರ್ಮ'ಸ್ಥಳದಲ್ಲಿ ಸಂಯಮ ಮೆರೆದಿದ್ದಾರೆ! ಬೀದರ್ನಿಂದ ಬೆಂಗಳೂರಿನ ವರೆಗೆ ಚಾನ್ಸ್ ಸಿಕ್ಕಾಗಲೆಲ್ಲ ಡ್ಯಾನ್ಸ್ ಮಾಡುವುದಕ್ಕೆ ರಾಜ್ಯಾದ್ಯಂತ ಸಚಿವ ರೇಣುಕಾಚಾರ್ಯ ಫೇಮಸ್ಸು. ಅದು ಟಪ್ಪಾಂಗುಚ್ಚಿ ಸ್ಟೆಪ್ಪೇ ಇರಬಹುದು ಅಥವಾ ಡೋಲು ಬಾಜಾ ನೆಗೆತವೇ ಇರಬಹುದು.. ಎಲ್ಲಕ್ಕೂ ಸೈ ಎನ್ನುವ ಅಬಕಾರಿ ಸಚಿವ ಮಹೋದಯರು ತಮ್ಮ ಅಧಿನಾಯಕ ಮುಖ್ಯಮಂತ್ರಿ ಯಡಿಯೂರಪ್ಪನವರ ಆಣೆ ಪ್ರಮಾಣ ಪ್ರಕರಣದ ಬೆಂಬಲಕ್ಕಾಗಿ ಅಣ್ಣಪ್ಪ ದೈವದ ನೆಲೆವೀಡಿಗೆ ಸಹೋದ್ಯೋಗಿಗಳೊಂದಿಗೆ ತೆರಳಿದಾಗ ದೊರೆತ ಪೂರ್ಣಕುಂಭ ಸ್ವಾಗತಕ್ಕೆ ಮನಸೋತು, ಭಾವುಕರಾಗಿ ಎಲ್ಲಿ ಟಪ್ಪಾಂಗುಚ್ಚಿ ಕುಣಿತ ಹಾಕಿಬಿಡುತ್ತಾರೋ ಎಂದು ಹೆದರಿದ್ದ ಅಧಿಕಾರಿ ಸಿಬ್ಬಂದಿಗಳು, ಸಾಹೇಬರು ತೀರಾ ಎಮೋಷನಲ್ ಆಗದೆ ನಾರ್ಮಲ್ ಆಗೇ ನಡಕೊಂಡಿದ್ದು ಕಂಡು ಸಮಾಧಾನದ ನಿಟ್ಟುಸಿರು ಬಿಟ್ಟರಂತೆ!! ********************************************************************************* -ಶಾಂತಲ

No comments:

Post a Comment