Wednesday, August 15, 2012
Sunday, July 22, 2012
Thursday, May 31, 2012
A global leader and...(Cartoon for Editorial column, SAMYUKTA KARNATAKA, JUNE 1, 2012)
CvÀ¼À, «vÀ¼À, gÀ¸ÁvÀ¼À, ¥ÁvÁ¼ÀUÀ¼À zÉñÀ ¨sÁµÉUÀ¼À £É®zÀ°è KPÁAV
«ÃgÀ£ÀAvÉ ¥ÀæzÀQëuÉ ºÁPÀÄwÛgÀĪÀ ¥ÀæzsÁ¤ qÁ. ªÀÄ£ÀªÉÆÃºÀ£ï ¹AUï CªÀjUÉ
¸ÀézÉñÀzÀ°ègÀĪÁUÀ d£ÀgÀ£ÀÄß £ÉÃgÀªÁV ¨sÉÃn ªÀiÁqÀ®Ä ¥ÀÄgÀďɯwÛ®è JA§ÄzÀÄ
PÉêÀ® PÀÄZÉõÉÖAiÀÄ ªÀiÁvÀ®è. d£ÁzÉñÀPÉÌ vÀ¢égÀÄzÀÞªÁV £ÀqÉzÀÄPÉÆ¼ÀÄîwÛgÀĪÀ
¥ÀæzsÁ¤AiÉÆ§âgÀ ªÀvÀð£É zÉñÀªÁ¹UÀ¼À «±Áé¸ÀPÀÆÌ zÉÆæÃºÀ. KPÉAzÀgÉ, F zÉñÀzÀ
d£À vÀªÀÄä ¸ÀAvÀ¸À ºÁUÀÆ ¸ÀAPÀlUÀ½UÁV £ÉaÑPÉÆArgÀĪÀÅzÀÄ d£ÁzÉñÀzÀ ªÀÄÆ®PÀ
ZÀÄPÁÌt »r¢gÀĪÀ ¥ÀæzsÁ¤AiÀÄ£Éßà «£ÀB ¸ÀªÀðªÁå¦, ¸ÀªÀð±ÀPÀÛgÀAvÉ
©A©¹PÉÆ¼ÀÄîwÛgÀĪÀ gÁdQÃAiÀÄ ¥ÀPÀëUÀ¼À £ÉÃvÁgÀgÀ£Àß®è. zÉÆqÀØPÀÌ£À ZÁ½
ªÀÄ£ÉAiÀĪÀjUÉ®è J£ÀÄߪÀ jÃwAiÀÄ°è ¥ÀæzsÁ¤ C£ÀĸÀj¹zÀ ªÀiÁUÀðªÀ£ÉßÃ
gÁµÀÖç¥Àw¬ÄAzÀ »rzÀÄ ¯ÉÆÃPÀ¸À¨sÁzsÀåPÀëgÀªÀgÉUÉ «zÉñÀ AiÀiÁvÉæAiÀÄ
ªÁåªÉÆÃºÀzÀ¯Éèà PÀ¼ÉAiÀÄÄwÛgÀĪÀ ¥ÀjuÁªÀĪÉAzÀgÉ £ÁUÁ¯ÉÆÃlPÉÌ fVAiÀÄÄwÛgÀĪÀ
CUÀvÀå ªÀ¸ÀÄÛUÀ¼À ¨É¯É KjPÉ. EzÀgÀ dvÉUÉ ¨É¯É KjPÉAiÀÄ£ÀÄß «ÄÃj¸ÀĪÀ jÃwAiÀİè
zÁ¥ÀÄUÁ®Ä ºÁPÀÄwÛgÀĪÀ ¸ÁªÀðd¤PÀgÀ ºÀvÁ±ÉAiÀÄ ¢PÉÌlÖ ¥ÀæªÁºÀ...
¹AUÁgÀ¥Àà ªÀÄvÀÄÛ CgÀªÀÄ£É
Tuesday, April 10, 2012
ಭೂಲೋಕದಲ್ಲಿ ಬೇತಾಳ..
.ಸಂಯುಕ್ತ ಕರ್ನಾಟಕದಲ್ಲಿ ಹೊಸ ಕಾಲಂ ಗೆ ಚಿತ್ರ
¨sÀÆ
¯ÉÆÃPÀzÀ°è ¨ÉÃvÁ¼À
gÁeÁ
wæ«PÀæªÀÄ ¨ÉÃvÁ¼ÀªÀ£ÀÄß ºÉUÀ®ªÉÄÃ¯É ºÁQPÉÆAqÀÄ PÁr£À ªÀÄzsÉå ºÉÆÃUÀÄwÛgÀĪÁUÀ
¨ÉÃvÁ¼À PÀxÉ ºÉüÀ®Ä ¥ÁægÀA©ü¸ÀÄvÀÛzÉ.....
J¯ÉÊ
gÁd£Éà PÉüÀÄ, F PÀ°AiÀÄÄUÀzÀ°è F zÉñÀzÀ°è£À
PÀ£ÁðlPÀªÉA¨ÉÆÃ gÁdåzÀ FV£À PÀxÉ ºÉüÀÄvÉÛÃ£É avÀÛ«lÄÖ PÉüÀÄ..
£Á£ÀÄ
£ÉªÀÄä¢UÉÆÃ¸ÀÌgÀ ¨ÉAUÀ¼ÀÆj£À°èzÉÝ. DºÁ C°è£À gÁdPÁgÀtzÀ UÀ¯ÁmÉ, gɸÁmïð
gÁdQÃAiÀÄ, ºÁ°-ªÀiÁfUÀ¼À UÀzÀÝ®, ªÀiÁqÀ¨ÁgÀzÀ PÉ®¸ÀUÀ¼ÀÄ MAzÉÃ, JgÀqÉÃ, £ÉÆÃqÀÄ
vÀ£Àß ºÉAqÀwAiÀÄ ªÉÄð£À ¹nÖ¤AzÀ d¤¹zÀ
ªÀÄUÀĪÀ£ÀÄß zsÀÆvÀð vÀAzÉAiÉÆ§â J°è-¨ÉÃPÀ°è PÀaÑ, ºÉÆqÉzÀÄ D ªÀÄUÀĪÀ£ÀÄß
¸Á«£À zÀªÀqÉUÉ £ÀÆQzÁÝ£É. D PÀqÉ GvÀÛgÀPÀ£ÁðlPÀ, ºÉÊzÀgÁ¨Ázï PÀ£ÁðlPÀzÀ°è
§gÀUÁ¯ÉA¨ÉÆÃ §gÀUÁ®, C°è£À d£ÀgÀ zÀÄrAiÀÄĪÀ PÉÊUÉ PÉ®¸À«®è, d£À zÀ£ÀUÀ½UÉ
¤Ãj®è, ºÀ¼Àî-PÉÆ¼ÀîUÀ¼É®è §wÛ §jzÁVªÉ. ºÉÆ®UÀ¼À°è ©gÀÄPÀÄ ©lÄÖ E£ÉßãÀÄ £Á£ÀÄ
EzÀgÀ°è ©wÛ ¨É¼ÉAiÀįÁgÉ JA§AvÁVzÉ gÉÊvÀgÀ ¥Àj¹Üw. EªÉ®èªÀ£ÀÆß £ÉÆÃrPÉÆAqÀÄ §gÀ®Ä C°èUÉ
ºÉÆÃzÀgÀÆ....CzÉÃ£ÉÆÃ C£ÀÄßvÁÛgÀ®è `¥Á¦ ¸ÀªÀÄÄzÀæPÉÌ ºÉÆÃzÀgÀÆ ªÉƼÀPÁ®ªÀgÉUÉ
¤ÃgÀAvÉ' JA§AvÁVzÉ £À£Àß ¥Àj¹Üw. AiÀiÁªÀ
gÁdPÁgÀtÂUÀ¼À PÁAiÀÄðUÀ½AzÀ ¨ÉøÀvÀÄÛ D ºÀ½îPÀqÉUÉ ºÉÆÃzÉ£ÉÆÃ C°èAiÀÄÆ CªÀgÀÄ
»AqÀÄUÀlÖ¯Éà MPÀÌj¸ÀÄwÛzÁÝgÉ. J®èªÀ£ÀÆß £ÉÆÃr JAxÀ PÁ® §AvÀ¥Àà EzÀÆ JAzÀÄ ¢£Á®Æ
ªÀĪÀÄä® ªÀÄgÀUÀÄwÛzÉÝãÉ.
ºÁUÉ
§gÀĪÀ gÁdPÁgÀtzÀ d£ÀgÀÄ MAzÀÄ ¸ÁéxÀðªÀ£Éßà ElÄÖPÉÆAqÀÄ ºÉeÉÓ EqÀÄwÛzÁÝgÉ. FV£À
¥Àj¹Üw £ÉÆÃrzÀgÉ gÁdå ªÀÄvÀÄÛ PÉÃAzÀæPÉÌ ZÀÄ£ÁªÀuÉUÀ¼ÀÄ §AzÀgÀÆ §gÀ§ºÀÄzÀÄ. FUÀ
£ÁªÀÅ ºÉÆÃV ªÀiÁvÀ£Ár¸À¢zÀÝgÉ £ÀªÀÄä£ÀÄß ªÀÄ£ÉUÉ PÀ¼ÀÄ»¹AiÀiÁgÀÄ JAzÀÄ D¼ÀĪÀ
¥ÀPÀëzÀªÀgÀÆ, zÀ±ÀPÀUÀ½AzÀ C¢üPÁgÀzÀ UÀzÀÄÝUÉAiÀÄ ªÉÄÃ¯É PÀĽvÀÄ CzÀgÀ gÀÄa
£ÉÆÃr ¸ÀzÀå ¥Àæw¥ÀPÀëzÀ°è PÀĽwgÀĪÀªÀgÀ `PÉÊ' ZÀÄlÄ-ZÀÄlÄ J£ÀÄßwÛzÀÄÝ £ÁªÀÅ
»ÃUÉ PÀĽvÀgÉ £ÀªÀÄUÉ ªÀÄvÉÛ FVgÀĪÀ¯Éèà PÀÆr¸ÀÄvÁÛgÉ JAzÀÄ w½zÀÄ CªÀgÀÆ ¸ÀºÀ
§gÀ©zÀÝ ºÀ½î-ºÀ½îUÉ ºÉÆÃV §AzÀÄ ªÀiÁqÀÄwÛzÁÝgÉ.
E£ÀÄß
ªÀiÁvÀÄ-ªÀiÁwUÀÆ ªÀÄtÂÚ£À ªÀÄUÀ £Á£ÀÄ JAzÀÄ ºÉüÀÄvÀÛ ºÀUÀ®Ä ªÀÄÆgÀÄºÉÆvÀÄÛ ªÀÄÄzÉÝ
wAzÀÄ ¤zÉÝ ºÉÆqÉAiÀÄĪÀªÀgÀÄ avÀæ£ÀnAiÀÄ vÀ¯ÉªÉÄÃ¯É ºÀİè£ÀºÉÆgÉ ºÉÆgɹ £ÁªÀÅ
ªÉÄêÀÅ PÉÆqÀÄvÉÛÃªÉ JAzÀÄ ºÉüÀÄwÛzÁÝgÉ. EzÀjAzÁV UÁæªÀÄzÀªÀjUÉ, C°è£À
ªÀÄj¥ÀÄqsÁjUÀ½UÉ §gÀUÁ®zÀ PÁAlæPÀÖgïUÀ½UÉ UÁ§jAiÀiÁVzÉ. £ÀªÀÄUÉ K£ÉÆAzÀÆ
w½AiÀÄÄwÛ®è. £ÁªÀÅ J®èjUÀÆ CzÀ£Éßà ºÉý, ºÉý ¸ÁPÁVzÉ, ¸ÀAeÉAiÀiÁzÀgÉ ¸ÁPÀÄ
PÀgÉAlÄ E®èzÉà HgÉ®è PÀvÀÛ®Ä. ¸Á®-¸ÉÆÃ® ªÀiÁr ºÁQ¹PÉÆAqÀ ¥ÀA¥ï¸ÉmïUÀ¼ÀÆ ¸ÀºÀ
PÉ®¸À«®èzÉà SÁ° PÀĽwªÉ, EªÀjUÉ FUÀ £ÁªÀÅ £É£À¥ÁzɪÁ JAzÀÄ PÉüÀÄwÛzÁÝgÉ.
EªÀgÀ
eÉÆvÉ PÉÃAzÀæ ¸ÀgÀPÁgÀzÀªÀgÀÆ ¸ÀºÀ ¯ÉÆÃPÀ¸À¨sÉ ZÀÄ£ÁªÀuÉAiÀÄ£ÀÄß
UÀªÀÄ£ÀzÀ°èlÄÖPÉÆAqÀÄ §gÀ©zÀݰèUÉ CeÉðAmï ºÉÆÃV ¸ÀªÀiÁzsÁ£À ºÉý JAzÀÄ
vÀªÀÄäªÀjUÉ ºÉüÀÄwÛzÁÝgÉ. EªÉ®è PÀ¥Àl £ÁlPÀ £ÉÆÃr £À£ÀUÉ ¸ÁPÁVzÉ. MnÖ£À°è
ºÉüÀ¨ÉÃPÉAzÀgÉ §gÀzÀ £Ár£À°è Kt ElÄÖPÉÆAqÀÄ ªÉÄÃ¯É ºÀvÀÄÛªÀ vÀªÀPÀ J®èjUÉ
EzÀ£Éß®è ¸À»¹PÉÆ¼Àî¨ÉÃPÁzÀ PÀªÀÄð £ÀªÀÄäzÀÄ.
gÁeÁ
wæ«PÀæªÀÄ£Éà E£ÉÆßAzÀÄ PÉüÀÄ. ¤Ã£ÀÄ PÉlÖ ªÀÄPÀ̼À£ÀÄß £ÉÆÃrgÀ§ºÀÄzÀÄ DzÀgÉ
PÉlÖ vÁ¬ÄAiÀÄ£ÀÄß J¯ÁèzÀgÀÆ PÀAr¢ÝÃAiÀiÁ? E®èªÀ®è ºÁUÁzÀgÉ PÉüÀÄ. £Á£ÀÄ §gÀzÀ
£Ár£À UÀÄAl ºÉÆÃzÁUÀ £À£ÀUÉ JzÀÄgÁVzÀÄÝ AiÀiÁzÀVj. C°è£À UÁæªÀĪÉÇAzÀgÀ°è vÁ¬Ä
vÁ£ÀÄ ºÉvÀÛ E§âgÀÄ ªÀÄPÀ̼À£ÀÄß
PÉÆA¢zÁݼÉ. EªÉ®è £ÉÆÃrPÉÆAqÀÄ EgÀ¨ÉÃPÁzÀgÀÆ ºÉÃUÉ ¤Ã£Éà ºÉüÀÄ. EªÉ®è £À£Àß
¥Àæ±ÉßUÀ½UÉ GvÀÛgÀ ºÉüÀ¯ÉèÉÃPÀÄ E®è¢zÀÝgÉ ¤£Àß vÀ¯É ¸Á«gÀ ºÉÆÃ¼ÀÄ....
(ಬರಹ: ನರಸಿಂಹ ರಾವ್)
Thursday, March 15, 2012
Cartoon for Editorial column(Samyukta Karnataka 16 March 2012)
ರಾಜಕೀಯ ಕನ್ನಡ ಕುಲಪುತ್ರರು
ಟೀಕೆ ಟಿಪ್ಪಣಿಗಳು ಏನೇ ಇರಲಿ, 50 ವರ್ಷಗಳ ಕಾಲ ಸತತವಾಗಿ ಸಾರ್ವಜನಿಕ ಬದುಕಿನಲ್ಲಿ ಸಕ್ರಿಯರಾಗಿರುವುದು ಸಾಮಾನ್ಯರಿಗಂತೂ ಆಗದ ಸಂಗತಿ. ಅದರಲ್ಲೂ ಸಂಸದೀಯ-ಶಾಸನಸಭೆಯ ಸದಸ್ಯರಾಗಿ ಅಧಿಕಾರದ ಸುತ್ತ ಪ್ರದಕ್ಷಿಣೆ ಹಾಗೂ ಅಪ್ರದಕ್ಷಿಣೆ ಹಾಕುತ್ತಲೇ ವೈರಿಗಳ ಜತೆಗೆ ಆತ್ಮೀಯರ ಸಂಕುಲವನ್ನೇ ಸೃಷ್ಟಿಸಿಕೊಳ್ಳುವುದು ಅಸಾಮಾನ್ಯ. ಕನರ್ಾಟಕದ ಮಟ್ಟಿಗೆ ಹೇಳುವುದಾದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಇಂತಹ ವಿಸ್ಮಯಕಾರಿ ಸಾಧನೆ ಮಾಡಿರುವ ಕನ್ನಡದ ಕುಲಪುತ್ರರು. ಬಹುಶ್ರುತ ಸಮಾಜದಲ್ಲಿ ಸಾರ್ವಜನಿಕ ಮುಖಂಡರ ನಿಲುವು ಒಲವುಗಳನ್ನು ಬೇಷರತ್ತಾಗಿ ಒಪ್ಪಲೇಬೇಕೆಂದೇನೂ ಇಲ್ಲ. ಆದರೆ, ಈ ಒಲವು ನಿಲುವುಗಳ ಹಿಂದಿರುವ ಸದಾಶಯ, ಸದ್ವಿಚಾರ ಹಾಗೂ ಸದಾಗ್ರಹಗಳು ಇದ್ದರೆ ಅವು ನಿಜಾರ್ಥದಲ್ಲಿ ಜನಮಾನಸದ ಅಗ್ಗಿಷ್ಟಿಕೆಯಲ್ಲಿ ಪರೀಕ್ಷೆಗೊಳಗಾಗಿ ಹಕ್ಕೊತ್ತಾಯಗಳಾಗಿಬಿಡುತ್ತವೆ. ಇಂತಹ ಹಕ್ಕೊತ್ತಾಯಗಳ ವಾರಸುದಾರರೆ ಜನನಾಯಕರು. 1962ರಲ್ಲಿ ಕನರ್ಾಟಕದ ವಿಧಾನಸಭೆಯನ್ನು ಮೊದಲ ಬಾರಿಗೆ ಪ್ರವೇಶಿಸಿದ ಈ ಇಬ್ಬರ ಬದುಕು ಒಂದು ರೀತಿಯಲ್ಲಿ ಕನರ್ಾಟಕದ ಏಳುಬೀಳುಗಳ ಕನ್ನಡಿ.
ಟೀಕೆ ಟಿಪ್ಪಣಿಗಳು ಏನೇ ಇರಲಿ, 50 ವರ್ಷಗಳ ಕಾಲ ಸತತವಾಗಿ ಸಾರ್ವಜನಿಕ ಬದುಕಿನಲ್ಲಿ ಸಕ್ರಿಯರಾಗಿರುವುದು ಸಾಮಾನ್ಯರಿಗಂತೂ ಆಗದ ಸಂಗತಿ. ಅದರಲ್ಲೂ ಸಂಸದೀಯ-ಶಾಸನಸಭೆಯ ಸದಸ್ಯರಾಗಿ ಅಧಿಕಾರದ ಸುತ್ತ ಪ್ರದಕ್ಷಿಣೆ ಹಾಗೂ ಅಪ್ರದಕ್ಷಿಣೆ ಹಾಕುತ್ತಲೇ ವೈರಿಗಳ ಜತೆಗೆ ಆತ್ಮೀಯರ ಸಂಕುಲವನ್ನೇ ಸೃಷ್ಟಿಸಿಕೊಳ್ಳುವುದು ಅಸಾಮಾನ್ಯ. ಕನರ್ಾಟಕದ ಮಟ್ಟಿಗೆ ಹೇಳುವುದಾದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಇಂತಹ ವಿಸ್ಮಯಕಾರಿ ಸಾಧನೆ ಮಾಡಿರುವ ಕನ್ನಡದ ಕುಲಪುತ್ರರು. ಬಹುಶ್ರುತ ಸಮಾಜದಲ್ಲಿ ಸಾರ್ವಜನಿಕ ಮುಖಂಡರ ನಿಲುವು ಒಲವುಗಳನ್ನು ಬೇಷರತ್ತಾಗಿ ಒಪ್ಪಲೇಬೇಕೆಂದೇನೂ ಇಲ್ಲ. ಆದರೆ, ಈ ಒಲವು ನಿಲುವುಗಳ ಹಿಂದಿರುವ ಸದಾಶಯ, ಸದ್ವಿಚಾರ ಹಾಗೂ ಸದಾಗ್ರಹಗಳು ಇದ್ದರೆ ಅವು ನಿಜಾರ್ಥದಲ್ಲಿ ಜನಮಾನಸದ ಅಗ್ಗಿಷ್ಟಿಕೆಯಲ್ಲಿ ಪರೀಕ್ಷೆಗೊಳಗಾಗಿ ಹಕ್ಕೊತ್ತಾಯಗಳಾಗಿಬಿಡುತ್ತವೆ. ಇಂತಹ ಹಕ್ಕೊತ್ತಾಯಗಳ ವಾರಸುದಾರರೆ ಜನನಾಯಕರು. 1962ರಲ್ಲಿ ಕನರ್ಾಟಕದ ವಿಧಾನಸಭೆಯನ್ನು ಮೊದಲ ಬಾರಿಗೆ ಪ್ರವೇಶಿಸಿದ ಈ ಇಬ್ಬರ ಬದುಕು ಒಂದು ರೀತಿಯಲ್ಲಿ ಕನರ್ಾಟಕದ ಏಳುಬೀಳುಗಳ ಕನ್ನಡಿ.
Monday, December 12, 2011
Thursday, November 10, 2011
Friday, October 28, 2011
Friday, September 30, 2011
Sunday, September 4, 2011
ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera
(Script: Shantala)
ಹೊನ್ನಾಳಿಯಾಂವ ಈಗ `ನಗರ'ದ ರಾಜ
ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಸಚಿವ ಸಂಪುಟದ `ಡೇರ್ಡೆವಿಲ್' ಮಂತ್ರಿ ರೇಣುಕಾಚಾರ್ಯರಿಗೆ ಇದು ನಿಜಕ್ಕೂ ದೊಡ್ಡ ಸವಾಲೇ. ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ನಿಭಾಯಿಸುವುದು ಎಂದರೆ ಅಷ್ಟು ಸುಲಭದ ಮಾತಲ್ಲ, ಎಂಟೆದೆಯ ಬಂಟನೇ ಆಗಿರಬೇಕು. ಈ ವಿಷಯದಲ್ಲಿ ಯುವಶಕ್ತಿ ರೇಣುಕಾಚಾರ್ಯರ ಧೈರ್ಯಸ್ಥೈರ್ಯಗಳನ್ನು ಸಂಶಯಿಸುವ ಹಾಗೇ ಇಲ್ಲ. ಅವರ ಸಾಮಥ್ರ್ಯದ ಆಳ ಬಲ್ಲವರಾಗಿರುವುದರಿಂದಲೋ ಏನೋ ಮುಖ್ಯಮಂತ್ರಿಗಳು ಅವರಿಗೆ ಚಾಮರಾಜನಗರ ಗಡಿ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿದ್ದಾರೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಕೇವಲ ಮುಖ್ಯಮಂತ್ರಿ ಪದವಿಯಲ್ಲಿರುವವರಿಗೆ ಅನ್ವಯವೇ ಹೊರತು, ಮಂತ್ರಿಗಳಾಗಿರುವವರಿಗೆ ಅಲ್ಲ ಅಲ್ಲವೇ. ಹಾಗಾಗಿ ಬೋಲ್ಡ್ಮ್ಯಾನ್ ರೇಣುಕಾ ಆರಾಮವಾಗಿ ಈ ಗಡಿ ಜಿಲ್ಲಾ ಉಸ್ತುವಾರಿ ವಹಿಸಬಹುದಲ್ಲ.
*********************************************************************
ಜೈಹೊ ಜಯಾ
ಇಂಥ ದಾಷ್ಟ್ರ್ಯ ಕೇವಲ ಡಾ. ಜೆ. ಜಯಲಲಿತಾಗೆ ಮಾತ್ರ ಇರುವುದಕ್ಕೆ ಸಾಧ್ಯ! ಹೆಸರಿನಲ್ಲೇ `ಜಯ' ಹೊಂದಿದ್ದರೂ ಕೆಲವೊಮ್ಮೆ ಅಪಜಯ, ಅಪಕೀತರ್ಿಗಳಿಗೆ ತಲೆಯೊಡ್ಡಿದರೂ ಮತ್ತೆ ಫೀನಿಕ್ಸ್ನಂತೆ ಬೂದಿಯಿಂದ ಮೇಲೆದ್ದು ಬರುವ ತಾಕತ್ತು ತಮಿಳುನಾಡಿನ ಈ ಹಾಲಿ ಮುಖ್ಯಮಂತ್ರಿಗೆ ಮಾತ್ರ ಇರುವ ಹಾಗೆ ಕಾಣಿಸುತ್ತದೆ! ತಮ್ಮ ಪರಮವೈರಿ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ ಸಕರ್ಾರ ನಿಮರ್ಿಸಿದ್ದ ಶಾಸಕಾಂಗ ಸಭೆಯ ಹೊಸ ಕಟ್ಟಡವನ್ನ ಅದು ಶಾಸನಸಭೆ ಅಧಿವೇಶನ ನಡೆಸಲು ಲಾಯಕ್ಕಾಗಿಲ್ಲ ಎಂಬ ಕಾರಣ ಕೊಟ್ಟು, ಅಲ್ಲಿ ಬಡಜನರಿಗಾಗಿ ಮಲ್ಟಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ನಡೆಸುವುದಾಗಿ ರಾಜ್ಯದ ವಿಧಾನ ಮಂಡಲದ ಅಧಿವೇಶನದಲ್ಲಿ ಘೋಷಿಸಿರುವುದು ವ್ಯಾಪಕವಾಗಿ ಶ್ಲಾಘಿಸಲ್ಪಟ್ಟಿದೆ. ಶಾಸನಸಭಾ ಕಟ್ಟಡವೆಂದು ಡಿಎಂಕೆ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಇದರ ಉದ್ಘಾಟನೆಯನ್ನು ಧಾಮ್ಧೂಮಾಗಿ ನೆರವೇರಿಸಲಾಗಿತ್ತು. ಅದ್ಯಾವುದನ್ನೂ ಲೆಕ್ಕಕ್ಕೇ ಇಟ್ಟುಕೊಳ್ಳದ ಜಯಾಡಳಿತ ಚೆನ್ನೈ ನಗರದ ಹೃದಯಭಾಗದಲ್ಲಿರುವ ಈ ಬೃಹತ್ ಕಟ್ಟಡವನ್ನು ಸೂಪರ್ಸ್ಷೆಷಾಲಿಟಿ ಆಸ್ಪತ್ರೆಯನ್ನಾಗಿಸುವುದರಿಂದ ಬೇರೆ ಯಾರಿಗಲ್ಲದಿದ್ದರೂ ಬಡವರಿಗಂತೂ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಆಶಯ ಜನತಾ ಜನಾರ್ದನರದ್ದು.
ಗಾಂಧಿ ಟೋಪಿಗೆ ಶುಕ್ರದೆಸೆ!

ಹಳೇ ರಾಜಕಾರಣಿಗಳು ಹಾಗೂ ಶಾಲಾ ಫ್ಯಾನ್ಸಿ ಡ್ರೆಸ್ ಸ್ಪಧರ್ೆಗಳಿಗಷ್ಟೆ ಸೀಮಿತವಾಗಿದ್ದ ಗಾಂಧಿ ಟೋಪಿ ಈಗ ಅಣ್ಣಾ ಹಜಾರೆ ಕಾರಣದಿಂದ ನರ್ಸರಿ ಮಕ್ಕಳಿಂದ ಐಐಟಿ ವಿದ್ಯಾಥರ್ಿಗಳ ವರೆಗೆ ಎಲ್ಲರ ತಲೆಮೇಲೆ ದೇಶದ ಮೂಲೆಮೂಲೆಯಲ್ಲೂ ರಾರಾಜಿಸುತ್ತಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಖಾದಿ ಟೋಪಿಗಳು ಮಾರಾಟವಾಗುತ್ತಿವೆ. ದಿನಕ್ಕೆ 100ರಿಂದ 200 ಟೋಪಿಗಳು ಖರೀದಿಯಾಗುತ್ತಿವೆ ಎನ್ನುವ ಖಾದಿ ಭಂಡಾರದ ಮಾಲಿಕರೊಬ್ಬರ ಪ್ರಕಾರ ಖಾದಿ ಟೋಪಿಗಳ ಬೆಲೆ 40 ರಿಂದ 60 ರೂ ವರೆಗೆ ಇದ್ದರೆ ಇದೇ ರೀತಿಯ ಟೆರಿಕಾಟ್ ಟೋಪಿಗೆ ಕೇವಲ 10 ರೂ. ಇಂಥವು ದಿನಕ್ಕೆ 1500ರಷ್ಟು ಮಾರಾಟವಾಗುತ್ತಿವೆಯಂತೆ! ಒಟ್ಟಿನಲ್ಲಿ ಈಗ ಗಾಂಧಿ ಟೋಪಿಗೆ ಅಣ್ಣಾ ಕಾರಣದಿಂದ ಶುಕ್ರದೆಸೆ! ಎಲ್ಲರ ಟೋಪಿ ಮೇಲೂ `ಮೈ ಅಣ್ಣಾ ಹ್ಞೂಂ'
ಭ್ರಷ್ಟಾಚಾರದ ಬಿಸಿ
ಅಣ್ಣಾ ಹಜಾರೆ ಮಾತೆತ್ತಿದರೆ ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಅನ್ನುತ್ತಾರೆ.. ಅವರೇನು ಮುಸ್ಲಿಮರನ್ನು ನೀವೂ ಬನ್ನಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಕರೆದಿದ್ದಾರೇನು? ಹೀಗಿರುವಾಗ ನೀವೇಕೆ ಈ ಚಳವಳಿಯಲ್ಲಿ ಭಾಗವಹಿಸಬೇಕು? ಅದರ ಅಗತ್ಯವೇನೂ ಇಲ್ಲ ಎಂದು ದೆಹಲಿಯ ಸೈಯದ್ ಇಮಾಮ್ ಬುಖಾರಿ ಹೊರಡಿಸಿದ್ದ ಫಮರ್ಾನಿಗೆ ಆ ಸಮುದಾಯದಲ್ಲಿ ಹೆಚ್ಚಿನ ಪ್ರತಿಕ್ರಿಯೆ ದೊರೆತಿಲ್ಲದ ಹಾಗೆ ಕಾಣುತ್ತದೆ! ಮಾಜಿ ಶಾಸಕ, ಸಂಸದರಿಂದ ಜನ ಸಾಮಾನ್ಯರ ವರೆಗೆ ನೂರಾರು ಮುಸ್ಲಿಮರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆಯವರ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಅಷ್ಟೇಅಲ್ಲ, ತಾವು ರೋಜಾ(ಉಪವಾಸ) ಮಾಡುತ್ತಿದ್ದರೂ ಅಲ್ಲಿನ ಪಾಕಶಾಲೆಯಲ್ಲಿ ಹಸಿದವರಿಗೆ ಊಟ ಬಡಿಸುವ ಸ್ವಯಂಸೇವಕರಾಗಿ ದುಡಿಯುತ್ತಿದ್ದರಂತೆ! ಭ್ರಷ್ಟಾಚಾರದ ಪಿಡುಗು ಕೋಮು, ಜಾತಿ ನೋಡಿ ಕಾಡುವುದಿಲ್ಲ ಎಂಬುದು ಬಹುಶಃ ಬುಖಾರಿಗೆ ಈಗಲಾದರೂ ಅರ್ಥವಾಗುತ್ತದೋ ಏನೋ!
ಹೊನ್ನಾಳಿಯಾಂವ ಈಗ `ನಗರ'ದ ರಾಜ
ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಸಚಿವ ಸಂಪುಟದ `ಡೇರ್ಡೆವಿಲ್' ಮಂತ್ರಿ ರೇಣುಕಾಚಾರ್ಯರಿಗೆ ಇದು ನಿಜಕ್ಕೂ ದೊಡ್ಡ ಸವಾಲೇ. ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ನಿಭಾಯಿಸುವುದು ಎಂದರೆ ಅಷ್ಟು ಸುಲಭದ ಮಾತಲ್ಲ, ಎಂಟೆದೆಯ ಬಂಟನೇ ಆಗಿರಬೇಕು. ಈ ವಿಷಯದಲ್ಲಿ ಯುವಶಕ್ತಿ ರೇಣುಕಾಚಾರ್ಯರ ಧೈರ್ಯಸ್ಥೈರ್ಯಗಳನ್ನು ಸಂಶಯಿಸುವ ಹಾಗೇ ಇಲ್ಲ. ಅವರ ಸಾಮಥ್ರ್ಯದ ಆಳ ಬಲ್ಲವರಾಗಿರುವುದರಿಂದಲೋ ಏನೋ ಮುಖ್ಯಮಂತ್ರಿಗಳು ಅವರಿಗೆ ಚಾಮರಾಜನಗರ ಗಡಿ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿದ್ದಾರೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಕೇವಲ ಮುಖ್ಯಮಂತ್ರಿ ಪದವಿಯಲ್ಲಿರುವವರಿಗೆ ಅನ್ವಯವೇ ಹೊರತು, ಮಂತ್ರಿಗಳಾಗಿರುವವರಿಗೆ ಅಲ್ಲ ಅಲ್ಲವೇ. ಹಾಗಾಗಿ ಬೋಲ್ಡ್ಮ್ಯಾನ್ ರೇಣುಕಾ ಆರಾಮವಾಗಿ ಈ ಗಡಿ ಜಿಲ್ಲಾ ಉಸ್ತುವಾರಿ ವಹಿಸಬಹುದಲ್ಲ.
*********************************************************************
ಜೈಹೊ ಜಯಾ
ಇಂಥ ದಾಷ್ಟ್ರ್ಯ ಕೇವಲ ಡಾ. ಜೆ. ಜಯಲಲಿತಾಗೆ ಮಾತ್ರ ಇರುವುದಕ್ಕೆ ಸಾಧ್ಯ! ಹೆಸರಿನಲ್ಲೇ `ಜಯ' ಹೊಂದಿದ್ದರೂ ಕೆಲವೊಮ್ಮೆ ಅಪಜಯ, ಅಪಕೀತರ್ಿಗಳಿಗೆ ತಲೆಯೊಡ್ಡಿದರೂ ಮತ್ತೆ ಫೀನಿಕ್ಸ್ನಂತೆ ಬೂದಿಯಿಂದ ಮೇಲೆದ್ದು ಬರುವ ತಾಕತ್ತು ತಮಿಳುನಾಡಿನ ಈ ಹಾಲಿ ಮುಖ್ಯಮಂತ್ರಿಗೆ ಮಾತ್ರ ಇರುವ ಹಾಗೆ ಕಾಣಿಸುತ್ತದೆ! ತಮ್ಮ ಪರಮವೈರಿ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ ಸಕರ್ಾರ ನಿಮರ್ಿಸಿದ್ದ ಶಾಸಕಾಂಗ ಸಭೆಯ ಹೊಸ ಕಟ್ಟಡವನ್ನ ಅದು ಶಾಸನಸಭೆ ಅಧಿವೇಶನ ನಡೆಸಲು ಲಾಯಕ್ಕಾಗಿಲ್ಲ ಎಂಬ ಕಾರಣ ಕೊಟ್ಟು, ಅಲ್ಲಿ ಬಡಜನರಿಗಾಗಿ ಮಲ್ಟಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ನಡೆಸುವುದಾಗಿ ರಾಜ್ಯದ ವಿಧಾನ ಮಂಡಲದ ಅಧಿವೇಶನದಲ್ಲಿ ಘೋಷಿಸಿರುವುದು ವ್ಯಾಪಕವಾಗಿ ಶ್ಲಾಘಿಸಲ್ಪಟ್ಟಿದೆ. ಶಾಸನಸಭಾ ಕಟ್ಟಡವೆಂದು ಡಿಎಂಕೆ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಇದರ ಉದ್ಘಾಟನೆಯನ್ನು ಧಾಮ್ಧೂಮಾಗಿ ನೆರವೇರಿಸಲಾಗಿತ್ತು. ಅದ್ಯಾವುದನ್ನೂ ಲೆಕ್ಕಕ್ಕೇ ಇಟ್ಟುಕೊಳ್ಳದ ಜಯಾಡಳಿತ ಚೆನ್ನೈ ನಗರದ ಹೃದಯಭಾಗದಲ್ಲಿರುವ ಈ ಬೃಹತ್ ಕಟ್ಟಡವನ್ನು ಸೂಪರ್ಸ್ಷೆಷಾಲಿಟಿ ಆಸ್ಪತ್ರೆಯನ್ನಾಗಿಸುವುದರಿಂದ ಬೇರೆ ಯಾರಿಗಲ್ಲದಿದ್ದರೂ ಬಡವರಿಗಂತೂ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಆಶಯ ಜನತಾ ಜನಾರ್ದನರದ್ದು.
ಗಾಂಧಿ ಟೋಪಿಗೆ ಶುಕ್ರದೆಸೆ!

ಹಳೇ ರಾಜಕಾರಣಿಗಳು ಹಾಗೂ ಶಾಲಾ ಫ್ಯಾನ್ಸಿ ಡ್ರೆಸ್ ಸ್ಪಧರ್ೆಗಳಿಗಷ್ಟೆ ಸೀಮಿತವಾಗಿದ್ದ ಗಾಂಧಿ ಟೋಪಿ ಈಗ ಅಣ್ಣಾ ಹಜಾರೆ ಕಾರಣದಿಂದ ನರ್ಸರಿ ಮಕ್ಕಳಿಂದ ಐಐಟಿ ವಿದ್ಯಾಥರ್ಿಗಳ ವರೆಗೆ ಎಲ್ಲರ ತಲೆಮೇಲೆ ದೇಶದ ಮೂಲೆಮೂಲೆಯಲ್ಲೂ ರಾರಾಜಿಸುತ್ತಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಖಾದಿ ಟೋಪಿಗಳು ಮಾರಾಟವಾಗುತ್ತಿವೆ. ದಿನಕ್ಕೆ 100ರಿಂದ 200 ಟೋಪಿಗಳು ಖರೀದಿಯಾಗುತ್ತಿವೆ ಎನ್ನುವ ಖಾದಿ ಭಂಡಾರದ ಮಾಲಿಕರೊಬ್ಬರ ಪ್ರಕಾರ ಖಾದಿ ಟೋಪಿಗಳ ಬೆಲೆ 40 ರಿಂದ 60 ರೂ ವರೆಗೆ ಇದ್ದರೆ ಇದೇ ರೀತಿಯ ಟೆರಿಕಾಟ್ ಟೋಪಿಗೆ ಕೇವಲ 10 ರೂ. ಇಂಥವು ದಿನಕ್ಕೆ 1500ರಷ್ಟು ಮಾರಾಟವಾಗುತ್ತಿವೆಯಂತೆ! ಒಟ್ಟಿನಲ್ಲಿ ಈಗ ಗಾಂಧಿ ಟೋಪಿಗೆ ಅಣ್ಣಾ ಕಾರಣದಿಂದ ಶುಕ್ರದೆಸೆ! ಎಲ್ಲರ ಟೋಪಿ ಮೇಲೂ `ಮೈ ಅಣ್ಣಾ ಹ್ಞೂಂ'
ಭ್ರಷ್ಟಾಚಾರದ ಬಿಸಿ
ಅಣ್ಣಾ ಹಜಾರೆ ಮಾತೆತ್ತಿದರೆ ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಅನ್ನುತ್ತಾರೆ.. ಅವರೇನು ಮುಸ್ಲಿಮರನ್ನು ನೀವೂ ಬನ್ನಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಕರೆದಿದ್ದಾರೇನು? ಹೀಗಿರುವಾಗ ನೀವೇಕೆ ಈ ಚಳವಳಿಯಲ್ಲಿ ಭಾಗವಹಿಸಬೇಕು? ಅದರ ಅಗತ್ಯವೇನೂ ಇಲ್ಲ ಎಂದು ದೆಹಲಿಯ ಸೈಯದ್ ಇಮಾಮ್ ಬುಖಾರಿ ಹೊರಡಿಸಿದ್ದ ಫಮರ್ಾನಿಗೆ ಆ ಸಮುದಾಯದಲ್ಲಿ ಹೆಚ್ಚಿನ ಪ್ರತಿಕ್ರಿಯೆ ದೊರೆತಿಲ್ಲದ ಹಾಗೆ ಕಾಣುತ್ತದೆ! ಮಾಜಿ ಶಾಸಕ, ಸಂಸದರಿಂದ ಜನ ಸಾಮಾನ್ಯರ ವರೆಗೆ ನೂರಾರು ಮುಸ್ಲಿಮರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆಯವರ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಅಷ್ಟೇಅಲ್ಲ, ತಾವು ರೋಜಾ(ಉಪವಾಸ) ಮಾಡುತ್ತಿದ್ದರೂ ಅಲ್ಲಿನ ಪಾಕಶಾಲೆಯಲ್ಲಿ ಹಸಿದವರಿಗೆ ಊಟ ಬಡಿಸುವ ಸ್ವಯಂಸೇವಕರಾಗಿ ದುಡಿಯುತ್ತಿದ್ದರಂತೆ! ಭ್ರಷ್ಟಾಚಾರದ ಪಿಡುಗು ಕೋಮು, ಜಾತಿ ನೋಡಿ ಕಾಡುವುದಿಲ್ಲ ಎಂಬುದು ಬಹುಶಃ ಬುಖಾರಿಗೆ ಈಗಲಾದರೂ ಅರ್ಥವಾಗುತ್ತದೋ ಏನೋ!
Monday, August 22, 2011
ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera
(Script : Shantala)
ಪ್ರತಿ ದುಃಖದ ಹಿಂದೆ..
ಯಾವ ಕಸರತ್ತು ಮಾಡಿದ್ರೂ ಕೇವಲ ಒಂದು ವಾರದಲ್ಲಿ 2 ಕೆಜಿ ಕೊಬ್ಬು ಕರಗಿಸೋಕೆ ಖಂಡಿತಾ ಸಾಧ್ಯವಾಗುತ್ತಿರಲಿಲ್ಲ! ಅಂಥ ಮಹಿಮೆ ಪರಪ್ಪನ ಅಗ್ರಹಾರ ಜೈಲಿನದ್ದು. ಮನೆಯಲ್ಲಿ ತಿಂದುಂಡು ಸುಖವಾಗಿದ್ದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಜಗದೀಶ್ ಜೈಲು ಸೇರಿದ ಒಂದು ವಾರಕ್ಕೇ ಎರಡು ಕೆಜಿ ಸಣ್ಣಗಾಗಿದ್ದಾರಂತೆ! ಅದೂ ಮನೆ ಊಟ ಉಂಡೇ ಇಷ್ಟೊಂದು ಕ್ಷಿಪ್ರ ಬದಲಾವಣೆಯಾದರೆ ಇನ್ನು ಸೆರೆಮನೆಯ ಅಸಲಿ ಫುಡ್ ಹೊಟ್ಟೆ ಸೇರಿದ್ರೆ ಬಹುಶಃ ಯಾವ ಸ್ಲಿಮ್ಮಿಂಗ್ ಕ್ಯಾಪ್ಸೂಲ್-ಜ್ಯೂಸ್ ಮಾಡದ ಕೆಲಸವನ್ನ ಕಲ್ಲು ಮುದ್ದೆ-ನೀರು ಸಾರು ಮಾಡಿಬಿಟ್ಟಿರುತ್ತಿತ್ತೇನೋ! ಅದಕ್ಕೇ ಬಲ್ಲವರು ಹೇಳೋದು `ಪ್ರತಿ ದುಃಖದ ಹಿಂದೆ ಒಂದು ಸುಖವೂ ಹಿಂಬಾಲಿಸುತ್ತೆ ಅಂತ'!!
ಲಂಚ ತಗೊಳ್ಳೋದು ತಪ್ಪು ಹೇಗೋ ಹಾಗೇ ಕೊಡುವುದೂ ಕೂಡ ಅಪರಾಧ ಎಂದು ಮುಂಬೈ ಹೈಕೋಟರ್್ ಇತ್ತೀಚೆಗೆ ತೀರ್ಪನ್ನಿತ್ತಿದೆ. ಸೊಲ್ಲಾಪುರದಲ್ಲಿ ಪತ್ರಕರ್ತರೊಬ್ಬರು ಪೊಲೀಸ್ ಅಧಿಕಾರಿಯೊಬ್ಬರಿಗೆ 3 ಸಾವಿರ ರೂ ಲಂಚ ನೀಡಲು ಹೋಗಿ ಸಿಕ್ಕಿಬಿದ್ದಿದ್ದರು. ಈ ಲಂಚ ನಿರಾಕರಿಸಿದ ಪೊಲೀಸ್ ಅಧಿಕಾರಿ ತಮಗೆ ರಿಷವತ್ತು ನೀಡಲು ಬಂದವರ ಮೇಲೆ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋಟರ್್ ನೀಡಿದ ತೀಪರ್ಿನಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾನೂನಿನನ್ವಯ ಲಂಚ ನೀಡುವುದು ಈ ಅಪರಾಧಕ್ಕೆ ಕುಮ್ಮಕ್ಕು ನೀಡಿದಂತೆ ಎಂದು ಪರಿಗಣಿಸಲಾಗುವುದು ಮತ್ತು ಈ ದುಷ್ಪ್ರೇರಣೆ ಶಿಕ್ಷಾರ್ಹ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಲಂಚ ಕೊಡುವುದಕ್ಕೆ ಮುನ್ನ ಸರಿಯಾಗಿ ಆಲೋಚಿಸಿ ಮುನ್ನಡೆಯುವುದು ಒಳ್ಳೆಯದು.
ಪ್ರತಿವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸರಿಗೆ ಪದಕ ನೀಡಿ ಸನ್ಮಾನಿಸುವುದು ಸಂಪ್ರದಾಯ. ಹೀಗೆ ಈ ಸಾರಿ ಪದಕ ಪಡೆದವರಲ್ಲಿ ಡಿಐಜಿ ನಳಿನ್ ಪ್ರಭಾತ್ರ ಹೆಸರೂ ಇದೆ. ಕಳೆದ ಏಪ್ರಿಲ್ನಲ್ಲಿ ದಾಂತೇವಾಡಾದಲ್ಲಿ ಮಾವೋವಾದಿಗಳಿಂದ 75 ಸಿಆರ್ಪಿಏಫ್ ಯೋಧರ ಹತ್ಯಾಕಾಂಡಕ್ಕೆ ಈ ನಳಿನ್ ಪ್ರಭಾತ್ ತೆಗೆದುಕೊಂಡ ವಿವೇಚನಾರಹಿತ ನಿಲುವೇ ಕಾರಣ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಿದ್ದರೂ ಪ್ರಭಾತ್ರಿಗೆ 2009ರಲ್ಲಿ ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಆರು ಉಗ್ರರನ್ನು ಹೊಡೆದುರುಳಿಸಿದ ಸಾಹಸಕ್ಕಾಗಿ ಈಗ 2011ರಲ್ಲಿ ಪದಕ ನೀಡಿರುವುದು ವಿಚಿತ್ರವಾಗಿದೆ ಎನಿಸುವುದಿಲ್ಲವೇ! ಮಾವೋಗಳ ವಿರುದ್ಧದ ಕಾಯರ್ಾಚರಣೆಗೂ ಕಾಶ್ಮೀರ ಕಣಿವೆಯಲ್ಲಿನ ಕಾಯರ್ಾಚರಣೆಗೂ ಇರುವ ಅಜಗಜಾಂತರವನ್ನು ತಿಳಿಯದ ಈ ಅಧಿಕಾರಿಗೆ 2009ರಲ್ಲಿ ಆರು ಉಗ್ರವಾದಿಗಳನ್ನು ಕೊಂದು ಹಾಕಿರಬಹುದು ಆದರೆ 2010ರಲ್ಲಿ ನಮ್ಮ 75 ಯೋಧರ ಸಾವಿಗೆ ಕಾರಣಕರ್ತ. ಇಂಥವರಿಗೆ ಶೌರ್ಯ ಪದಕ ನೀಡಿದ್ದು ಎಷ್ಟು ಸಮಂಜಸ ಎಂಬುದು ಬಿಎಸ್ಎಫ್ ಅಧಿಕಾರಿಗಳ ತಕರಾರು.
ಗೃಹಮಂತ್ರಿಯ ಮನೆಗೇ ಕನ್ನ!
ಭಾರತದ ಹಾಲಿ ಗೃಹಸಚಿವ ಪಿ. ಚಿದಂಬರಮ್ ಅವರ ಕುಟುಂಬದ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಂದನೂರು ಗ್ರಾಮದಲ್ಲಿರುವ ಚಿದು ಅವರ ಕುಟುಂಬದ ಮನೆಗೆ ಕಳ್ಳರು ಇತ್ತೀಚೆಗೆ ಕನ್ನ ಹಾಕಿದ್ದಾರೆ. ಈ ಮನೆ ಚಿದಂಬರಮ್ ಹಾಗೂ ಅವರ ಉಳಿದಿಬ್ಬರು ಸಹೋದರರಿಗೆ ಸೇರಿದ್ದಾಗಿದೆ. ಈ ಮನೆಯ ಕಿಟಕಿ ಸರಳುಗಳು ಮತ್ತು ಬಾಗಿಲುಗಳನ್ನು ಮುರಿದು ಕಳ್ಳರು ಒಳಹೊಕ್ಕಿದ್ದಾರೆ. ಭಾರತದ ಗೃಹ ಸಚಿವರ ಮನೆಯೇ ಸುರಕ್ಷಿತವಲ್ಲ ಎಂದ ಮೇಲೆ ಇನ್ನು ಯಾರ ಮನೆ ತಾನೇ ಸುಭದ್ರವಾಗಿರಲು ಸಾಧ್ಯ? ತಮಿಳುನಾಡಿನಲ್ಲಿ ಚಿದು ವೈರಿ ಸಕರ್ಾರ ಅಧಿಕಾರದಲ್ಲಿರುವುದರಿಂದ ಇಂಥ ಘಟನೆಗಳಿಗೆ ಹೆಚ್ಚು ಮಹತ್ವ ನೀಡಬೇಕಿಲ್ಲ ಎಂಬ ಮಾತು ಕೇವಲ ಕ್ಲೀಷೆಯಾಗಬಲ್ಲದಷ್ಟೆ..
ಬದಲಾವಣೆಯ ಬಾವುಟ
ಈ ಬದಲಾವಣೆ ಯಾತಕ್ಕಾಗಿಯೋ ಗೊತ್ತಿಲ್ಲ! ಆದರೆ ಡಿಎಂಕೆ ಪಕ್ಷ ಅಸ್ತಿತ್ವಕ್ಕೆ ಬಂದ 62 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಿದೆ! ಕಾಂಗ್ರೆಸ್ನ ತತ್ವಗಳನ್ನು ಪ್ರಾರಂಭದಿಂದಲೂ ವಿರೋಧಿಸಿಕೊಂಡು ಬಂದಿರುವ ಈ ಅಪ್ಪಟ ದ್ರಾವಿಡ ಪಕ್ಷದವ ಹೈಕಮಾಂಡ್ಗೆ ಇದ್ದಕ್ಕಿದ್ದಂತೇ ಅದೇನನ್ನಿಸಿತೋ ಇಲ್ಲಾ ಜ್ಞಾನೋದಯವಾಯಿತೋ..ಒಟ್ಟಿನಲ್ಲಿ ಚೆನ್ನೈನಲ್ಲಿರುವ ಡಿಎಂಕೆ ಕೇಂದ್ರ ಕಚೇರಿಯ ಆವರಣದಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇಸರಿ ಬಿಳಿ ಹಸಿರು ಬಣ್ಣದ ತಿರಂಗಬಾವುಟ ಈ ಬಾರಿಯ ಸ್ವಾತಂತ್ರ್ಯೋತ್ಸವದಂದು ರಾರಾಜಿಸಿತು!
Sunday, August 14, 2011
Mahatma's letter on the occasion of Independence day 2011
Thursday, August 11, 2011
Monday, August 8, 2011
ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera
ವಾರದ ಗುದ್ದು

ಭ್ರಷ್ಟಾಚಾರವನ್ನು ಮಟ್ಟಾ ಹಾಕಿದರೆ ಭಯೋತ್ಪಾದನೆ ತಂತಾನೆ ಹೇಳಹೆಸರಿಲ್ಲದಂತಾಗುತ್ತದೆ
-ಸಂತೋಷ್ ಹೆಗ್ಡೆ, ಮಾಜಿ ಲೋಕಾಯುಕ್ತ
ತಮಿಳುನಾಡಿನಲ್ಲಿ ತಾಳಿಭಾಗ್ಯ
ದೇಶದ ಹೆಣ್ಣುಮಕ್ಕಳೆಲ್ಲ ದೀಪಾವಳಿ ವೇಳೆಗೆ ಚಿನ್ನದ ಬೆಲೆ ಕರೆಂಟು ಹೊಡಿಸುತ್ತಂತೆ ಎಂಬ ಭೀತಿಯಲ್ಲಿ ಅಡುಗೆಮನೆಯ ಡಬ್ಬ, ಸಂದಿಗೊಂದಿಗಳಲ್ಲಿ ಹುದುಗಿಸಿಟ್ಟಿದ್ದ ಪುಡಿ-ಹುಡಿಗಾಸುಗಳನ್ನೂ ಬಿಡದೆ ಚಿನ್ನಬೆಳ್ಳಿ ಅಂಗಡಿ ಮುಂದೆ ಕ್ಯೂ ನಿಂತಿದ್ದರೆ, ತಮಿಳುನಾಡಿನಲ್ಲಿ ಅಮ್ಮ ಜಯಲಲಿತಾ ತನ್ನ ಚುನಾವಣಾ ಆಶ್ವಾಸನೆ ಈಡೇರಿಕೆಗೆ 500 ಕೆಜಿ ಚಿನ್ನ ಖರೀದಿಸಲು ಈ ಸಾಲಿಗೆ 118.18 ಕೋಟಿ ರೂ ಮಂಜೂರು ಮಾಡಿದ್ದಾರೆ. ಈ ಸಾರಿ ಓಟು ಪಡೆದುಕೊಳ್ಳುವ ಸಂದರ್ಭದಲ್ಲಿ ಕೊಟ್ಟ ಮಾತಿಗೆ ತಪ್ಪಲಾರದೆ ಪುರಚ್ಚಿ ತಲೈವಿ, ರಾಜ್ಯದ ಬಡ ಹೆಣ್ಣುಮಕ್ಕಳು ಮದುವೆಗೆ `ತಿರುಮಾಂಗಲ್ಯ' ಮಾಡಿಸಲು ತಲಾ 4 ಗ್ರಾಂ ಚಿನ್ನ ನೀಡುವ ಯೋಜನೆಗೆ ಚಾಲನೆ ನೀಡಿದ್ದಾರೆ. ತಮಿಳುನಾಡು ಸಕರ್ಾರವು ಎಸ್ಬಿಐ ಹಾಗೂ ಇತರೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಗುಣಮಟ್ಟದ ಚಿನ್ನ ಖರೀದಿಸಲು ಮುಂದಾಗಿದ್ದು, ಫಲಾನುಭವಿಗಳಿಗೆ ಟೋಕನ್ ಮೂಲಕ 4 ಗ್ರಾಂ ಚಿನ್ನದ ನಾಣ್ಯ ವಿತರಿಸುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚಚರ್ೆ ನಡೆಯುತ್ತಿದೆ. ಒಟ್ಟಿನಲ್ಲಿ ತಮಿಳು ಹೆಂಗೆಳೆಯರೆಲ್ಲ ಈಗ ಮಾಂಗಲ್ಯ, ಮಾಂಗಲ್ಯ ನಮ್ಮ ಜೀವಕಿಂತ ಮೌಲ್ಯ ಎಂದು ಹಾಡುವ ಕಾಲವಿದಾದರೆ ಸಕರ್ಾರದ ಬೊಕ್ಕಸಕ್ಕೆ ಮಾತ್ರ ಇದು ಖಜಾನೆ ಖಾಲಿಯಾಗುವ ಸಮಯ!
*******************************************************************************
ಕೃಷ್ಣ ಅದೃಷ್ಟವೋ ಅದೃಷ್ಟ!
ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರ ಅದೃಷ್ಟವನ್ನು ಕಂಡು ಹಲಬುವವರೇ ಎಲ್ಲ! ಈ `ಹಲುಬಿಗ'ರಲ್ಲಿ ಹೆಚ್ಚಿನ ಮಂದಿ 60+ಗಳೇ ಎಂದು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಾಗಿಲ್ಲವಷ್ಟೆ. ಆಹಾ.. ವಿದೇಶಾಂಗ ವ್ಯವಹಾರ ಖಾತೆಯಲ್ಲಿದ್ದರೆ ದಿನಕ್ಕೊಬ್ಬ ವಿದೇಶೀ ಸುಂದರಿಯೊಡನೆ ಕೈಕುಲುಕುವ ಫೋಟೋ ಎಲ್ಲ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿತ್ತು.. ಸುದ್ದಿವಾಹಿನಿಗಳಲ್ಲೆಲ್ಲ ಇದೇ ಸುದ್ದಿ.. ಆಹಾ ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ ಎಂದು ಎಸ್.ಎಂ. ಕೃಷ್ಣ ಹಿಲರಿ ಕ್ಲಿಂಟನ್, ಹೀನಾ ರಬ್ಬಾನಿ ಖಾರ್ ಅವರೊಂದಿಗೆ ಕುಶಲೋಪರಿ ನಡೆಸುತ್ತಿರುವ ಫೋಟೊಗಳನ್ನು ಕಂಡವರೆಲ್ಲ ಕನರ್ಾಟಕದ ಈ ಮಾಜಿ ಮುಖ್ಯಮಂತ್ರಿಯ ಅದೃಷ್ಟವನ್ನು ಕಂಡು ಕರುಬಿದವರೇ. ಈ `ಕರುಬಿಗ'ರಲ್ಲಿ ಮಾಜಿ ರಾಜ್ಯಪಾಲ ಎನ್.ಡಿ. ತಿವಾರಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿರುವುದು ಸತ್ಯವೋ, ಮಿಥ್ಯೆಯೋ ತಿಳಿಯದಾಗಿದೆ!
**************************************************************************************
ದೈತ್ಯರಿಗೆ `ಮಿನಿ'ಯಲ್ಲಿ ನಿರಾಸಕ್ತಿ!
ಮಿನಿ ಕಾರುಗಳನ್ನು ತಯಾರಿಸಲು ದೈತ್ಯ ಕಾರು ಕಂಪನಿಗಳಿಗೆ ಆಸಕ್ತಿ ಇಲ್ಲವಂತೆ! ಎರಡು ವರ್ಷಗಳ ಹಿಂದೆ `ಟಾಟಾ'ದವರು ನ್ಯಾನೋ ಕಾರು ಮಾಡಿ ತೋರಿಸಿದಾಗ ಒಬ್ಬರ ಮೇಲೊಬ್ಬರಂತೆ ತಾವೂ ಪುಟಾಣಿ ಕಾರುಗಳನ್ನು ತಯಾರಿಸುವುದಾಗಿ ಘೋಷಿಸಿದ್ದ ಫೋಡರ್್, ಜನರಲ್ ಮೊಟಾರ್ಸ್, ರೆನಾಲ್ಟ್-ನಿಸ್ಸಾನ್ಗಳೆಲ್ಲ ಈಗ ತಮಗೆ ಈ ಯೋಜನೆಯಲ್ಲಿ ಆಸಕ್ತಿಯಿಲ್ಲ ಎಂದು ಸ್ಟಷ್ಪಪಡಿಸಿವೆ. ಈಗ ಭಾರತ ಹಾಗೂ ಚೀನಾದಲ್ಲಿ ಪುಟಾಣಿ ಕಾರು ಕೊಳ್ಳದೆಯೇ ನೇರವಾಗಿ ಮಧ್ಯಮ ಗಾತ್ರದ ಕಾರು ಕೊಳ್ಳುವಷ್ಟು ಆಥರ್ಿಕವಾಗಿ ಸಶಕ್ತರಾಗುತ್ತಿರುವವರ ಸಂಖ್ಯೆ ದಿನೇದಿನೇ ವೃದ್ಧಿಸುತ್ತಿದೆ. ಹೀಗಾಗಿ ಸುಖಾಸುಮ್ಮನೆ ಮಿನಿ ಕಾರು ತಯಾರಿಸುವುದರಲ್ಲಿ ಅರ್ಥವಿಲ್ಲ. ಟಾಟಾದ `ನ್ಯಾನೋ', ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. ಕೆಳ ಮಧ್ಯಮವರ್ಗದವರೂ ಕೂಡ ನ್ಯಾನೋ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಈಗ ಮಧ್ಯಮ ಗಾತ್ರದ ಕಾರುಗಳನ್ನು ತಯಾರಿಸುವುದೇ ಲಾಭದಾಯಕ ಎಂದು ಈ ಮೂರೂ ದೈತ್ಯ ಕಾರು ಕಂಪನಿಗಳು ಅಭಿಪ್ರಾಯಪಟ್ಟಿವೆ. ಯಾವ ಕಾರೇ ಬಂದರೂ ನಮ್ಮ ಭಾರತದ ಪ್ರಮುಖ ನಗರಗಳಲ್ಲಿನ ಟ್ರಾಫಿಕ್ ಜಾಮ್ ಸುಧಾರಿಸಲು ಸಾಧ್ಯವಿಲ್ಲ. ಈ ಕಂಪನಿಗಳೆಲ್ಲ ಮಧ್ಯಮ ಗಾತ್ರದ ಕಾರುಗಳಿಗಿಂತ ಆಕಾಶದಲ್ಲಿ ಹಾರಬಲ್ಲ ರೆಕ್ಕೆಯ ಕಾರುಗಳನ್ನು ತಯಾರಿಸುವುದೇ ಸೂಕ್ತವಲ್ಲವೇ

ಭ್ರಷ್ಟಾಚಾರವನ್ನು ಮಟ್ಟಾ ಹಾಕಿದರೆ ಭಯೋತ್ಪಾದನೆ ತಂತಾನೆ ಹೇಳಹೆಸರಿಲ್ಲದಂತಾಗುತ್ತದೆ
-ಸಂತೋಷ್ ಹೆಗ್ಡೆ, ಮಾಜಿ ಲೋಕಾಯುಕ್ತ
ತಮಿಳುನಾಡಿನಲ್ಲಿ ತಾಳಿಭಾಗ್ಯ
ದೇಶದ ಹೆಣ್ಣುಮಕ್ಕಳೆಲ್ಲ ದೀಪಾವಳಿ ವೇಳೆಗೆ ಚಿನ್ನದ ಬೆಲೆ ಕರೆಂಟು ಹೊಡಿಸುತ್ತಂತೆ ಎಂಬ ಭೀತಿಯಲ್ಲಿ ಅಡುಗೆಮನೆಯ ಡಬ್ಬ, ಸಂದಿಗೊಂದಿಗಳಲ್ಲಿ ಹುದುಗಿಸಿಟ್ಟಿದ್ದ ಪುಡಿ-ಹುಡಿಗಾಸುಗಳನ್ನೂ ಬಿಡದೆ ಚಿನ್ನಬೆಳ್ಳಿ ಅಂಗಡಿ ಮುಂದೆ ಕ್ಯೂ ನಿಂತಿದ್ದರೆ, ತಮಿಳುನಾಡಿನಲ್ಲಿ ಅಮ್ಮ ಜಯಲಲಿತಾ ತನ್ನ ಚುನಾವಣಾ ಆಶ್ವಾಸನೆ ಈಡೇರಿಕೆಗೆ 500 ಕೆಜಿ ಚಿನ್ನ ಖರೀದಿಸಲು ಈ ಸಾಲಿಗೆ 118.18 ಕೋಟಿ ರೂ ಮಂಜೂರು ಮಾಡಿದ್ದಾರೆ. ಈ ಸಾರಿ ಓಟು ಪಡೆದುಕೊಳ್ಳುವ ಸಂದರ್ಭದಲ್ಲಿ ಕೊಟ್ಟ ಮಾತಿಗೆ ತಪ್ಪಲಾರದೆ ಪುರಚ್ಚಿ ತಲೈವಿ, ರಾಜ್ಯದ ಬಡ ಹೆಣ್ಣುಮಕ್ಕಳು ಮದುವೆಗೆ `ತಿರುಮಾಂಗಲ್ಯ' ಮಾಡಿಸಲು ತಲಾ 4 ಗ್ರಾಂ ಚಿನ್ನ ನೀಡುವ ಯೋಜನೆಗೆ ಚಾಲನೆ ನೀಡಿದ್ದಾರೆ. ತಮಿಳುನಾಡು ಸಕರ್ಾರವು ಎಸ್ಬಿಐ ಹಾಗೂ ಇತರೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಗುಣಮಟ್ಟದ ಚಿನ್ನ ಖರೀದಿಸಲು ಮುಂದಾಗಿದ್ದು, ಫಲಾನುಭವಿಗಳಿಗೆ ಟೋಕನ್ ಮೂಲಕ 4 ಗ್ರಾಂ ಚಿನ್ನದ ನಾಣ್ಯ ವಿತರಿಸುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚಚರ್ೆ ನಡೆಯುತ್ತಿದೆ. ಒಟ್ಟಿನಲ್ಲಿ ತಮಿಳು ಹೆಂಗೆಳೆಯರೆಲ್ಲ ಈಗ ಮಾಂಗಲ್ಯ, ಮಾಂಗಲ್ಯ ನಮ್ಮ ಜೀವಕಿಂತ ಮೌಲ್ಯ ಎಂದು ಹಾಡುವ ಕಾಲವಿದಾದರೆ ಸಕರ್ಾರದ ಬೊಕ್ಕಸಕ್ಕೆ ಮಾತ್ರ ಇದು ಖಜಾನೆ ಖಾಲಿಯಾಗುವ ಸಮಯ!
*******************************************************************************
ಕೃಷ್ಣ ಅದೃಷ್ಟವೋ ಅದೃಷ್ಟ!
ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರ ಅದೃಷ್ಟವನ್ನು ಕಂಡು ಹಲಬುವವರೇ ಎಲ್ಲ! ಈ `ಹಲುಬಿಗ'ರಲ್ಲಿ ಹೆಚ್ಚಿನ ಮಂದಿ 60+ಗಳೇ ಎಂದು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಾಗಿಲ್ಲವಷ್ಟೆ. ಆಹಾ.. ವಿದೇಶಾಂಗ ವ್ಯವಹಾರ ಖಾತೆಯಲ್ಲಿದ್ದರೆ ದಿನಕ್ಕೊಬ್ಬ ವಿದೇಶೀ ಸುಂದರಿಯೊಡನೆ ಕೈಕುಲುಕುವ ಫೋಟೋ ಎಲ್ಲ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿತ್ತು.. ಸುದ್ದಿವಾಹಿನಿಗಳಲ್ಲೆಲ್ಲ ಇದೇ ಸುದ್ದಿ.. ಆಹಾ ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ ಎಂದು ಎಸ್.ಎಂ. ಕೃಷ್ಣ ಹಿಲರಿ ಕ್ಲಿಂಟನ್, ಹೀನಾ ರಬ್ಬಾನಿ ಖಾರ್ ಅವರೊಂದಿಗೆ ಕುಶಲೋಪರಿ ನಡೆಸುತ್ತಿರುವ ಫೋಟೊಗಳನ್ನು ಕಂಡವರೆಲ್ಲ ಕನರ್ಾಟಕದ ಈ ಮಾಜಿ ಮುಖ್ಯಮಂತ್ರಿಯ ಅದೃಷ್ಟವನ್ನು ಕಂಡು ಕರುಬಿದವರೇ. ಈ `ಕರುಬಿಗ'ರಲ್ಲಿ ಮಾಜಿ ರಾಜ್ಯಪಾಲ ಎನ್.ಡಿ. ತಿವಾರಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿರುವುದು ಸತ್ಯವೋ, ಮಿಥ್ಯೆಯೋ ತಿಳಿಯದಾಗಿದೆ!
**************************************************************************************
ದೈತ್ಯರಿಗೆ `ಮಿನಿ'ಯಲ್ಲಿ ನಿರಾಸಕ್ತಿ!
ಮಿನಿ ಕಾರುಗಳನ್ನು ತಯಾರಿಸಲು ದೈತ್ಯ ಕಾರು ಕಂಪನಿಗಳಿಗೆ ಆಸಕ್ತಿ ಇಲ್ಲವಂತೆ! ಎರಡು ವರ್ಷಗಳ ಹಿಂದೆ `ಟಾಟಾ'ದವರು ನ್ಯಾನೋ ಕಾರು ಮಾಡಿ ತೋರಿಸಿದಾಗ ಒಬ್ಬರ ಮೇಲೊಬ್ಬರಂತೆ ತಾವೂ ಪುಟಾಣಿ ಕಾರುಗಳನ್ನು ತಯಾರಿಸುವುದಾಗಿ ಘೋಷಿಸಿದ್ದ ಫೋಡರ್್, ಜನರಲ್ ಮೊಟಾರ್ಸ್, ರೆನಾಲ್ಟ್-ನಿಸ್ಸಾನ್ಗಳೆಲ್ಲ ಈಗ ತಮಗೆ ಈ ಯೋಜನೆಯಲ್ಲಿ ಆಸಕ್ತಿಯಿಲ್ಲ ಎಂದು ಸ್ಟಷ್ಪಪಡಿಸಿವೆ. ಈಗ ಭಾರತ ಹಾಗೂ ಚೀನಾದಲ್ಲಿ ಪುಟಾಣಿ ಕಾರು ಕೊಳ್ಳದೆಯೇ ನೇರವಾಗಿ ಮಧ್ಯಮ ಗಾತ್ರದ ಕಾರು ಕೊಳ್ಳುವಷ್ಟು ಆಥರ್ಿಕವಾಗಿ ಸಶಕ್ತರಾಗುತ್ತಿರುವವರ ಸಂಖ್ಯೆ ದಿನೇದಿನೇ ವೃದ್ಧಿಸುತ್ತಿದೆ. ಹೀಗಾಗಿ ಸುಖಾಸುಮ್ಮನೆ ಮಿನಿ ಕಾರು ತಯಾರಿಸುವುದರಲ್ಲಿ ಅರ್ಥವಿಲ್ಲ. ಟಾಟಾದ `ನ್ಯಾನೋ', ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. ಕೆಳ ಮಧ್ಯಮವರ್ಗದವರೂ ಕೂಡ ನ್ಯಾನೋ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಈಗ ಮಧ್ಯಮ ಗಾತ್ರದ ಕಾರುಗಳನ್ನು ತಯಾರಿಸುವುದೇ ಲಾಭದಾಯಕ ಎಂದು ಈ ಮೂರೂ ದೈತ್ಯ ಕಾರು ಕಂಪನಿಗಳು ಅಭಿಪ್ರಾಯಪಟ್ಟಿವೆ. ಯಾವ ಕಾರೇ ಬಂದರೂ ನಮ್ಮ ಭಾರತದ ಪ್ರಮುಖ ನಗರಗಳಲ್ಲಿನ ಟ್ರಾಫಿಕ್ ಜಾಮ್ ಸುಧಾರಿಸಲು ಸಾಧ್ಯವಿಲ್ಲ. ಈ ಕಂಪನಿಗಳೆಲ್ಲ ಮಧ್ಯಮ ಗಾತ್ರದ ಕಾರುಗಳಿಗಿಂತ ಆಕಾಶದಲ್ಲಿ ಹಾರಬಲ್ಲ ರೆಕ್ಕೆಯ ಕಾರುಗಳನ್ನು ತಯಾರಿಸುವುದೇ ಸೂಕ್ತವಲ್ಲವೇ
Monday, August 1, 2011
ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera
( Script: Shantala, Illustrations: Satish Sringeri)
ವಾರದ ಗುದ್ದು
" ಒಂದೊಮ್ಮೆ ಕಾರ್ಯಕರ್ತರ ಪಕ್ಷವಾಗಿದ್ದ ಬಿಜೆಪಿ ಈಗ ಪುತ್ರ, ಪುತ್ರಿಯರು ಮತ್ತು ಬಂಧುಗಳ ಪಕ್ಷವಾಗಿದೆ. ಪ್ರಜಾತಂತ್ರಕ್ಕೆ ಬದಲಾಗಿ `ಪರಿವಾರತಂತ್ರ' ಸಂಸ್ಕೃತಿ ಬಿಜೆಪಿಯಲ್ಲಿಂದು ವಿಜೃಂಬಿಸುತ್ತಿರುವುದು ವಿಷಾದನೀಯ"
-ಶಾಂತಕುಮಾರ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ
ಭ್ರಷ್ಟಾಚಾರ ಸಕ್ರಮಗೊಳಿಸಬೇಕಂತೆ!
ಮಹಾತ್ಮ ಗಾಂಧಿ ಈ ಮಾತನ್ನೇನಾದರೂ ಕೇಳಿದ್ದರೆ ಏನು ಮಾಡುತ್ತಿದ್ದರೋ ಇಲ್ಲಾ ಮಾಡಿಕೊಳ್ಳುತ್ತಿದ್ದರೋ ಗೊತ್ತಿಲ್ಲ! ಲಂಚ ತಗೊಳ್ಳೋದನ್ನ ಸಕ್ರಮಗೊಳಿಸುವುದರಿಂದ ಭ್ರಷ್ಟಾಚಾರದ ಪಿಡುಗನ್ನು ನಿಯಂತ್ರಿಸಬಹುದು ಎಂದು ದಿಲ್ಲಿಯಲ್ಲಿ ದಬರ್ಾರ್ ನಡೆಸುವವರೇ ಬಹಿರಂಗವಾಗಿ ಹೇಳುತ್ತಾರೆಂದರೆ.. ಅದೂ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಅಣ್ಣಾ ಹಜಾರೆ ನೇತೃತ್ವದ ಆಂದೋಲನದ ಕಾವು ಇನ್ನೂ ಆರುವ ಮೊದಲೇ! ಇರುವುದರಲ್ಲಿ ಪರವಾಗಿಲ್ಲ ಎಂಬಂತಿರುವ ಕೇಂದ್ರ ವಿತ್ತ ಸಚಿವ ಪ್ರಣವ್ ಮುಖಜರ್ಿ ಅವರ ಪ್ರಧಾನ ಸಲಹೆಗಾರ ಕೌಶಿಕ್ ಬಸು ಅವರ ಪ್ರಕಾರ ವಿಶ್ವದ ಪರಮಭ್ರಷ್ಟ ದೇಶಗಳಲ್ಲೊಂದಾಗಿರುವ ಭಾರತದಲ್ಲಿ ಲಂಚದ ಪಿಡುಗನ್ನು ಮಟ್ಟಾ ಹಾಕಲು ಭ್ರಷ್ಟಾಚಾರವನ್ನ ಸಕ್ರಮಗೊಳಿಸಬೇಕು. ಎಲ್ಲಾ ಅಕ್ರಮಗಳನ್ನು ಸಕ್ರಮಗೊಳಿಸುತ್ತಾ ಹೋದರೆ ಸತ್ಯ, ಸತ್ಯಾಗ್ರಹಗಳಿಗೆ ಬೆಲೆಯೇ ಇರುವುದಿಲ್ಲ. ಭ್ರಷ್ಟಾಚಾರವನ್ನೇ ಸಕ್ರಮಗೊಳಿಸಬೇಕೆಂದು ದೇಶದ ಆಥರ್ಿಕ ಸೂತ್ರಗಳನ್ನು ಹಿಡಿದವರು ಅಭಿಪ್ರಾಯಪಡುವುದಾದರೆ, ವೇಶ್ಯಾವಾಟಿಕೆಯನ್ನೂ ಸಕ್ರಮಗೊಳಿಸಬೇಕೆಂಬ ಕೂಗು ಕೇಳಿಬಂದರೂ ಆಶ್ಚರ್ಯಪಡಬೇಕಿಲ್ಲ!
*********************************************************************
ಕಲ್ಮಾಡಿ ಮರೆಗುಳಿತನದ ರೋಗಿ!
ಕಳ್ಳನಿಗೊಂದು ಪಿಳ್ಳೆ ನೆವ ಅನ್ನೋ ಗಾದೆ ಸದ್ಯದ ಮಟ್ಟಿಗೆ ಸುರೇಶ್ ಕಲ್ಮಾಡಿಗೆ ಸೂಕ್ತವಾಗಿ ಅನ್ವಯಿಸುತ್ತದೆ. ಕಾಮನ್ವೆಲ್ತ್ ಕ್ರೀಡಾಕೂಟದ ಬಹುಕೋಟಿ ಅಕ್ರಮ ಹಗರಣದ ಪ್ರಮುಖ ಆರೋಪಿ ಕಲ್ಮಾಡಿ ತಿಹಾರ್ ಜೈಲಿನಿಂದ ಹೊರಬರಲು ಶತಾಯಗತಾಯ ಪ್ರಯತ್ನಿಸುತ್ತಿದ್ದು, ಅದಕ್ಕೆ ಡಿಮೆನ್ಶಿಯಾ(ವೃದ್ಧಾಪ್ಯದಲ್ಲಿ ಬರುವ ಮರೆಗುಳಿತನ) ರೋಗದ ಆಸರೆ ಪಡೆಯಲು ಮುಂದಾಗಿದ್ದಾರೆ! ಕಳೆದ ನಾಲ್ಕೈದು ವರ್ಷಗಳಿಂದ ಈ ಕಾಯಿಲೆಯಿಂದ ತಮ್ಮ ಕಕ್ಷಿದಾರರು ಬಳಲುತ್ತಿದ್ದು, ಅವರಿಗೆ ಬಹುಶಃ ಬಹುಕೋಟಿ ಹಗರಣದ ವಿಚಾರಣೆ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಗಳಂತೆ ಸಹಕರಿಸಲು ಸಾಧ್ಯವಾಗದೆ ಹೋಗಬಹುದು ಎಂಬುದು ಕಲ್ಮಾಡಿ ಪರ ವಕೀಲರ ಅಂಬೋಣ. ಕೋಟಿಗಟ್ಟಲೆ ಹಣ ಗುಳುಂ ಮಾಡುವ ಸಂದರ್ಭದಲ್ಲಿ ಯಾವುದೇ ಸಮಸ್ಯೆ ನೀಡದ ಡಿಮೆನ್ಶಿಯಾ ಈಗ ತಿಹಾರ್ ಜೈಲಿನಲ್ಲಿರುವ ಸಂದರ್ಭದಲ್ಲಿ ಕಾಣಿಸಿಕೊಂಡಿರುವುದರ ಜೊತೆಗೆ ಈ ರೋಗ ಪುಣೆಯ ಈ ಸಂಸದರಿಗೆ ಸಂಸತ್ ಅಧಿವೇಶನದಲ್ಲಿ ಭಾಗವಹಿಸುವುದಕ್ಕೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲವೇ ಎಂದು ಆಶ್ಚರ್ಯವಾಗುತ್ತಿದೆ!
*************************************************************************
ಅಮರ್ ಬಾಯಿ ಬಿಟ್ಟರೆ
ಮುಲಾಯಂ ಬಣ್ಣ ಬಯಲು!
ಹಿಂದೊಂದು ಕಾಲದಲ್ಲಿ ಎರಡು ದೇಹ ಒಂದು ಆತ್ಮವಾಗಿದ್ದ, ಗೆಳೆತನಕ್ಕೆ ಮಾದರಿಯಾಗಿದ್ದ ಮುಲಾಯಂಸಿಂಗ್ ಯಾದವ್, ಅಮರ್ಸಿಂಗ್ ಜೋಡಿ ನಂತರ ಎಣ್ಣೆ ಸೀಗೆಕಾಯಿಗಳಾಗಿ ದೂರ ಸಿಡಿದು ಹೋಗಿರುವುದು ಗೊತ್ತಿದ್ದೇ. ಆದರೆ ಇದೀಗ ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಮರ್ಸಿಂಗ್ರನ್ನು ವಿಚಾರಣೆಗೊಳಪಡಿಸಿ ಮಾನಸಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಮುಲಾಯಂಜಿ ಹೇಳಿಕೆ ನೀಡಿರುವುದು, ಸದ್ಯ ಸಂಕಷ್ಟದಲ್ಲಿರುವ ತಮ್ಮ ಮಾಜಿ ಗೆಳೆಯನಿಗೆ ಆಸರೆಯಾಗಿ ಅಲ್ಲ, ಬದಲಿಗೆ ಸ್ವಯಂ ಬಚಾವೋ ಸಲುವಾಗಿ ಎಂಬುದು ಕಟುಸತ್ಯ. ಅಮರ್ ಬಾಯಿ ಬಿಟ್ಟರೆ ತನ್ನ ಬಣ್ಣ ಬಯಲಾಗುತ್ತೆ ಎಂಬುದನ್ನು ಚೆನ್ನಾಗಿ ಮನಗಂಡಿರುವ ಉತ್ತರಪ್ರದೇಶದ ಈ ಮಾಜಿ ಮುಖ್ಯಮಂತ್ರಿಗೆ, ದೆಹಲಿ ಪೊಲೀಸರು ಯಾವ ಕ್ಷಣದಲ್ಲಿ ಬೇಕಾದರೂ ತಮ್ಮ ಮನೆ ಬಾಗಿಲು ತಟ್ಟಬಹುದು ಎಂಬ ಹೆದರಿಕೆ ತಮ್ಮ ಮಾಜಿ ಜಿಗರಿದೋಸ್ತ್ ಪರ ಹೇಳಿಕೆ ನೀಡಲು ಪ್ರೇರೇಪಿಸಿರಬಹುದು.
*************************************************************
ಮೆಣಸಿನಕಾಯಿ ಬಾಂಬ್!
ಚಟ್ನಿ, ಉಪ್ಪಿನಕಾಯಿ, ಬಜ್ಜಿ, ಬೋಂಡಾಗಳಿಗೆ ಸೀಮಿತವಾಗಿದ್ದ ಮೆಣಸಿನಕಾಯಿಯಿಂದ ಬಾಂಬ್ ತಯಾರಿಸುವುದರ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ಭಾರತದ ಮೆಣಸಿನಕಾಯಿ ವಿಪರೀತ ಚುರುಕಾಗಿದ್ದು ಇದನ್ನು ಬಳಸಿ 81 ಮಿಮೀ ಕೈ ಬಾಂಬ್ ತಯಾರಿಸಲಾಗಿದ್ದು, ಈಗಾಗಲೇ ಭಾರತೀಯ ಸೇನೆಯ ಅಸ್ತ್ರಗಳಲ್ಲಿ ಒಂದಾಗಿ ಸೇರ್ಪಡೆಯೂ ಆಗಿರುವ . ಈ ಖಾರಾ ಬಾಂಬ್ ಇತ್ತೀಚಿಗೆ ಇಂಗ್ಲೆಂಡ್ ಮಾರುಕಟ್ಟೆಗೂ ಲಗ್ಗೆ ಇಟ್ಟು ಅಲ್ಲೂ ಭಾರೀ ಪ್ರಶಂಸೆ, ಬೇಡಿಕೆ ಗಿಟ್ಟಿಸುವಲ್ಲಿ ಯಶಸ್ವೀಯಾಗಿದೆ. ಗುಂಪು ಚೆದುರಿಸಲು ಅಪಾಯಕಾರಿಯಲ್ಲದ ಮೆಣಸಿನಪುಡಿಯ ಹ್ಯಾಂಡ್ ಗ್ರೆನೇಡ್ ಬಳಸುವ ಭಾರತದ ಕ್ರಮವನ್ನು ವಿಶ್ವದ ಇತರೆ ರಾಷ್ಟ್ರಗಳು ಶ್ಲಾಘಿಸಿದ್ದು, ಈ ಬಾಂಬನ್ನು `ನಾಗಾ ವೈಪರ್ ಚಿಲ್ಲಿ' ಎಂಬ ತಳಿಯನ್ನು ಬಳಸಿ ಸಿದ್ಧಪಡಿಸಲಾಗುತ್ತಿದೆ. ಸಿಯಾಚಿನ್ ಹಿಮ ಪ್ರದೇಶದಲ್ಲಿನ ಚಳಿಯನ್ನು ಎದುರಿಸಲು ದೇಹದಲ್ಲಿ ಉಷ್ಣವನ್ನು ಹೆಚ್ಚಿಸಲು ವಿಶ್ವದ ಅತಿಖಾರದ ಮೆಣಸಿನಕಾಯಿಯಾದ `ಭೂತ್ ಜಲೋಕಿಯಾ'ವನ್ನು ಈಗಾಗಲೇ ಬಳಸಲಾಗಿದ್ದು, ನಾಗಾ ವೈಪರ್ ಚಿಲ್ಲಿಯ ಕೈಬಾಂಬ್ನ್ನು ಪುಂಡು ಆನೆಗಳ ನಿಯಂತ್ರಣಕ್ಕೂ ಮಧ್ಯಪ್ರದೇಶದಲ್ಲಿ ಬಳಸಲಾಗುತ್ತಿದೆ. ಈ ಮೆಣಸಿನಕಾಯಿ ಗ್ರೆನೇಡ್ ದಾಳಿಗೆ ತುತ್ತಾದವರು ಅವರ ಜನ್ಮೇಪಿ ಖಾರದ ಹೆಸರೆತ್ತುವ ಸಾಹಸ ಮಾಡುವುದಿಲ್ಲವಂತೆ!
**********************************************************************
ಚೀನಾದಲ್ಲಿ ಈಗ ಆ್ಯಪಲ್ ಯುಗ
ಅಮೆರಿಕಾ ಆದಿಯಾಗಿ ವಿಶ್ವದ ಎಲ್ಲ ಮಾರುಕಟ್ಟೆಗಳಲ್ಲಿ `ಮೇಡ್ ಇನ್ ಚೈನಾ' ಸಾಮಗ್ರಿಗಳ ಪಾರುಪತ್ಯವಾದರೆ ಚೀನಾದಲ್ಲಿ ಮಾತ್ರ ಈಗ ಆ್ಯಪಲ್ ಯುಗ! ರಾಜಧಾನಿ ಬೀಜಿಂಗ್ ಹಾಗೂ ಶಾಂಘೈಗಳಲ್ಲಿ ತಲಾ ಎರಡು `ಆ್ಯಪಲ್ ಸ್ಟೋರ್' ಪ್ರಾರಂಭವಾಗಿದ್ದು ಇಲ್ಲಿನ ಜನಜಂಗುಳಿ ನಿಯಂತ್ರಿಸುವುದೇ ಸಿಬ್ಬಂದಿಗೆ ದೊಡ್ಡ ತಾಪತ್ರಯವಂತೆ! 16000 ಚದರ ಅಡಿ ವಿಸ್ತೀರ್ಣದ ಬೃಹತ್ ಮಳಿಗೆಯಾಗಿದ್ದರೂ ಈ ಗ್ಯಾಡ್ಜೆಟ್ ಸ್ಟೋರ್ ಒಳಹೊಕ್ಕು ಹೊರಬರಲು ಹರಸಾಹಸ ಪಡಲೇಬೇಕಂತೆ! ಟ್ವಿಟ್ಟರ್, ಫೇಸ್ಬುಕ್, ಗೂಗಲ್, ಗೂಗಲ್ ಪ್ಲಸ್ಗಳನ್ನು ಗಾವುದ ದೂರ ಇರಿಸಿರುವ ಚೀನಾದ ಕಮ್ಯುನಿಸ್ಟ್ ಆಡಳಿತವೂ ಆ್ಯಪಲ್ನ ನಿತ್ಯನೂತನ ಉತ್ಪನ್ನಗಳಿಗೆ ಮಾರುಹೋಗಿದೆಯಂತೆ! 5ಜಿ ಐಫೋನ್, ಟಚ್, ಐಪಾಡ್, ಐಪಾಡ್-2, ಮ್ಯಾಕ್ಬುಕ್ ಮೊದಲಾದ ಆ್ಯಪಲ್ ಉತ್ಪನ್ನಗಳನ್ನು ಕಂಡೊಡನೆ ಸಿಡಕಲು ಮೋರೆಯ ಚೀನೀ ಅಧಿಕಾರಿಗಳೇ ನಸುನಗೆ ಬೀರುತ್ತಾರೆಂದರೆ ಇನ್ನು ಹದಿಹರೆಯದವರು ಈ ಗ್ಯಾಡ್ಜೆಟ್ಗಳ ಫ್ಯಾನ್ಗಳಾಗದಿರಲು ಸಾಧ್ಯವೇ? ಅಮೆರಿಕೆಯ ಮನ್ಹಾಟನ್ನ ಫಿಫ್ತ್ ಅವೆನ್ಯೂನಲ್ಲಿರುವ ಆ್ಯಪಲ್ ಸ್ಟೋರ್ನ ಆದಾಯಕ್ಕಿಂತಲೂ ಬೀಜಿಂಗ್, ಶಾಂಘೈಗಳಲ್ಲಿರುವ ಈ ಕಂಪನಿಯ ಮಳಿಗೆಗಳಿಂದ ಹೆಚ್ಚಿನ ಆದಾಯವಿದೆಯೆಂದರೆ ಚೀನೀಯರು ಅದ್ಯಾವ ಪರಿಯಲ್ಲಿ ಆ್ಯಪಲ್ಗೆ ಮಾರುಹೋಗಿದ್ದಾರೆ ಎಂಬುದು ತಿಳಿಯುತ್ತದಷ್ಟೆ..
-ಶಾಂತಲಾ
ವಾರದ ಗುದ್ದು
" ಒಂದೊಮ್ಮೆ ಕಾರ್ಯಕರ್ತರ ಪಕ್ಷವಾಗಿದ್ದ ಬಿಜೆಪಿ ಈಗ ಪುತ್ರ, ಪುತ್ರಿಯರು ಮತ್ತು ಬಂಧುಗಳ ಪಕ್ಷವಾಗಿದೆ. ಪ್ರಜಾತಂತ್ರಕ್ಕೆ ಬದಲಾಗಿ `ಪರಿವಾರತಂತ್ರ' ಸಂಸ್ಕೃತಿ ಬಿಜೆಪಿಯಲ್ಲಿಂದು ವಿಜೃಂಬಿಸುತ್ತಿರುವುದು ವಿಷಾದನೀಯ"
-ಶಾಂತಕುಮಾರ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ
ಭ್ರಷ್ಟಾಚಾರ ಸಕ್ರಮಗೊಳಿಸಬೇಕಂತೆ!
ಮಹಾತ್ಮ ಗಾಂಧಿ ಈ ಮಾತನ್ನೇನಾದರೂ ಕೇಳಿದ್ದರೆ ಏನು ಮಾಡುತ್ತಿದ್ದರೋ ಇಲ್ಲಾ ಮಾಡಿಕೊಳ್ಳುತ್ತಿದ್ದರೋ ಗೊತ್ತಿಲ್ಲ! ಲಂಚ ತಗೊಳ್ಳೋದನ್ನ ಸಕ್ರಮಗೊಳಿಸುವುದರಿಂದ ಭ್ರಷ್ಟಾಚಾರದ ಪಿಡುಗನ್ನು ನಿಯಂತ್ರಿಸಬಹುದು ಎಂದು ದಿಲ್ಲಿಯಲ್ಲಿ ದಬರ್ಾರ್ ನಡೆಸುವವರೇ ಬಹಿರಂಗವಾಗಿ ಹೇಳುತ್ತಾರೆಂದರೆ.. ಅದೂ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಅಣ್ಣಾ ಹಜಾರೆ ನೇತೃತ್ವದ ಆಂದೋಲನದ ಕಾವು ಇನ್ನೂ ಆರುವ ಮೊದಲೇ! ಇರುವುದರಲ್ಲಿ ಪರವಾಗಿಲ್ಲ ಎಂಬಂತಿರುವ ಕೇಂದ್ರ ವಿತ್ತ ಸಚಿವ ಪ್ರಣವ್ ಮುಖಜರ್ಿ ಅವರ ಪ್ರಧಾನ ಸಲಹೆಗಾರ ಕೌಶಿಕ್ ಬಸು ಅವರ ಪ್ರಕಾರ ವಿಶ್ವದ ಪರಮಭ್ರಷ್ಟ ದೇಶಗಳಲ್ಲೊಂದಾಗಿರುವ ಭಾರತದಲ್ಲಿ ಲಂಚದ ಪಿಡುಗನ್ನು ಮಟ್ಟಾ ಹಾಕಲು ಭ್ರಷ್ಟಾಚಾರವನ್ನ ಸಕ್ರಮಗೊಳಿಸಬೇಕು. ಎಲ್ಲಾ ಅಕ್ರಮಗಳನ್ನು ಸಕ್ರಮಗೊಳಿಸುತ್ತಾ ಹೋದರೆ ಸತ್ಯ, ಸತ್ಯಾಗ್ರಹಗಳಿಗೆ ಬೆಲೆಯೇ ಇರುವುದಿಲ್ಲ. ಭ್ರಷ್ಟಾಚಾರವನ್ನೇ ಸಕ್ರಮಗೊಳಿಸಬೇಕೆಂದು ದೇಶದ ಆಥರ್ಿಕ ಸೂತ್ರಗಳನ್ನು ಹಿಡಿದವರು ಅಭಿಪ್ರಾಯಪಡುವುದಾದರೆ, ವೇಶ್ಯಾವಾಟಿಕೆಯನ್ನೂ ಸಕ್ರಮಗೊಳಿಸಬೇಕೆಂಬ ಕೂಗು ಕೇಳಿಬಂದರೂ ಆಶ್ಚರ್ಯಪಡಬೇಕಿಲ್ಲ!
*********************************************************************
ಕಲ್ಮಾಡಿ ಮರೆಗುಳಿತನದ ರೋಗಿ!
ಕಳ್ಳನಿಗೊಂದು ಪಿಳ್ಳೆ ನೆವ ಅನ್ನೋ ಗಾದೆ ಸದ್ಯದ ಮಟ್ಟಿಗೆ ಸುರೇಶ್ ಕಲ್ಮಾಡಿಗೆ ಸೂಕ್ತವಾಗಿ ಅನ್ವಯಿಸುತ್ತದೆ. ಕಾಮನ್ವೆಲ್ತ್ ಕ್ರೀಡಾಕೂಟದ ಬಹುಕೋಟಿ ಅಕ್ರಮ ಹಗರಣದ ಪ್ರಮುಖ ಆರೋಪಿ ಕಲ್ಮಾಡಿ ತಿಹಾರ್ ಜೈಲಿನಿಂದ ಹೊರಬರಲು ಶತಾಯಗತಾಯ ಪ್ರಯತ್ನಿಸುತ್ತಿದ್ದು, ಅದಕ್ಕೆ ಡಿಮೆನ್ಶಿಯಾ(ವೃದ್ಧಾಪ್ಯದಲ್ಲಿ ಬರುವ ಮರೆಗುಳಿತನ) ರೋಗದ ಆಸರೆ ಪಡೆಯಲು ಮುಂದಾಗಿದ್ದಾರೆ! ಕಳೆದ ನಾಲ್ಕೈದು ವರ್ಷಗಳಿಂದ ಈ ಕಾಯಿಲೆಯಿಂದ ತಮ್ಮ ಕಕ್ಷಿದಾರರು ಬಳಲುತ್ತಿದ್ದು, ಅವರಿಗೆ ಬಹುಶಃ ಬಹುಕೋಟಿ ಹಗರಣದ ವಿಚಾರಣೆ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಗಳಂತೆ ಸಹಕರಿಸಲು ಸಾಧ್ಯವಾಗದೆ ಹೋಗಬಹುದು ಎಂಬುದು ಕಲ್ಮಾಡಿ ಪರ ವಕೀಲರ ಅಂಬೋಣ. ಕೋಟಿಗಟ್ಟಲೆ ಹಣ ಗುಳುಂ ಮಾಡುವ ಸಂದರ್ಭದಲ್ಲಿ ಯಾವುದೇ ಸಮಸ್ಯೆ ನೀಡದ ಡಿಮೆನ್ಶಿಯಾ ಈಗ ತಿಹಾರ್ ಜೈಲಿನಲ್ಲಿರುವ ಸಂದರ್ಭದಲ್ಲಿ ಕಾಣಿಸಿಕೊಂಡಿರುವುದರ ಜೊತೆಗೆ ಈ ರೋಗ ಪುಣೆಯ ಈ ಸಂಸದರಿಗೆ ಸಂಸತ್ ಅಧಿವೇಶನದಲ್ಲಿ ಭಾಗವಹಿಸುವುದಕ್ಕೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲವೇ ಎಂದು ಆಶ್ಚರ್ಯವಾಗುತ್ತಿದೆ!
*************************************************************************
ಅಮರ್ ಬಾಯಿ ಬಿಟ್ಟರೆ
ಮುಲಾಯಂ ಬಣ್ಣ ಬಯಲು!
ಹಿಂದೊಂದು ಕಾಲದಲ್ಲಿ ಎರಡು ದೇಹ ಒಂದು ಆತ್ಮವಾಗಿದ್ದ, ಗೆಳೆತನಕ್ಕೆ ಮಾದರಿಯಾಗಿದ್ದ ಮುಲಾಯಂಸಿಂಗ್ ಯಾದವ್, ಅಮರ್ಸಿಂಗ್ ಜೋಡಿ ನಂತರ ಎಣ್ಣೆ ಸೀಗೆಕಾಯಿಗಳಾಗಿ ದೂರ ಸಿಡಿದು ಹೋಗಿರುವುದು ಗೊತ್ತಿದ್ದೇ. ಆದರೆ ಇದೀಗ ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಮರ್ಸಿಂಗ್ರನ್ನು ವಿಚಾರಣೆಗೊಳಪಡಿಸಿ ಮಾನಸಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಮುಲಾಯಂಜಿ ಹೇಳಿಕೆ ನೀಡಿರುವುದು, ಸದ್ಯ ಸಂಕಷ್ಟದಲ್ಲಿರುವ ತಮ್ಮ ಮಾಜಿ ಗೆಳೆಯನಿಗೆ ಆಸರೆಯಾಗಿ ಅಲ್ಲ, ಬದಲಿಗೆ ಸ್ವಯಂ ಬಚಾವೋ ಸಲುವಾಗಿ ಎಂಬುದು ಕಟುಸತ್ಯ. ಅಮರ್ ಬಾಯಿ ಬಿಟ್ಟರೆ ತನ್ನ ಬಣ್ಣ ಬಯಲಾಗುತ್ತೆ ಎಂಬುದನ್ನು ಚೆನ್ನಾಗಿ ಮನಗಂಡಿರುವ ಉತ್ತರಪ್ರದೇಶದ ಈ ಮಾಜಿ ಮುಖ್ಯಮಂತ್ರಿಗೆ, ದೆಹಲಿ ಪೊಲೀಸರು ಯಾವ ಕ್ಷಣದಲ್ಲಿ ಬೇಕಾದರೂ ತಮ್ಮ ಮನೆ ಬಾಗಿಲು ತಟ್ಟಬಹುದು ಎಂಬ ಹೆದರಿಕೆ ತಮ್ಮ ಮಾಜಿ ಜಿಗರಿದೋಸ್ತ್ ಪರ ಹೇಳಿಕೆ ನೀಡಲು ಪ್ರೇರೇಪಿಸಿರಬಹುದು.
*************************************************************
ಮೆಣಸಿನಕಾಯಿ ಬಾಂಬ್!

ಚಟ್ನಿ, ಉಪ್ಪಿನಕಾಯಿ, ಬಜ್ಜಿ, ಬೋಂಡಾಗಳಿಗೆ ಸೀಮಿತವಾಗಿದ್ದ ಮೆಣಸಿನಕಾಯಿಯಿಂದ ಬಾಂಬ್ ತಯಾರಿಸುವುದರ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ಭಾರತದ ಮೆಣಸಿನಕಾಯಿ ವಿಪರೀತ ಚುರುಕಾಗಿದ್ದು ಇದನ್ನು ಬಳಸಿ 81 ಮಿಮೀ ಕೈ ಬಾಂಬ್ ತಯಾರಿಸಲಾಗಿದ್ದು, ಈಗಾಗಲೇ ಭಾರತೀಯ ಸೇನೆಯ ಅಸ್ತ್ರಗಳಲ್ಲಿ ಒಂದಾಗಿ ಸೇರ್ಪಡೆಯೂ ಆಗಿರುವ . ಈ ಖಾರಾ ಬಾಂಬ್ ಇತ್ತೀಚಿಗೆ ಇಂಗ್ಲೆಂಡ್ ಮಾರುಕಟ್ಟೆಗೂ ಲಗ್ಗೆ ಇಟ್ಟು ಅಲ್ಲೂ ಭಾರೀ ಪ್ರಶಂಸೆ, ಬೇಡಿಕೆ ಗಿಟ್ಟಿಸುವಲ್ಲಿ ಯಶಸ್ವೀಯಾಗಿದೆ. ಗುಂಪು ಚೆದುರಿಸಲು ಅಪಾಯಕಾರಿಯಲ್ಲದ ಮೆಣಸಿನಪುಡಿಯ ಹ್ಯಾಂಡ್ ಗ್ರೆನೇಡ್ ಬಳಸುವ ಭಾರತದ ಕ್ರಮವನ್ನು ವಿಶ್ವದ ಇತರೆ ರಾಷ್ಟ್ರಗಳು ಶ್ಲಾಘಿಸಿದ್ದು, ಈ ಬಾಂಬನ್ನು `ನಾಗಾ ವೈಪರ್ ಚಿಲ್ಲಿ' ಎಂಬ ತಳಿಯನ್ನು ಬಳಸಿ ಸಿದ್ಧಪಡಿಸಲಾಗುತ್ತಿದೆ. ಸಿಯಾಚಿನ್ ಹಿಮ ಪ್ರದೇಶದಲ್ಲಿನ ಚಳಿಯನ್ನು ಎದುರಿಸಲು ದೇಹದಲ್ಲಿ ಉಷ್ಣವನ್ನು ಹೆಚ್ಚಿಸಲು ವಿಶ್ವದ ಅತಿಖಾರದ ಮೆಣಸಿನಕಾಯಿಯಾದ `ಭೂತ್ ಜಲೋಕಿಯಾ'ವನ್ನು ಈಗಾಗಲೇ ಬಳಸಲಾಗಿದ್ದು, ನಾಗಾ ವೈಪರ್ ಚಿಲ್ಲಿಯ ಕೈಬಾಂಬ್ನ್ನು ಪುಂಡು ಆನೆಗಳ ನಿಯಂತ್ರಣಕ್ಕೂ ಮಧ್ಯಪ್ರದೇಶದಲ್ಲಿ ಬಳಸಲಾಗುತ್ತಿದೆ. ಈ ಮೆಣಸಿನಕಾಯಿ ಗ್ರೆನೇಡ್ ದಾಳಿಗೆ ತುತ್ತಾದವರು ಅವರ ಜನ್ಮೇಪಿ ಖಾರದ ಹೆಸರೆತ್ತುವ ಸಾಹಸ ಮಾಡುವುದಿಲ್ಲವಂತೆ!
**********************************************************************
ಚೀನಾದಲ್ಲಿ ಈಗ ಆ್ಯಪಲ್ ಯುಗ
ಅಮೆರಿಕಾ ಆದಿಯಾಗಿ ವಿಶ್ವದ ಎಲ್ಲ ಮಾರುಕಟ್ಟೆಗಳಲ್ಲಿ `ಮೇಡ್ ಇನ್ ಚೈನಾ' ಸಾಮಗ್ರಿಗಳ ಪಾರುಪತ್ಯವಾದರೆ ಚೀನಾದಲ್ಲಿ ಮಾತ್ರ ಈಗ ಆ್ಯಪಲ್ ಯುಗ! ರಾಜಧಾನಿ ಬೀಜಿಂಗ್ ಹಾಗೂ ಶಾಂಘೈಗಳಲ್ಲಿ ತಲಾ ಎರಡು `ಆ್ಯಪಲ್ ಸ್ಟೋರ್' ಪ್ರಾರಂಭವಾಗಿದ್ದು ಇಲ್ಲಿನ ಜನಜಂಗುಳಿ ನಿಯಂತ್ರಿಸುವುದೇ ಸಿಬ್ಬಂದಿಗೆ ದೊಡ್ಡ ತಾಪತ್ರಯವಂತೆ! 16000 ಚದರ ಅಡಿ ವಿಸ್ತೀರ್ಣದ ಬೃಹತ್ ಮಳಿಗೆಯಾಗಿದ್ದರೂ ಈ ಗ್ಯಾಡ್ಜೆಟ್ ಸ್ಟೋರ್ ಒಳಹೊಕ್ಕು ಹೊರಬರಲು ಹರಸಾಹಸ ಪಡಲೇಬೇಕಂತೆ! ಟ್ವಿಟ್ಟರ್, ಫೇಸ್ಬುಕ್, ಗೂಗಲ್, ಗೂಗಲ್ ಪ್ಲಸ್ಗಳನ್ನು ಗಾವುದ ದೂರ ಇರಿಸಿರುವ ಚೀನಾದ ಕಮ್ಯುನಿಸ್ಟ್ ಆಡಳಿತವೂ ಆ್ಯಪಲ್ನ ನಿತ್ಯನೂತನ ಉತ್ಪನ್ನಗಳಿಗೆ ಮಾರುಹೋಗಿದೆಯಂತೆ! 5ಜಿ ಐಫೋನ್, ಟಚ್, ಐಪಾಡ್, ಐಪಾಡ್-2, ಮ್ಯಾಕ್ಬುಕ್ ಮೊದಲಾದ ಆ್ಯಪಲ್ ಉತ್ಪನ್ನಗಳನ್ನು ಕಂಡೊಡನೆ ಸಿಡಕಲು ಮೋರೆಯ ಚೀನೀ ಅಧಿಕಾರಿಗಳೇ ನಸುನಗೆ ಬೀರುತ್ತಾರೆಂದರೆ ಇನ್ನು ಹದಿಹರೆಯದವರು ಈ ಗ್ಯಾಡ್ಜೆಟ್ಗಳ ಫ್ಯಾನ್ಗಳಾಗದಿರಲು ಸಾಧ್ಯವೇ? ಅಮೆರಿಕೆಯ ಮನ್ಹಾಟನ್ನ ಫಿಫ್ತ್ ಅವೆನ್ಯೂನಲ್ಲಿರುವ ಆ್ಯಪಲ್ ಸ್ಟೋರ್ನ ಆದಾಯಕ್ಕಿಂತಲೂ ಬೀಜಿಂಗ್, ಶಾಂಘೈಗಳಲ್ಲಿರುವ ಈ ಕಂಪನಿಯ ಮಳಿಗೆಗಳಿಂದ ಹೆಚ್ಚಿನ ಆದಾಯವಿದೆಯೆಂದರೆ ಚೀನೀಯರು ಅದ್ಯಾವ ಪರಿಯಲ್ಲಿ ಆ್ಯಪಲ್ಗೆ ಮಾರುಹೋಗಿದ್ದಾರೆ ಎಂಬುದು ತಿಳಿಯುತ್ತದಷ್ಟೆ..
-ಶಾಂತಲಾ
Tuesday, July 26, 2011
ನ್ಯೂಸ್ಡೈಜೆಸ್ಟ್ ----- NEWSDIGEST....weekly column in Karmaveera
( Script: Shantala, Illustrations: Satish Sringeri)
ವಾರದ ಗುದ್ದು
ರಾಜ್ಯಸರ್ಕಾರ ಇಲ್ಲಿಯವರೆಗೆ ಅದೆಷ್ಟು ಸುಳ್ಳು ಪ್ರಮಾಣಪತ್ರಗಳನ್ನು ಕೊಟ್ಟಿದೆಯೋ! ಇವುಗಳನ್ನು ಆಧರಿಸಿ ನಾವು ಅದೆಷ್ಟು ತಪ್ಪು ಆದೇಶಗಳನ್ನು ನೀಡಿದ್ದೇವೋ ಆ ದೇವರಿಗೇ ಗೊತ್ತು!!
-ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಜೆ.ಎಸ್. ಕೆಹರ್
***********************************************************************
ಸೊಂಟಲಿನಿ.. ಅಲ್ಲಲ್ಲ ಕುಂಡಲಿನಿ ಯೋಗದ ಸಾಕ್ಷಾತ್ಕಾರವಾದ ನಂತರ ಮತ್ತೆ ಇನ್ಯಾವ ಸಿದ್ಧಿಗಾಗಿ `ಶ್ರೀ' ನಿತ್ಯಾನಂದಸ್ವಾಮಿ ಹಿಮಾಲಯಕ್ಕೆ ಹೊರಟಿದ್ದಾರೋ ಗೊತ್ತಿಲ್ಲ! ಗುರುಪೂಣರ್ಿಮೆಯ ದಿನದಂದು ಬೆಂಗಳೂರಿನ ಬಿಡದಿ ಬಳಿಯ ಆಶ್ರಮದಲ್ಲಿ ತಮ್ಮ ಭಕ್ತಾದಿಗಳಿಗೆಲ್ಲ ಕುಂಡಲಿನಿಯ ಸಾಕ್ಷಾತ್ಕಾರಗೊಳಿಸಿ ಅವರೆನ್ನೆಲ್ಲ ಕಪ್ಪೆ ಕುಪ್ಪಳಿಸುವ ಕುಣಿತದ ಮೂಲಕ ಧನ್ಯರಾಗಿಸಿದ್ದು ಮಾಧ್ಯಮಗಳಲ್ಲೆಲ್ಲ ಬಿಸಿಬಿಸಿ ಸುದ್ದಿ-ಚಚರ್ೆಗಳಿಗೆ ಆಹಾರವಾಗುತ್ತಿದ್ದಂತೇ ಮಾನಸ ಸರೋವರ ಯಾತ್ರೆಯ ನೆಪದಲ್ಲಿ ನಿತ್ಯಾನಂದರು ಹಿಮಾಲಯದತ್ತ ಮುಖ ಮಾಡಿದ್ದಾರೆ. ಡಿಸೆಂಬರ್ನಲ್ಲಿ ಮಾನಸ ಸರೋವರದಿಂದ ಹಿಂತಿರುಗಿದಾಗ ಭಕ್ತಾದಿಗಳಿಗೆ ಸೊಂಟಲಿನಿ ಸ್ಸಾರಿ ಕುಂಡಲಿನಿ ಭಾಗ-2ರ ಸಾಕ್ಷಾತ್ಕಾರ ಮಾಡಿಸುತ್ತಾರೋ ಏನೋ ಕಾದು ನೋಡಬೇಕು!!
************************************************
ಶಾಲಾಕಾಲೇಜುಗಳ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ ಪಿಜ್ಜಾ ಬರ್ಗರ್ ಹಾವಳಿ ವಿಪರೀತವಾಗಿರುವುದು ಕೊನೆಗೂ ಕೇಂದ್ರ ಸಕರ್ಾರದ ಗಮನಕ್ಕೆ ಬಂದಿದ್ದು ಈ ಜಂಕ್ಫುಡ್ ಮಾರಾಟಕ್ಕೆ(ವಿದ್ಯಾ ಸಂಸ್ಥೆಗಳ ಬಳಿ) ಕಡಿವಾಣ ಹಾಕಿ ಅವುಗಳ ಬದಲಿಗೆ ದಾಲ್, ರೋಟಿ,(ಕರ್ನಾಟಕದಲ್ಲಿ ಬಹುಶಃ ರಾಗಿ ರೊಟ್ಟಿ, ಉಚ್ಚೆಳ್ಚಟ್ನಿ) ಮೊಳಕೆಕಾಳುಗಳಂಥ ಪೌಷ್ಠಿಕ ಆಹಾರ ಲಭ್ಯವಾಗುವಂತೆ ಕ್ರಮ ಕೈಗೊಳ್ಳವುದಾಗಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮುಚ್ಚಳಿಕೆ ಬರೆದುಕೊಟ್ಟಿದೆ. ಈ ಮೇಲೆ ತಿಳಿಸಿದ್ದಷ್ಟೇ ಅಲ್ಲದೆ ಮತ್ಯಾವುದಾದರೂ ಪೌಷ್ಠಿಕ ಆಹಾರಗಳ ಬಗ್ಗೆ ಮಾಹಿತಿ ಇದ್ದಲ್ಲಿ ಅದನ್ನು ದಯಮಾಡಿ ತಿಳಿಸಿ ಎಂದು ಸಕರ್ಾರ ಸಾರ್ವಜನಿಕರು, ಸಂಘಸಂಸ್ಥೆಗಳಲ್ಲಿ ಮನವಿ ಮಾಡಿಕೊಂಡಿದೆ.
ತೀರಾ ಇತ್ತೀಚಿನ ವರೆಗೆ ಕೇಂದ್ರದಲ್ಲಿ ಸೂಪರ್ಫಾಸ್ಟ್ ರೈಲು ಬಿಡುತ್ತಿದ್ದ ಮಮತಕ್ಕ, ಈಗ ಅದೇ ಸ್ಪೀಡ್ನಲ್ಲಿ ತನ್ನ ತವರಲ್ಲಿ ಆಡಳಿತ ಸುಧಾರಣೆ ಶುರು ಮಾಡಿದ್ದಾರೆ. ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವೆಸ್ಟ್ ಬೆಂಗಾಲ್ ಹೆಸರಿನಲ್ಲಿರುವ `ವೆಸ್ಟ್'ನ ಇತಿಹಾಸದ ಪುಟಗಳಿಗೆ ಸೇರಿಸಿ ನಮಗೆ `ಬೆಂಗಾಲ್' ಮಾತ್ರ ಸಾಕು ಎಂದು ಹೇಳಿ ವಿರೋಧಿ ಕಮ್ಯುನಿಸ್ಟರೂ ತಲೆಯಾಡಿಸುವಂತೆ ಮಾಡಿದ ದೀದಿ ಇದೀಗ ರಾತೋರಾತ್ರಿ ಗೂರ್ಖಾಗಳಿಗೆ ಸ್ವಾಯತ್ತ ಆಡಳಿತ ನಡೆಸಲು ಹೆಚ್ಚಿನ ಅಧಿಕಾರ ನೀಡಿ ರಾಜ್ಯಾದ್ಯಂತ `ಅಪ್ನಾ ಮೊಮ್ತಾದಿ(ಮಮತಾದೀದಿ) ಮಹಾನ್' ಆಗಿಬಿಟ್ಟಿದ್ದಾರೆ!
ಯೇ ದೋಸ್ತಿ ಹಮ್ ನಹೀ ಥೋಡೆಂಗೆ ಎನ್ನುತ್ತಾ ಗೆಳೆತನದ ಫೆವಿಕಾಲ್ ಅಂಟಿಸಿಕೊಂಡಿದ್ದ ಭಾರತೀಯ ಕ್ರಿಕೆಟ್ ತಂಡದ ಮಹೇಂದ್ರಸಿಂಗ್ ಧೋನಿ ಹಾಗೂ ಹರ್ಬಜನ್ಸಿಂಗ್ ಕೇವಲ ಒಂದು ಜಾಹಿರಾತಿನ ಕಾರಣದಿಂದಾಗಿ ನಾನೊಂದು ತೀರ ನೀನೊಂದು ತೀರ..ಆಗಿ ನಿಂತಿದ್ದಾರೆ. ಧೋನಿ ನೀಡುತ್ತಿರುವ ಮೆಕ್ಡೊವೆಲ್ನ ನಂ.1 ಪ್ಲಾಟಿನಂ ಸೋಡಾ ಜಾಹಿರಾತು ತಾವು ಪ್ರತಿನಿಧಿಸುತ್ತಿರುವ ರಾಯಲ್ಸ್ಟಾಗ್ ಜಾಹಿರಾತನ್ನು ಬಹಿರಂಗವಾಗಿ ಹೀಯಾಳಿಸಿದೆ ಎಂದು ಕ್ರಿಕೆಟ್ ತಂಡದ ಮಿಸ್ಟರ್ ಕಿರಿಕ್ ಎಂದೇ ಜನಜನಿತರಾಗಿರುವ ಹರ್ಬಜನ್, ಕಿಂಗ್ಫಿಶರ್ ಸಂಸ್ಥೆಯ ವಿಜಯ್ ಮಲ್ಯ ಹಾಗೂ ಇತರರಿಗೆ ನೊಟೀಸು ಕೊಟ್ಟಿದ್ದಾರಂತೆ! ಭಜ್ಜಿ ಗೆಣೆಕಾರ ಧೋನಿಗೆ ನೇರವಾಗಿ ನೊಟೀಸು ನೀಡದಿದ್ದರೂ ಇದು ವೃತ್ತಿ ಮತ್ಸರದ ಇನ್ನೊಂದು ರೂಪ ಎನ್ನುತ್ತಾರೆ ಇವರಿಬ್ಬರ ಆಪ್ತಮಿತ್ರರು..
ವಾರದ ಗುದ್ದು
ರಾಜ್ಯಸರ್ಕಾರ ಇಲ್ಲಿಯವರೆಗೆ ಅದೆಷ್ಟು ಸುಳ್ಳು ಪ್ರಮಾಣಪತ್ರಗಳನ್ನು ಕೊಟ್ಟಿದೆಯೋ! ಇವುಗಳನ್ನು ಆಧರಿಸಿ ನಾವು ಅದೆಷ್ಟು ತಪ್ಪು ಆದೇಶಗಳನ್ನು ನೀಡಿದ್ದೇವೋ ಆ ದೇವರಿಗೇ ಗೊತ್ತು!!
-ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಜೆ.ಎಸ್. ಕೆಹರ್
***********************************************************************
ಹಿಮಾಲಯಕ್ಕೆ ನಿತ್ಯಾನಂದ ಯಾತ್ರೆ
ಸೊಂಟಲಿನಿ.. ಅಲ್ಲಲ್ಲ ಕುಂಡಲಿನಿ ಯೋಗದ ಸಾಕ್ಷಾತ್ಕಾರವಾದ ನಂತರ ಮತ್ತೆ ಇನ್ಯಾವ ಸಿದ್ಧಿಗಾಗಿ `ಶ್ರೀ' ನಿತ್ಯಾನಂದಸ್ವಾಮಿ ಹಿಮಾಲಯಕ್ಕೆ ಹೊರಟಿದ್ದಾರೋ ಗೊತ್ತಿಲ್ಲ! ಗುರುಪೂಣರ್ಿಮೆಯ ದಿನದಂದು ಬೆಂಗಳೂರಿನ ಬಿಡದಿ ಬಳಿಯ ಆಶ್ರಮದಲ್ಲಿ ತಮ್ಮ ಭಕ್ತಾದಿಗಳಿಗೆಲ್ಲ ಕುಂಡಲಿನಿಯ ಸಾಕ್ಷಾತ್ಕಾರಗೊಳಿಸಿ ಅವರೆನ್ನೆಲ್ಲ ಕಪ್ಪೆ ಕುಪ್ಪಳಿಸುವ ಕುಣಿತದ ಮೂಲಕ ಧನ್ಯರಾಗಿಸಿದ್ದು ಮಾಧ್ಯಮಗಳಲ್ಲೆಲ್ಲ ಬಿಸಿಬಿಸಿ ಸುದ್ದಿ-ಚಚರ್ೆಗಳಿಗೆ ಆಹಾರವಾಗುತ್ತಿದ್ದಂತೇ ಮಾನಸ ಸರೋವರ ಯಾತ್ರೆಯ ನೆಪದಲ್ಲಿ ನಿತ್ಯಾನಂದರು ಹಿಮಾಲಯದತ್ತ ಮುಖ ಮಾಡಿದ್ದಾರೆ. ಡಿಸೆಂಬರ್ನಲ್ಲಿ ಮಾನಸ ಸರೋವರದಿಂದ ಹಿಂತಿರುಗಿದಾಗ ಭಕ್ತಾದಿಗಳಿಗೆ ಸೊಂಟಲಿನಿ ಸ್ಸಾರಿ ಕುಂಡಲಿನಿ ಭಾಗ-2ರ ಸಾಕ್ಷಾತ್ಕಾರ ಮಾಡಿಸುತ್ತಾರೋ ಏನೋ ಕಾದು ನೋಡಬೇಕು!!
************************************************
ಪಿಜ್ಜಾ ಬರ್ಗರ್ ಔಟ್
ದಾಲ್ ರೋಟಿ ಇನ್
ಶಾಲಾಕಾಲೇಜುಗಳ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ ಪಿಜ್ಜಾ ಬರ್ಗರ್ ಹಾವಳಿ ವಿಪರೀತವಾಗಿರುವುದು ಕೊನೆಗೂ ಕೇಂದ್ರ ಸಕರ್ಾರದ ಗಮನಕ್ಕೆ ಬಂದಿದ್ದು ಈ ಜಂಕ್ಫುಡ್ ಮಾರಾಟಕ್ಕೆ(ವಿದ್ಯಾ ಸಂಸ್ಥೆಗಳ ಬಳಿ) ಕಡಿವಾಣ ಹಾಕಿ ಅವುಗಳ ಬದಲಿಗೆ ದಾಲ್, ರೋಟಿ,(ಕರ್ನಾಟಕದಲ್ಲಿ ಬಹುಶಃ ರಾಗಿ ರೊಟ್ಟಿ, ಉಚ್ಚೆಳ್ಚಟ್ನಿ) ಮೊಳಕೆಕಾಳುಗಳಂಥ ಪೌಷ್ಠಿಕ ಆಹಾರ ಲಭ್ಯವಾಗುವಂತೆ ಕ್ರಮ ಕೈಗೊಳ್ಳವುದಾಗಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮುಚ್ಚಳಿಕೆ ಬರೆದುಕೊಟ್ಟಿದೆ. ಈ ಮೇಲೆ ತಿಳಿಸಿದ್ದಷ್ಟೇ ಅಲ್ಲದೆ ಮತ್ಯಾವುದಾದರೂ ಪೌಷ್ಠಿಕ ಆಹಾರಗಳ ಬಗ್ಗೆ ಮಾಹಿತಿ ಇದ್ದಲ್ಲಿ ಅದನ್ನು ದಯಮಾಡಿ ತಿಳಿಸಿ ಎಂದು ಸಕರ್ಾರ ಸಾರ್ವಜನಿಕರು, ಸಂಘಸಂಸ್ಥೆಗಳಲ್ಲಿ ಮನವಿ ಮಾಡಿಕೊಂಡಿದೆ.
ತೀರಾ ಇತ್ತೀಚಿನ ವರೆಗೆ ಕೇಂದ್ರದಲ್ಲಿ ಸೂಪರ್ಫಾಸ್ಟ್ ರೈಲು ಬಿಡುತ್ತಿದ್ದ ಮಮತಕ್ಕ, ಈಗ ಅದೇ ಸ್ಪೀಡ್ನಲ್ಲಿ ತನ್ನ ತವರಲ್ಲಿ ಆಡಳಿತ ಸುಧಾರಣೆ ಶುರು ಮಾಡಿದ್ದಾರೆ. ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವೆಸ್ಟ್ ಬೆಂಗಾಲ್ ಹೆಸರಿನಲ್ಲಿರುವ `ವೆಸ್ಟ್'ನ ಇತಿಹಾಸದ ಪುಟಗಳಿಗೆ ಸೇರಿಸಿ ನಮಗೆ `ಬೆಂಗಾಲ್' ಮಾತ್ರ ಸಾಕು ಎಂದು ಹೇಳಿ ವಿರೋಧಿ ಕಮ್ಯುನಿಸ್ಟರೂ ತಲೆಯಾಡಿಸುವಂತೆ ಮಾಡಿದ ದೀದಿ ಇದೀಗ ರಾತೋರಾತ್ರಿ ಗೂರ್ಖಾಗಳಿಗೆ ಸ್ವಾಯತ್ತ ಆಡಳಿತ ನಡೆಸಲು ಹೆಚ್ಚಿನ ಅಧಿಕಾರ ನೀಡಿ ರಾಜ್ಯಾದ್ಯಂತ `ಅಪ್ನಾ ಮೊಮ್ತಾದಿ(ಮಮತಾದೀದಿ) ಮಹಾನ್' ಆಗಿಬಿಟ್ಟಿದ್ದಾರೆ!
ದೋಸ್ತಿ ಎಲ್ಲಿಯವರೆಗೆ?
ಯೇ ದೋಸ್ತಿ ಹಮ್ ನಹೀ ಥೋಡೆಂಗೆ ಎನ್ನುತ್ತಾ ಗೆಳೆತನದ ಫೆವಿಕಾಲ್ ಅಂಟಿಸಿಕೊಂಡಿದ್ದ ಭಾರತೀಯ ಕ್ರಿಕೆಟ್ ತಂಡದ ಮಹೇಂದ್ರಸಿಂಗ್ ಧೋನಿ ಹಾಗೂ ಹರ್ಬಜನ್ಸಿಂಗ್ ಕೇವಲ ಒಂದು ಜಾಹಿರಾತಿನ ಕಾರಣದಿಂದಾಗಿ ನಾನೊಂದು ತೀರ ನೀನೊಂದು ತೀರ..ಆಗಿ ನಿಂತಿದ್ದಾರೆ. ಧೋನಿ ನೀಡುತ್ತಿರುವ ಮೆಕ್ಡೊವೆಲ್ನ ನಂ.1 ಪ್ಲಾಟಿನಂ ಸೋಡಾ ಜಾಹಿರಾತು ತಾವು ಪ್ರತಿನಿಧಿಸುತ್ತಿರುವ ರಾಯಲ್ಸ್ಟಾಗ್ ಜಾಹಿರಾತನ್ನು ಬಹಿರಂಗವಾಗಿ ಹೀಯಾಳಿಸಿದೆ ಎಂದು ಕ್ರಿಕೆಟ್ ತಂಡದ ಮಿಸ್ಟರ್ ಕಿರಿಕ್ ಎಂದೇ ಜನಜನಿತರಾಗಿರುವ ಹರ್ಬಜನ್, ಕಿಂಗ್ಫಿಶರ್ ಸಂಸ್ಥೆಯ ವಿಜಯ್ ಮಲ್ಯ ಹಾಗೂ ಇತರರಿಗೆ ನೊಟೀಸು ಕೊಟ್ಟಿದ್ದಾರಂತೆ! ಭಜ್ಜಿ ಗೆಣೆಕಾರ ಧೋನಿಗೆ ನೇರವಾಗಿ ನೊಟೀಸು ನೀಡದಿದ್ದರೂ ಇದು ವೃತ್ತಿ ಮತ್ಸರದ ಇನ್ನೊಂದು ರೂಪ ಎನ್ನುತ್ತಾರೆ ಇವರಿಬ್ಬರ ಆಪ್ತಮಿತ್ರರು..
Subscribe to:
Posts (Atom)
















































